Bad manners: ಅಭಿ ಖುಷಿ ಸೂರಿ ಗರಡಿಯಲ್ಲಿ ಜೂ. ರೆಬೆಲ್‌


Team Udayavani, Nov 24, 2023, 6:24 PM IST

tdy-20

ಸೂರಿ ನಿರ್ದೇಶನದ “ಬ್ಯಾಡ್‌ ಮ್ಯಾನರ್ಸ್‌’ ಚಿತ್ರ ಇಂದು ತೆರೆಕಂಡಿದೆ. ಈ ಚಿತ್ರದ ಮೂಲಕ ಅಭಿಷೇಕ್‌ ಅಂಬರೀಶ್‌ ಪಕ್ಕಾ ಮಾಸ್‌ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈಗಾಗಲೇ ಟ್ರೇಲರ್‌, ಹಾಡುಗಳು ಹಿಟ್‌ ಆಗುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಅಭಿ ಕೂಡಾ ಇದೇ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ “ಬ್ಯಾಡ್‌ ಮ್ಯಾನರ್ಸ್‌’ ಬಗ್ಗೆ ಮಾತನಾಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ…

 ನಮ್ಮೊಳಗಿನ “ಬ್ಯಾಡ್‌ ಮ್ಯಾನರ್ಸ್‌’ …

– ಪ್ರತಿಯೊಬ್ಬ ಮನುಷ್ಯನೊಳಗೂ ಒಂದು ಗುಡ್‌ ಮ್ಯಾನರ್ಸ್‌ ಮತ್ತೂಂದು ಬ್ಯಾಡ್‌ ಮ್ಯಾನರ್ಸ್‌ ಇದ್ದೇ ಇರುತ್ತಾನೆ. ಅವನು ಆಯಾಯ ಸಂದರ್ಭ, ಸನ್ನಿವೇಶಕ್ಕೆ ಅದು ಅವನ ರೂಪದಲ್ಲಿ ಹೊರಗೆ ಬರುತ್ತದೆ. ಈ ಸಿನಿಮಾದಲ್ಲೂ ಕಥೆ ಮತ್ತು ಒಂದಷ್ಟು ಪಾತ್ರಗಳಲ್ಲಿರುವ ಅಂಥ ಗುಣಗಳನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್‌ನ ಬೇಸ್‌ ಮಾಡಿ ಈ ಟೈಟಲ್‌ ಇಡಲಾಗಿದೆ. ಸಿನಿಮಾ ನೋಡಿದಾಗ ಆ ಟೈಟಲ್‌ ಯಾಕೆ ಇಟ್ಟಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. “ಬ್ಯಾಡ್‌ ಮ್ಯಾನರ್ಸ್‌’ ಟೈಟಲ್‌ ಯಾಕೆ ಅಂಥ ಗೊತ್ತಾಗಬೇಕಾದ್ರೆ ಸಿನಿಮಾ ನೋಡಲೇಬೇಕು.

ಸಿನಿಮಾ ನೋಡಿ ಕಲಿಯಬೇಕು…

ನಮ್ಮ ದೇಶದಲ್ಲಿ ಸಾಕಷ್ಟು ಸಿನಿಮಾ ತರಬೇತಿ ಕೊಡುವ ಸಂಸ್ಥೆಗಳಿವೆ. ಅಲ್ಲಿಂದ ಬಂದು ಸ್ಟಾರ್ ಆದವರಿಗಿಂತ ಸಿನಿಮಾ ಮಾಡಿ ಅನುಭವದಿಂದ ಸ್ಟಾರ್ ಆದವರ ಸಂಖ್ಯೆ ದೊಡ್ಡದಿದೆ. ಯಾಕೆಂದರೆ, ಸಿನಿಮಾ ಶುರುವಾದ ನಂತರ ಸಾಕಷ್ಟು ವಿಷಯಗಳನ್ನು ಕಲಿಯಬೇಕಾಗುತ್ತದೆ. ನಾವು ಬೇಡ ಅಂದ್ರೂ ಸಿನಿಮಾ ಸಾಕಷ್ಟು ವಿಷಯಗಳನ್ನು ಕಲಿಸುತ್ತದೆ. ಕ್ಲಾಸ್‌ ರೂಮ್‌ಗಳಲ್ಲಿ ಸಿನಿಮಾ ಬಗ್ಗೆ ಹೇಳಿಕೊಡುವ ಪಾಠಗಳಿಗಿಂತ, ಸಿನಿಮಾ ಮೇಕಿಂಗ್‌ನಲ್ಲಿ ಕಲಿಯುವ ಅನುಭವಗಳು ಬೇರೆಯದ್ದೇ ಆಗಿರುತ್ತದೆ.

