ಉದಯವಾಣಿ ಸಂದರ್ಶನ; ಭವ್ಯ ಮಂದಿರ ನಿರ್ಮಿಸುವುದೇ ಮುಖ್ಯ ಗುರಿ, ಉಳಿದೆಲ್ಲವೂ ಗೌಣ

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

Team Udayavani, Aug 5, 2020, 10:19 AM IST

ಉದಯವಾಣಿ ಸಂದರ್ಶನ; ಭವ್ಯ ಮಂದಿರ ನಿರ್ಮಿಸುವುದೇ ಮುಖ್ಯ ಗುರಿ, ಉಳಿದೆಲ್ಲವೂ ಗೌಣ

ಜೀವನದ ಕೊನೆಯವರೆಗೂ ಹಿಂದೂ ಸಂಘಟನೆಗಳಲ್ಲಿ ಮತ್ತು 1980ರ ದಶಕದ ಬಳಿಕ ಶ್ರೀರಾಮಜನ್ಮಭೂಮಿ ಮುಕ್ತಿ ಆಂದೋಲನದಲ್ಲಿ ಸಕ್ರಿಯವಾಗಿದ್ದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಈಗ ಬದುಕಿದ್ದರೆ ಕೇಂದ್ರ ಸರಕಾರ ರೂಪಿಸಿದ ಅಯೋಧ್ಯಾ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿ ಇರುತ್ತಿದ್ದರು. ಈಗ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಟ್ರಸ್ಟಿಯಾಗಿ ನಿಯುಕ್ತಿಗೊಂಡಿದ್ದಾರೆ. ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಮಹತ್ವದ ಜವಾಬ್ದಾರಿ ವಹಿಸಿರುವ ಶ್ರೀ ವಿಶ್ವಪ್ರಸನ್ನತೀರ್ಥರನ್ನು ರಾಮ ಮಂದಿರದ ಭೂಮಿಪೂಜೆಯ ಸಂದರ್ಭದಲ್ಲಿ “ಉದಯವಾಣಿ’ ಸಂದರ್ಶಿಸಿತು.

ದೇಶದ ಬಹುದೊಡ್ಡ ಧಾರ್ಮಿಕ ಕ್ಷೇತ್ರಕ್ಕೆ ತಾವು ಧರ್ಮದರ್ಶಿಗಳಾಗಿ ನಿಯುಕ್ತಿಗೊಂಡ ಬಗೆಗೆ ಏನು ಅನಿಸುತ್ತಿದೆ?
ನಮ್ಮ ಗುರುಗಳು ಪಟ್ಟ ಪರಿಶ್ರಮದ ಫ‌ಲವನ್ನು ನಾವು ಅನುಭವಿಸುತ್ತಿದ್ದೇವೆ. ನಮಗೆ ಬಂದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಪ್ರಯತ್ನಿಸುತ್ತೇವೆ. ಇದು ರಾಮ ದೇವರು ನಮಗೆ ಕೊಟ್ಟ ಅವಕಾಶ ಎಂದು ಭಾವಿಸುತ್ತೇವೆ.

ಪ್ರಧಾನಿಯವರು ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸುವಾಗಿನ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಾ?
ನಾವು ನೀಲಾವರ ಗೋಶಾಲೆಯಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವುದರಿಂದ ಪ್ರತ್ಯಕ್ಷವಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ. ಸಿಗ್ನಲ್‌ ಸಿಕ್ಕಿದರೆ ಅದನ್ನು ವೀಕ್ಷಿಸಬಹುದು. ಇದಕ್ಕಾಗಿಯೇ ನಾವು ಇರುವಲ್ಲಿ ಲಕ್ಷ ತುಳಸೀ ಅರ್ಚನೆ, ಭಜನೆ, ಪಾರಾಯಣಗಳನ್ನು ಆಯೋಜಿಸಿದ್ದೇವೆ.

ಮಂದಿರ ನಿರ್ಮಾಣದ ವೆಚ್ಚ, ಈಗಿರುವ ನಿಧಿ ಇತ್ಯಾದಿಗಳ ಕುರಿತು…
ರಾಮಮಂದಿರ ನಿರ್ಮಾಣಕ್ಕೆ ಸುಮಾರು 300 ಕೋ.ರೂ. ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಇಡೀ ಪ್ರದೇಶವನ್ನು 1,000 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಬೇಕೆಂಬ ಇರಾದೆ ಇದೆ. ಈಗ ಸುಮಾರು 4 ಕೋ.ರೂ. ಇದೆ.

ಇಷ್ಟೊಂದು ಮೊತ್ತ ಸಂಗ್ರಹವಾಗಬಹುದೆ?
ಮಂದಿರ ನಿರ್ಮಿಸಲು ಸಿರಿವಂತರು ದೊಡ್ಡ ಮೊತ್ತ ಕೊಡಬಹುದು, ಕಾರ್ಪೊರೇಟ್‌ ಸಿಎಸ್‌ಆರ್‌ ನಿಧಿಯಿಂದ ದೇಣಿಗೆ ಬರಬಹುದು. ಸಾಮಾನ್ಯ ಭಕ್ತರಿಂದಲೂ ದೇಣಿಗೆ ಸಂಗ್ರಹಿಸುವ ಮೂಲಕ ಎಲ್ಲರೂ ಈ ಮಹಾನ್‌ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂಬುದು ಟ್ರಸ್ಟ್‌ ಇರಾದೆ. ಇದಕ್ಕಾಗಿಯೇ ಒಬ್ಬರಿಂದ ತಲಾ 10 ರೂ., ಪ್ರತಿ ಮನೆಯಿಂದ 100 ರೂ. ಸಂಗ್ರಹಿಸುವ ಗುರಿ ಇದೆ.

