ಯೋಗಿ ದುನಿಯಾದಲ್ಲಿ ಒಂದು ಸುತ್ತು!
Team Udayavani, Oct 9, 2017, 9:00 PM IST
“ಲೂಸ್ ಮಾದ’ ಯೋಗಿ ಈಗ ಮದುವೆಯ ಮೂಡ್ನಲ್ಲಿದ್ದಾರೆ. ನವೆಂಬರ್ 2 ರಂದು ಅವರ ಗೆಳತಿ ಸಾಹಿತ್ಯ ಅವರ ಕೈ ಹಿಡಿಯಲಿರುವ ಯೋಗಿ, ಈಗಾಗಲೇ ಮದುವೆಯ ಆಹ್ವಾನ ಪತ್ರಿಕೆ ಹಂಚುವ ಉತ್ಸಾಹದಲ್ಲಿದ್ದಾರೆ. ಇದರ ಬೆನ್ನಲ್ಲೇ ಯೋಗಿ ಹೊಸ ಚಿತ್ರಗಳನ್ನೂ ಒಪ್ಪಿದ್ದಾರೆ. ಸದ್ದಿಲ್ಲದೆಯೇ ಆ ಚಿತ್ರದ ಚಿತ್ರೀಕರಣದಲ್ಲೂ ಬಿಜಿಯಾಗಿದ್ದಾರೆ. ಇನ್ನು, ಅವರು ಅಭಿನಯದ “ದುನಿಯಾ 2′ ಚಿತ್ರದ ಶೀರ್ಷಿಕೆಗೆ ಅಂಟಿಕೊಂಡಿದ್ದ ಗೊಂದಲಕ್ಕೆ ಈಗ ತೆರೆಬಿದ್ದಿದೆ.
ಕೊನೆಗೂ ಹೊಸದೊಂದು ಶೀರ್ಷಿಕೆ ಇಟ್ಟು, ಬಿಡುಗಡೆ ಮಾಡಲು ಮುಂದಾಗಿದ್ದಾರೆ ಯೋಗಿ. ಹೌದು, “ದುನಿಯಾ 2′ ಚಿತ್ರದ ಶೀರ್ಷಿಕೆಯ ಗೊಂದಲ ನಿವಾರಣೆಯಾಗಿದೆ. ಆ ಚಿತ್ರವೀಗ, “ಯೋಗಿ ದುನಿಯಾ’ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರಲ್ಲೇ ಚಿತ್ರ ರಿಲೀಸ್ ಆಗಲಿದೆ ಎಂದು ವಿವರ ಕೊಡುತ್ತಾರೆ ಯೋಗಿ. ಇದರೊಂದಿಗೆ ಯೋಗಿ ಈಗಾಗಲೇ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಲಂಬೋದರ’ ಎಂದು ನಾಮಕರಣ ಮಾಡಲಾಗಿದೆ.
ಚಿತ್ರಕ್ಕೆ “ಬಸವನಗುಡಿ, ಬೆಂಗಳೂರು’ ಎಂಬ ಅಡಿಬರಹವಿದೆ. ಕೃಷ್ಣರಾಜ್ ಈ ಚಿತ್ರದ ನಿರ್ದೇಶಕರು. ವಿಶ್ವೇಶ್ವರ್ ಹಾಗೂ ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಎಂಟು ದಿನಗಳ ಕಾಲ ಚಿತ್ರೀಕರಣವನ್ನೂ ಮುಗಿಸಿದ್ದಾರೆ ಯೋಗಿ. “ಲಂಬೋದರ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಈ ಹಿಂದೆ ಮೂಡಿಬಂದ “ಸಿದ್ಲಿಂಗು’ ಜಾನರ್ನ ಸ್ಟೋರಿ ಇಲ್ಲಿದೆ. ಕೊಂಚ ವಿಭಿನ್ನ ಪ್ರಯತ್ನ ಎನ್ನಬಹುದು ಎಂಬುದು ಯೋಗಿ ಮಾತು.
ಅರವಿಂದ್ ಕಶ್ಯಪ್ ಕ್ಯಾಮೆರಾ ಹಿಡಿದರೆ, ಕಾರ್ತಿಕ್ ಶರ್ಮ ಸಂಗೀತವಿದೆ. ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಧರ್ಮಣ್ಣ ಇತರರು ನಟಿಸುತ್ತಿದ್ದಾರೆ. ಯೋಗಿ ಇಲ್ಲಿ ನಾಯಕರಾದರೆ, ಅವರಿಗೆ ಆಕಾಂಕ್ಷ ನಾಯಕಿಯಾಗಿ ಕಾಣಿಸಿಕಕೊಳ್ಳುತ್ತಿದ್ದಾರೆ. ಹೊಸ ತಂಡ, ಹೊಸತನದ ಕಥೆಯೊಂದಿಗೆ ಚಿತ್ರ ಶುರುಮಾಡಿದೆ. ಸದ್ಯಕ್ಕೆ ಮದುವೆಯ ಓಡಾಟದಲ್ಲಿ ಬಿಜಿಯಾಗಿರುವ ಯೋಗಿ, ತಮ್ಮ ಮದುವೆ ಬಳಿಕ “ಯೋಗಿ ದುನಿಯಾ’ ಚಿತ್ರವನ್ನು ರಿಲೀಸ್ ಮಾಡಲಿದ್ದಾರಂತೆ. ಅದಾದ ಬಳಿಕ ಇನ್ನೂ ಎರಡು ಕಥೆಗಳನ್ನು ಒಪ್ಪಿದ್ದು, ಆ ಕುರಿತು ಮಾತುಕತೆ ನಡೆಯುತ್ತಿದೆ.
ಹೊಸ ಹುಡುಗ ಶಿವು ಎಂಬುವವರು, ಪಕ್ಕಾ ಕಮರ್ಷಿಯಲ್ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಅದಕ್ಕೆ ಶಿವಮೊಗ್ಗ ಮೂಲದವರು ನಿರ್ಮಾಪಕರು. ಅದು ಯೋಗಿ ಅವರ ವೃತ್ತಿ ಜೀವನದಲ್ಲಿ ಬೇರೆ ರೀತಿಯ ಚಿತ್ರವಾಗಲಿದೆಯಂತೆ. ಈ ನಡುವೆ ನವೆಂಬರ್ 2 ರಂದು ನಡೆಯಲಿರುವ ಅವರ ವಿವಾಹಕ್ಕೆ ಅಭಿಮಾನಿಗಳಿಗೂ ಆಹ್ವಾನ ಇಟ್ಟಿದ್ದಾರೆ. ಎಲ್ಲರೂ ಬರಬಹುದು. ಎಲ್ಲರಿಗೂ ಒಂದೇ ರೀತಿಯ ವ್ಯವಸ್ಥೆ ಇರಲಿದೆ. ಯಾವ ವಿಷಯದಲ್ಲೂ ಅಭಿಮಾನಿಗಳನ್ನು ಕಡೆಗಣಿಸುವುದಿಲ್ಲ ಎಂಬುದು ಯೋಗಿ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್ ಅರವಿಂದ್
Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್ವುಡ್ನ ಪಾರ್ಟ್-2 ಕ್ರೇಜ್
Upendra Movie: ರೀ ರಿಲೀಸ್ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ
Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್ ರೋಡ್ʼ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
leopard: ಮೂಲ್ಕಿ ಕೊಯ್ನಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?
BJP Meeting: ದಾವಣಗೆರೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಇಂದು ಮಹತ್ವದ ಸಭೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.