“ಅಮರ್‌’ ನಂತರ ಗ್ಯಾಪ್‌ ಯಾಕ್‌ ಗೊತ್ತಾ…

– 2019ರಲ್ಲಿ ನನ್ನ ಮೊದಲ ಸಿನಿಮಾ “ಅಮರ್‌’ ರಿಲೀಸ್‌ ಆಯ್ತು. ಅದಾದ ನಂತರ ಅಂಥದ್ದೇ ಒಂದಷ್ಟು ಕಥೆಗಳು ಬಂದಿದ್ದವು. ಆದರೆ ನಾನು ಬೇರೆ ಥರದ ಕಥೆಗಳನ್ನು ನಿರೀಕ್ಷಿಸುತ್ತಿದ್ದೆ. ಒಂದಷ್ಟು ಸಮಯದ ನಂತರ ನನಗೆ ಇಷ್ಟವಾಗುವಂಥ ಸಬ್ಜೆಕ್ಟ್ ಸಿಕ್ಕಿತು. ಅದರ ಮೇಲೆ ಕೆಲಸ ಶುರುವಾಗುತ್ತಿದ್ದಂತೆ, ಕೋವಿಡ್‌ ಬಂತು. ಎರಡು ಬಾರಿ ಲಾಕ್‌ ಡೌನ್‌ ಅನೌನ್ಸ್‌ ಆಯ್ತು. ಶೂಟಿಂಗ್‌ ಕೂಡ ಗ್ಯಾಪ್‌ ತೆಗೆದುಕೊಂಡಿತು. ಆನಂತರ ಸಿನಿಮಾದಲ್ಲಿ ಸಾಕಷ್ಟು ಸೂಕ್ಷ್ಮ ಕೆಲಸಗಳಿದ್ದರಿಂದ, ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯಿತು. ಹೀಗಾಗಿ ಸ್ವಲ್ಪ ಗ್ಯಾಪ್‌ ಅನಿಸಿದ್ದರೂ, “ಬ್ಯಾಡ್‌ ಮ್ಯಾನರ್ಸ್‌’ ಎಷ್ಟು ಟೈಮ್‌ ಬೇಕೋ ಅಷ್ಟನ್ನು ತೆಗೆದುಕೊಂಡಿದೆ.

ಪ್ರತಿಭೆ ಗುರುತಿಸುವ ಗುಣ ಸೂರಿ ಅವರದು…

ಒಮ್ಮೆ ನಿರ್ಮಾಪಕ ಸುಧೀರ್‌ ಬಂದು ನಿರ್ದೇಶಕ ಸೂರಿ ಅವರೊಂದಿಗೆ ಸಿನಿಮಾ ಮಾಡುವ ಯೋಚನೆ ಹೇಳಿದರು. ಅದಾದ ನಂತರ ಸೂರಿ ಅವರೊಂದಿಗೂ ಮಾತುಕಥೆಯಾಯಿತು. ಸೂರಿಯವರಿಗೆ ದೊಡ್ಡ ಬ್ಯಾನರ್, ದೊಡ್ಡ ಸ್ಟಾರ್, ದೊಡ್ಡ ಆಫ‌ರ್ಗಳಿದ್ದರೂ, ಅವರು “ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರು. ಯಾರೂ ನೋಡದ ಪ್ರತಿಭೆಗಳನ್ನು ಸೂರಿ ಗುರುತಿಸುತ್ತಾರೆ. ಅಂಥದ್ದೊಂದು ಟ್ಯಾಲೆಂಟ್‌ ಸೂರಿ ಅವರಿಗಿದೆ. ಅವರ ಜೊತೆ ಕೆಲಸ ಮಾಡಿದ್ದು, ಕಲಿತುಕೊಂಡಿದ್ದು ಸಾಕಷ್ಟಿದೆ. ‌

