BBK11: ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬರುವುದು ಯಾರು?


Team Udayavani, Oct 27, 2024, 11:29 PM IST

BBK11: ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಬರುವುದು ಯಾರು?

ಬೆಂಗಳೂರು: ಬಿಗ್ ಬಾಸ್ ಮನೆಯ ನಾಲ್ಕನೇ ವಾರದ ಆಟದಲ್ಲಿ ‌ಒಬ್ಬ ಸ್ಪರ್ಧಿ ಮನೆಯಿಂದ ಅಚೆ ಬಂದಿದ್ದಾರೆ.

ನಿನ್ನೆ ಯೋಗರಾಜ್ ಭಟ್ ಅವರು ಪಂಚಾಯ್ತಿ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸ್ಪರ್ಧಿಗಳಿಗೆ ವ್ಯಕ್ತಿತ್ವದ ಪಾಠವನ್ನು ಮಾಡಿದ್ದಾರೆ. ಸ್ಪರ್ಧಿಗಳ ಮೇಲೆ ಬಂದಿರುವ ಆರೋಪಗಳನ್ನು ಓದಿ ಅವರ ಬಾಯಿಯಿಂದಲೇ ತಮ್ಮ ತಪ್ಪುಗಳ ಬಗ್ಗೆ ಮಾತನಾಡಿಸಿದ್ದಾರೆ.

ಗೌತಮಿ ಅವರ ಮೇಲೆ ಪಾಸಿಟಿವಿಟಿ ಹೇಳಿಕೊಂಡು ಎಲ್ಲರಲ್ಲೂ ನೆಗೆಟಿವ್ ಹುಡುಕಿ ಮುಖವಾಡ ಹಾಕಿಕೊಂಡಿದ್ದಾರೆ. ನಗುವಿನ ಹಿಂದೆ ಫೇಕ್ ನೆಸ್ ಇದೆ ಎನ್ನುವ ಆರೋಪ ಕೇಳಿ ಬಂದಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೌತಮಿ, ಅವರ ಬಗ್ಗೆ ನನಗಿದ್ದ ಮನಸ್ತಾಪದ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ. ಮನೆಯವರು ಅವರ‌ ನಗುವಿನ  ಹಿಂದೆ ಫೇಕ್ ನೆಸ್ ಇಲ್ಲ ಎಂದಿದ್ದಾರೆ.

ಸುದೀಪ್ ತಾಯಿ ನಿಧನದ ಸುದ್ದಿಯನ್ನು ಬಿಗ್ ಬಾಸ್ ಮನೆಗೆ ತಿಳಿಸಿದ ಯೋಗರಾಜ್ ಭಟ್:

ಸುದೀಪ್ ಅವರ ತಾಯಿಯ ನಿಧನದ ಸುದ್ದಿಯನ್ನು ಯೋಗರಾಜ್ ಭಟ್ ಅವರು ಬಿಗ್ ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಎಷ್ಟೇ ಕಷ್ಟ ಬಂದರೂ ಜವಾಬ್ದಾರಿ ಬಿಡದೆ ಅವರು ಶೋ ನಡೆಸಿಕೊಟ್ಟಿದ್ದಾರೆ ಎಂದು ಮನೆಯವರಿಗೆ ತಿಳಿಸಿದ್ದಾರೆ.

ಹೋಗಬೇಕು ಹೋಗಬೇಕು ಅಂಥ ಇದ್ರು, ಕಾರ್ಯಕ್ರಮವನ್ನು ಮುಗಿಸಿಯೇ ಅವರು ಮನೆಗೆ ಹೋಗಿ, ಆಸ್ಪತ್ರೆಗೆ ಹೋಗಿದ್ದರು. ಆದರೆ ಅಷ್ಟೋತ್ತಿಗೆ ಅವರು ಈ ಜಗತ್ತಿನಲ್ಲಿ ಇರಲಿಲ್ಲ ಎಂದಿದ್ದಾರೆ.
ಈ ಮಾತನ್ನು ಕೇಳಿದ ಮನೆಯವರು ಕಣ್ಣೀರಿಟ್ಟಿದ್ದಾರೆ. ಎಲ್ಲರೂ ಒಂದು ನಿಮಿಷ ಮೌನಾಚರಣೆ ಸಲ್ಲಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಸೃಜನ್ ಎಂಟ್ರಿ..
ಸುದೀಪ್ ಅನುಪಸ್ಥಿತಿಯಲ್ಲಿ ಭಾನುವಾರದ ಸಂಚಿಕೆ ನಡೆಸಲು ಸೃಜನ್ ಲೋಕೇಶ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಆಯಾ ಸ್ಪರ್ಧಿಗಳನ್ನು ಕರೆದು ಇತರೆ ಸ್ಪರ್ಧಿಗಳನ್ನು ಪರಿಚಯ ಮಾಡಲು ಹೇಳಿದ್ದಾರೆ.

