ನಿರ್ದೇಶಕರು-ನಿರ್ಮಾಪಕರ ಬಗ್ಗೆ ಅಣ್ಣಾವ್ರು ನುಡಿದ ಮುತ್ತಿನಂತ ಮಾತುಗಳ ವಿಡಿಯೋ ವೈರಲ್


Team Udayavani, Jul 21, 2021, 5:34 PM IST

Untitled-4

ಬೆಂಗಳೂರು:ವರನಟ ಡಾ.ರಾಜಕುಮಾರ್ ಅವರು ಅಭಿನಯದಿಂದ ಎಷ್ಟು ಹೆಸರು ಮಾಡಿದ್ದರೋ ಅಷ್ಟೇ ಹೆಸರು ಅವರ ವ್ಯಕ್ತಿತ್ವದಿಂದ ಗಳಿಸಿಕೊಂಡಿದ್ದರು.

ಬದುಕಿನುದ್ದಕ್ಕೂ ಆದರ್ಶ-ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದ ರಾಜಕುಮಾರ್ ಎಂದೂ ಕೂಡ ನಯ-ವಿನಯ ಮರೆಯಲಿಲ್ಲ. ತಮಗಿಂತ ಚಿಕ್ಕವರಿಗೂ ಗೌರವ ನೀಡುತ್ತಿದ್ದ ನಟಸಾರ್ವಭೌಮನ ಸರಳತೆ ಎಲ್ಲರಿಗೂ ಮಾದರಿಯಾಗಬೇಕು ಎನ್ನುವ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಇದೀಗ ರಾಜಕುಮಾರ್ ಅವರು ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರ ಕುರಿತು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ಏನಿದೆ ?  

ನಿಮಗಿಂತ ವಯಸ್ಸಿನಲ್ಲಿ ಕಿರಿಯರು ಉದಾಹರಣೆಗೆ ಶಂಕರ್ ನಾಗ್ ಹಾಗೂ ನಾಗಾಭರಣ ಅವರಂತವರು ನಿಮಗೆ ನಿರ್ದೇಶನ ಮಾಡುತ್ತಿದ್ದ ವೇಳೆ ನಿಮಗೆ ಏನು ಎನ್ನಿಸುತ್ತದೆ ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದ್ದ ರಾಜಕುಮಾರ್, ಅವರಲ್ಲಿ ಜ್ಞಾನ ಇರುವಾಗ ಅವರು ಕಿರಿಯರು ಹೇಗೆ ಆಗುತ್ತಾರೆ ? ಅವರು ಹಿರಿಯರಾಗಿದ್ದರಿಂದಲೆ ಆ ಜಾಗಕ್ಕೆ ಬಂದಿದ್ದು. ನಿರ್ದೇಶಕ ಎನ್ನುವನು ಸೂತ್ರದಾರ. ಪ್ರತಿಯೊಂದು ಸೂತ್ರ ಅವರ ಕೈಯಲ್ಲೆ ಇರುವುದು ಎಂದಿದ್ದಾರೆ.

ನಿರ್ಮಾಪಕರ ಬಗ್ಗೆ ರಾಜ್ ಮಾತು :

ಇನ್ನು ಸಂದರ್ಶನದಲ್ಲಿ ನಿರ್ಮಾಪಕರ ಬಗ್ಗೆಯೂ ಗೌರವದ ನುಡಿಗಳನ್ನಾಡಿರುವ ರಾಜಕುಮಾರ್ ಅವರು ‘ಇವತ್ತಿಗೂ ನಮಗೆ ನಾಟಕ ಕಂಪನಿಯಲ್ಲಿ ಇದ್ದ ಅಭ್ಯಾಸ ಆಗಿದ್ದರಿಂದ ಒಬ್ಬ ಯಜಮಾನ ಆದವನಿಗೆ ಏನೂ ಸ್ಥಾನ ಕೊಟ್ಟಿದ್ದೇವೋ, ಅದನ್ನು ನಿರ್ಮಾಪಕರಿಗೂ ಅದೇ ಗೌರವ ಕೊಡುತ್ತೇವೆ. ಕಷ್ಟದಲ್ಲಿದ್ದರೂ ಕೂಡ ಎಷ್ಟೋ ಜನ ನಿರ್ಮಾಪಕರಾಗಿ ನಮಗೆ ಅನ್ನ ಹಾಕಿದ್ದಾರೆ. ನಮಗೆ ಏನೇ ಮಾಡಿದರೂ ಕೂಡ ಯಜಮಾನ ಅನ್ನೋದು ಒಳಗಡೆಯಿಂದ ಅಳಿಸೋಕೆ ಆಗುವುದಿಲ್ಲ. ಅವನು ನಮಗೆ ಅನ್ನ ಕೊಟ್ಟ ದಣಿ, ಇದು ನಮಗೆ ಚಿಕ್ಕಂದಿನಿಂದ ಬಂದ ಅಭ್ಯಾಸ’ ಎಂದು ಹೇಳಿದ್ದರು.

ಈಗೇಕೆ ವೈರಲ್ ?

ನಿರ್ಮಾಪಕರು ಹಾಗೂ ನಿರ್ದೇಶಕರ ಬಗ್ಗೆ ಡಾ.ರಾಜಕುಮಾರ್ ಅವರು ನುಡಿದಿರುವ ಮುತ್ತಿನಂತಹ ಮಾತುಗಳ ವಿಡಿಯೋ ತುಣುಕು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿರುವುದಕ್ಕೆ ಕಾರಣ ದರ್ಶನ್ ಅವರ ಮ್ಯಾಟರ್. ಇತ್ತೀಚಿಗೆ ಮಾಧ್ಯಮಗಳ ಎದುರು ಮಾತನಾಡುತ್ತಿದ್ದ ವೇಳೆ ದರ್ಶನ್ ಅವರು ನಿರ್ದೇಶಕ ಪ್ರೇಮ್ ಅವರಿಗೆ ಪುಡುಂಗ ಎಂದು ಕರೆದಿದ್ದರು. ಇದಕ್ಕೆ ಪ್ರೇಮ್ ಸೇರಿದಂತೆ ಸಾಕಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಪ್ರೇಮ್ ಅವರು ದರ್ಶನ್ ಅವರ ಕರಿಯಾ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.