ಕೆಮಿಸ್ಟ್ರಿ ವರ್ಕೌಟ್ ಆಗಿದೆ:

ನಿರ್ದೇಶಕ ಸೂರಿ ಮೊದಲು ನಮ್ಮ ತಲೆಯಲ್ಲಿ ಸಿನಿಮಾದ ಪಾತ್ರವನ್ನು ಅದರ ವ್ಯಕ್ತಿತ್ವನ್ನು ತುಂಬಿಸುತ್ತಾರೆ. ನಮಗೇ ಗೊತ್ತಿಲ್ಲದಂತೆ ಆ ಕೆಲಸವನ್ನು ತುಂಬ ಸುಲಭವಾಗಿ ಮಾಡಿ ಬಿಡುತ್ತಾರೆ. ನಮ್ಮ ಬಾಡಿ ಲಾಂಗ್ವೇಜ್‌ ಅನ್ನು ಅವರಿಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. “ಬ್ಯಾಡ್‌ ಮ್ಯಾನರ್ಸ್‌’ ಶುರುವಾದ ನಂತರ ಕೋವಿಡ್‌ನಿಂದಾಗಿ ಮಧ್ಯದಲ್ಲಿ ಸಾಕಷ್ಟು ಗ್ಯಾಪ್‌ ಆಗುತ್ತಿತ್ತು. ಈ ವೇಳೆ ನಾವಿಬ್ಬರೂ ಸಾಕಷ್ಟು ಮಾತನಾಡುತ್ತಿದ್ದೆವು. ನನ್ನ ಬಗ್ಗೆ ಸೂರಿ ಅವರಿಗೆ, ಅವರ ಬಗ್ಗೆ ನನಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಅಂತಿಮವಾಗಿ ಶೂಟಿಂಗ್‌ಗೆ ಹೋಗುವ ವೇಳೆಗೆ ನಮ್ಮಿಬ್ಬರ ನಡುವೆ ಒಂದು ಒಳ್ಳೆಯ ಬಾಂಧವ್ಯ ಏರ್ಪಟ್ಟಿತ್ತು. ನಮ್ಮಿಬ್ಬರ ಕೆಮಿಸ್ಟ್ರಿ ಸಿನಿಮಾದಲ್ಲಿ ವಕೌìಟ್‌ ಆಗಿದೆ.