ಬಿಗ್ ಬಾಸ್ ಅನ್ನೋದು ಒಂದು ಆಟ ಮಾತ್ರವಲ್ಲ, ನೀವು ಹೇಗೆ ವರ್ತಿಸುತ್ತೀರಿ ಅನ್ನೋದು ಬಿಗ್ ಬಾಸ್. ಜನ ಇದನ್ನು ನೋಡುತ್ತಿರುತ್ತಾರೆ ಎಂದು ಸೃಜನ್ ಕಿವಿ ಮಾತನ್ನು ಹೇಳಿದ್ದಾರೆ.

ನಾಮಿನೇಟ್ ಪಾರಾದವರು ಯಾರೆಲ್ಲ..?
ನಾಮಿನೇಟ್ ಆದ 9 ಜನರ ಪೈಕಿ ಮೊದಲು ಭವ್ಯ, ಸುರೇಶ್ ಅವರು ಎಲಿಮಿನೇಷನ್ ನಿಂದ ಪಾರಾಗಿದ್ದಾರೆ. ಆ ಬಳಿಕ ಲಡ್ಡು ತಿನ್ನುವ ಟಾಸ್ಕ್  ಆಡಿ ಶಿಶಿರ್ ಹಾಗೂ ಚೈತ್ರಾ ಸೇವ್ ಆಗಿದ್ದಾರೆ.

‘ಟನ್ ಟನಾ ಟನ್’ ಹಾಗೂ ಬಲೂನ್ ಒಡೆಯುವ ಚಟುವಟಿಕೆಯನ್ನು ಆಡಿ ಮಂಜು, ಗೌತಮಿ ಅವರು ಸೇವ್ ಆಗಿದ್ದಾರೆ. ಇದಾದ ಬಳಿಕ ಮಾನಸ ಅವರು ಸೇವ್ ಆಗಿದ್ದಾರೆ.

ಭವ್ಯಾ, ಶಿಶಿರ್, ತಿವಿಕ್ರಮ್ ಮೈಂಡ್ ಗೇಮ್ ಆಡುತ್ತಿದ್ದಾರೆ ಎಂದು ಮೋಕ್ಷಿತಾ ಆರೋಪಿಸಿದ್ದಾರೆ.

ಮನೆಯಿಂದ ಆಚೆ ಹೋದವರು ಯಾರು..?
9 ಮಂದಿಯಲ್ಲಿ ಕೊನೆಯದಾಗಿ ಹಂಸ ಹಾಗೂ ಮೋಕ್ಷಿತಾ ಅವರು ಉಳಿದಿದ್ದು, ಬಿಗ್ ಬಾಸ್ ಮನೆಗೆ ಬಂದ ಎರಡು ಕಾರುಗಳಲ್ಲಿ ಇಬ್ಬರು ಕೂತಿದ್ದಾರೆ. ಕಾರುಗಳು ಬಿಗ್ ಬಾಸ್ ಮನೆಯ ಅಂಗಳದಲ್ಲಿ ಎರಡು ಮೂರು ರೌಂಡ್ ಸುತ್ತಿ ಆ ಬಳಿಕ ಹಂಸ ಅವರಿದ್ದ ಕಾರು ಮನೆಯಿಂದ ಹೊರ ಹೋಗಿದ್ದಾರೆ. ಆ ಮೂಲಕ ಹಂಸ ಬಿಗ್ ಬಾಸ್ ಪಯಣವನ್ನು ಮುಗಿಸಿದ್ದಾರೆ ಎನ್ನಲಾಗಿದೆ.

ಆದರೆ ಭಾನುವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಸೋಮವಾರ ಪ್ರಸಾರ ಮಾಡಲಾಗುತ್ತದೆ.

ಹಂಸ ಅವರು ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಅವರು ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರ ಒಂದಷ್ಟು ನಿರ್ಧಾರಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಜಗದೀಶ್ ಅವರೊಂದಿಗೆ ಕೆಲ ಸಮಯ ಆತ್ಮೀಯವಾಗಿದ್ದರು. ಜಗದೀಶ್ ಅವರು ಹಂಸ ಮೇಲೆ ಅವಹೇಳನಕಾರಿ ಪದ ಬಳಸಿದಾಗ ಹಂಸ ಆಕ್ರೋಶ ವ್ಯಕ್ತಪಡಿಸಿದ್ದರು.