 1980-90ರ ದಶಕದಲ್ಲಿ ಕರಾವಳಿ ಭಾಗ ಅಂತೆಯೇ ಕರ್ನಾಟಕದಿಂದ ರಾಮಶಿಲಾ ಪೂಜನ ನಡೆಸಿ ಇಟ್ಟಿಗೆಗಳನ್ನು ಕೊಂಡೊಯ್ಯಲಾಗಿತ್ತು. ಅವೆಲ್ಲವೂ ಈಗ ಶಿಥಿಲವಾಗಿರಬಹುದಲ್ಲವೇ?
ಅವೆಲ್ಲವನ್ನೂ ಶಿಸ್ತುಬದ್ಧವಾಗಿ ಇರಿಸಲಾಗಿದೆ. ಒಂದು ಬೃಹತ್‌ ಸಮುಚ್ಚಯ ನಿರ್ಮಾಣಗೊಳ್ಳುವಾಗ ಎಲ್ಲ ಸಾಮಗ್ರಿಗಳೂ ಅಗತ್ಯ ಬೀಳುತ್ತವೆ. ಅಂಥ ಸಾಮಗ್ರಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುವುದು.

ಮಂದಿರ ನಿರ್ಮಾಣ ಕಾರ್ಯದಲ್ಲಿ ನೀವು ಹೇಗೆ ತೊಡಗಿಸಿಕೊಳ್ಳಬೇಕೆಂದಿದ್ದೀರಿ?
ಪ್ರಬೋಧಿನಿ ಏಕಾದಶಿಯಿಂದ ಗೀತಾಜಯಂತಿ ಏಕಾದಶಿವರೆಗೆ (ನ. 15ರಿಂದ ಡಿ. 15) ಧನ ಸಂಗ್ರಹ ಆಂದೋಲನವನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಆ ಸಂದರ್ಭದಲ್ಲಿ ವಿವಿಧೆಡೆ ಸಂಚಾರ ನಡೆಸಿ ರಾಷ್ಟ್ರಮಂದಿರವಾಗಲಿರುವ ರಾಮಮಂದಿರ ನಿರ್ಮಾಣದ ಮಹತ್ವವನ್ನು ತಿಳಿಸುತ್ತೇವೆ.

ಭೂಮಿಪೂಜೆ ದಿನ, ಮುಹೂರ್ತ ವಿಷಯದ ಚರ್ಚೆ ಬಗ್ಗೆ ಏನು ಹೇಳುತ್ತೀರಿ?
ಆ. 5ರಂದು ಭೂಮಿಪೂಜೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇನ್ನು ಇದರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಇಡೀ ರಾಷ್ಟ್ರದ ಗುರಿ ರಾಮಮಂದಿರ ನಿರ್ಮಾಣವಾಗಬೇಕೆನ್ನುವುದು. ಬಾಕಿ ವಿಷಯಗಳೆಲ್ಲವೂ ಗೌಣ.

ಅಯೋಧ್ಯೆಯಲ್ಲಿರುವ ಪೇಜಾವರ ಮಠದ ಶಾಖಾ ಮಠವನ್ನು ಅಭಿವೃದ್ಧಿಪಡಿಸುವ ಇರಾದೆ ಇದೆಯೆ?
ಸದ್ಯ ಇಲ್ಲ. ಮಂದಿರ ನಿರ್ಮಾಣವಾಗುವುದೇ ನಮ್ಮ ಮುಂದಿರುವ ಮುಖ್ಯ ವಿಷಯ. ಸದ್ಯ ಅಲ್ಲಿ ಛತ್ರವೊಂದು ಇದೆ. ಕಾಲಕ್ರಮೇಣ ಅಗತ್ಯಕ್ಕೆ ತಕ್ಕಂತೆ ನಿರ್ಮಿಸಲೂಬಹುದು.

 1992ರ ಡಿ. 7ರ ಮುಂಜಾನೆ ರಾಮಲಲ್ಲಾನ ಮೂರ್ತಿಯನ್ನು ಆಗಿನ ಆಕಸ್ಮಿಕ ಘಟನೆಯಿಂದಾಗಿ ಪ್ರತಿಷ್ಠಾಪನೆ ಮಾಡಿದವರು ನಿಮ್ಮ ಗುರುಗಳು. ಮುಂದೆ ನಿಮಗೆ ಪ್ರತಿಷ್ಠಾಪನೆ ಮಾಡುವ ಅವಕಾಶ ಸಿಗಲಿದೆಯೆ?
ನಾವು ಈ ಸಂಬಂಧ ಹಕ್ಕು ಮಂಡಿಸುವುದಿಲ್ಲ. ಅವಕಾಶ ಸಿಕ್ಕಿದರೆ ದೇವರ ಸೇವೆ ಎಂದು ಪರಿಗಣಿಸುತ್ತೇವೆಯಷ್ಟೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.