ಸ್ಟಾರ್ ಮಕ್ಕಳ ಜರ್ನಿಯಲ್ಲೂ ಸವಾಲಿದೆ…  

ಸಿನಿಮಾಕ್ಕೆ ಬರುವ ಹೊಸಬರಿಗೆ ಒಂಥರಾ ಸವಾಲುಗಳಿದ್ದರೆ, ಸ್ಟಾರ್ ಮಕ್ಕಳಿಗೆ ಮತ್ತೂಂದು ಥರದ ಸವಾಲುಗಳಿರುತ್ತದೆ. ಹೊಸಬರು ಒಮ್ಮೆ ಸೋತರೂ, ಅವರಿಗೆ ಕಲಿಯಲು ಸಾಕಷ್ಟು ಅವಕಾಶಗಳಿರುತ್ತವೆ. ಅವರ ವ್ಯಾಪ್ತಿ ವಿಶಾಲವಾಗಿರುತ್ತದೆ. ಜನ ಇನ್ನೊಂದು ಛಾನ್ಸ್‌ ಕೊಡೋಣ ಅಂತಾರೆ. ಆದರೆ ಸ್ಟಾರ್ ಮಕ್ಕಳಿಗೆ ಆ ಛಾನ್ಸ್‌ ಕಡಿಮೆ. ದೇವರು ಎಲ್ಲ ಕೊಟ್ಟಿದ್ರೂ ಇವರ್ಯಾಕೆ ಸರಿಯಾಗಿ ಮಾಡಿಲ್ಲ ಅಂತಾರೆ. ಒಮ್ಮೆ ಸೋತರೂ ಮತ್ತೂಂದು ಚಾನ್ಸ್‌ ಸಿಗುತ್ತದೆ ಅಂಥ ಹೇಳಲಾಗುವುದಿಲ್ಲ. ನನ್ನ ಪ್ರಕಾರ ಯಾವುದೇ ಸಿನಿಮಾ, ಬಿಝಿನೆಸ್‌, ಪಾಲಿಟಿಕ್ಸ್‌, ನ್ಪೋರ್ಟ್ಸ್ ಹೀಗೆ ಯಾವುದೇ ಕ್ಷೇತ್ರವಿರಲಿ ಅಲ್ಲಿ ದೊಡ್ಡ ಹೆಸರು ಮಾಡಿದವರ, ಸ್ಟಾರ್ ಎನಿಸಿಕೊಂಡವರ ಮಕ್ಕಳಿಗೆ ಇಂಥದ್ದೊಂದು ಚಾಲೆಂಜ್‌ ಇದ್ದೇ ಇರುತ್ತದೆ. ಎರಡನೇ ತಲೆಮಾರು, ಮೂರನೇ ತಲೆಮಾರು ಸಕ್ಸಸ್‌ ಆಗೋದು ಕಷ್ಟ

-ಜಿ.ಎಸ್‌.ಕಾರ್ತಿಕ ಸುಧನ್‌

 

ಟಾಪ್ ನ್ಯೂಸ್

ಪಕ್ಷ ಸಂಘಟಿಸುವವರಿಗೆಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

ಪಕ್ಷ ಸಂಘಟಿಸುವವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

basavaraj rayareddy

Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ

ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

rohit sharma

Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gowri ರಿಲೀಸ್ ದಿನಾಂಕ ಘೋಷಿಸಿದ ಇಂದ್ರಜಿತ್‌ ಲಂಕೇಶ್‌

Gowri ರಿಲೀಸ್ ದಿನಾಂಕ ಘೋಷಿಸಿದ ಇಂದ್ರಜಿತ್‌ ಲಂಕೇಶ್‌

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

raakha kannada movie

Sandalwood; ತಂದೆ ಮಕ್ಕಳ ಸಂಬಂಧದ ಸುತ್ತ ‘ರಾಖಾ’

ajagrata producer gave fortuner car gift to the director

Sandalwood; ನಿರ್ದೇಶಕರಿಗೆ ಫಾರ್ಚೂನರ್ ಗಿಫ್ಟ್ ನೀಡಿದ ಅಜಾಗ್ರತ ನಿರ್ಮಾಪಕ

Kannada movie Taj releasing soon

Sandalwood; ಟ್ರೇಲರ್‌ನಲ್ಲಿ ‘ತಾಜ್‌’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

ಪಕ್ಷ ಸಂಘಟಿಸುವವರಿಗೆಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

ಪಕ್ಷ ಸಂಘಟಿಸುವವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು: ಸತೀಶ್ ಜಾರಕಿಹೊಳಿ

basavaraj rayareddy

Kalaburagi; ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನ ಇಳಿಸಲು ಆಗುವುದಿಲ್ಲ: ರಾಯರೆಡ್ಡಿ

ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್

rohit sharma

Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.