ಹಂಸ ಅವರು ಮುಂದಿನ ವಾರಕ್ಕೆ ನೇರವಾಗಿ ಹನುಮಂತು ಅವರನ್ನು ನಾಮಿನೇಟ್ ಮಾಡಿದ್ದಾರೆ.

 

ಟಾಪ್ ನ್ಯೂಸ್

25-uv-fusion

Phone Usage: ಅತಿಯಾದ ಫೋನ್‌ ಬಳಕೆ ಸ್ಮಾರ್ಟ್‌ ನಡೆಯಲ್ಲ!

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

Belagavai: ಆಟೋಗೆ ಕಾರು ಟಚ್ ಆಗಿದ್ದಕ್ಕೆ ಮಾಜಿ ಶಾಸಕರ ಹ*ತ್ಯೆ!

Belagavai: ಆಟೋಗೆ ಕಾರು ಟಚ್ ಆಗಿದ್ದಕ್ಕೆ ಮಾಜಿ ಶಾಸಕರ ಹ*ತ್ಯೆ!

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹತ್ಯೆ

Mexico:ಯುರೋಪ್‌ ನ Most ವಾಂಟೆಡ್‌ ಕ್ರಿ*ಮಿನಲ್‌, ಡ್ರ*ಗ್‌ ಕಿಂಗ್‌ ಪಿನ್‌ ಮಾರ್ಕೋ ಹ*ತ್ಯೆ

Mangaluru: ನಾವು ಧರ್ಮ ವಿರೋಧಿ‌‌ಯಲ್ಲ, ಆದರೆ…: ಪ್ರಕಾಶ್‌ ರಾಜ್

Mangaluru: ನಾವು ಧರ್ಮ ವಿರೋಧಿ‌‌ಯಲ್ಲ, ಆದರೆ…: ಪ್ರಕಾಶ್‌ ರಾಜ್ ಹೇಳಿದ್ದೇನು?

ಶಾಲೆಯಲ್ಲೇ ನಿದ್ರೆಗೆ ಜಾರಿದ ವಿದ್ಯಾರ್ಥಿ… ಶಾಲೆಗೆ ಬೀಗ ಹಾಕಿ ಮನೆಗೆ ತೆರಳಿದ ಶಿಕ್ಷಕ

ತರಗತಿಯಲ್ಲೇ ನಿದ್ರೆಗೆ ಜಾರಿದ ವಿದ್ಯಾರ್ಥಿ… ಶಾಲೆಗೆ ಬೀಗ ಹಾಕಿ ಮನೆಗೆ ತೆರಳಿದ ಶಿಕ್ಷಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Yogi spoke about Sidlingu 2 Movie

Sidlingu 2 Movie: ಕಾಮನ್‌ಮ್ಯಾನ್‌ ದುನಿಯಾದಲ್ಲಿ ಸಿದ್ಲಿಂಗು ಕನಸು

Raju James Bond movie

Raju James Bond: ರಾಜು ಮೇಲೆ ಗುರು ಕಣ್ಣು

Pruthvi Amber spoke about his Bhuvanam Gaganam movie

Bhuvanam Gaganam: ನಗ್ತಾ ನಗ್ತಾ ಅಳಿಸ್ತೀನಿ…:  ಪೃಥ್ವಿ ನಿರೀಕ್ಷೆ

Sandalwood: ʼಇಂಟರ್‌ವಲ್ʼ ನಲ್ಲಿ ಹೊಸಬರ ತುಂಟಾಟ: ಮಾ.7ಕ್ಕೆ ಚಿತ್ರ ರಿಲೀಸ್

Sandalwood: ʼಇಂಟರ್‌ವಲ್ʼ ನಲ್ಲಿ ಹೊಸಬರ ತುಂಟಾಟ: ಮಾ.7ಕ್ಕೆ ಚಿತ್ರ ರಿಲೀಸ್

MUST WATCH

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

ಹೊಸ ಸೇರ್ಪಡೆ

29-uv-fusion

UV Fusion: ಕೂಡಿ ಬಾಳಿದರೆ ಸ್ವರ್ಗ ಸುಖ

28-uv-fusion

UV Fusion: ಶ್ರೇಷ್ಠತೆಗೆ ಕಾಲ್ಪನಿಕ ಆಲೋಚನೆಯ ನಂಟು

27-uv-fusion

UV Fusion: ಸೋತು ಗೆಲ್ಲುವುದೇ ಜೀವನ

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

26-kmc

Manipal ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ದಿನ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.