Pruthvi Shamanur: ಪೃಥ್ವಿಯಲ್ಲಿ ಭರವಸೆಯ ಬೆಳಕು


Team Udayavani, Nov 24, 2023, 6:12 PM IST

Pruthvi Shamanur: ಪೃಥ್ವಿಯಲ್ಲಿ ಭರವಸೆಯ ಬೆಳಕು

ಕಳೆದ ವರ್ಷ ತೆರೆಕಂಡ “ಪದವಿ ಪೂರ್ವ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯವಾದ ಪ್ರತಿಭೆ ಪೃಥ್ವಿ ಶಾಮನೂರ್‌.ಮೊದಲ ಸಿನಿಮಾದಲ್ಲೇ ಸಿನಿಪ್ರಿಯರು ಮತ್ತು ಸಿನಿಮಾ ಮಂದಿಯ ಗಮನ ಸೆಳೆದ ದಾವಣಗೆರೆ ಮೂಲದ ಪೃಥ್ವಿ, ಇತ್ತೀಚೆಗೆ ತೆರೆಕಂಡ ಯೋಗರಾಜ್‌ ಭಟ್‌ ನಿರ್ದೇಶನದ, ಬಿ. ಸಿ. ಪಾಟೀಲ್‌ ನಿರ್ಮಾಣದ “ಗರಡಿ’ ಸಿನಿಮಾದಲ್ಲೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಬಾಲ್ಯದ ಪಾತ್ರದಲ್ಲೂ ಮಿಂಚಿದ್ದರು.

ತಮ್ಮ ಚೊಚ್ಚಲ ಸಿನಿಮಾದ ಅಭಿನಯಕ್ಕಾಗಿ “ಸೈಮಾ’ ಅತ್ಯುತ್ತಮ ಚೊಚ್ಚಲ ನಟ, “ಚಂದನವನ ಕ್ರಿಟಿಕ್ಸ್‌ ಅವಾರ್ಡ್ಸ್‌’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಪೃಥ್ವಿ, ಸದ್ಯ ಉತ್ತರ ಕರ್ನಾಟಕದ ಕಥಾಹಂದರ ಹೊಂದಿರುವ ಸದ್ಯ ಮತ್ತೂಂದು ಔಟ್‌ ಆ್ಯಂಡ್‌ ಔಟ್‌ ಮಾಸ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾಕ್ಕೆ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

“ದಾವಣಗೆರೆಯ ಸಣ್ಣ ಹಳ್ಳಿಯಲ್ಲಿದ್ದ ನಾನು ಮಾಡೆಲಿಂಗ್‌ ಲೋಕಕ್ಕೆ ಬಂದು, ಅಲ್ಲಿಂದ ಸಿನಿಮಾಕ್ಕೆ ಬಂದು ಇಂದು ಒಬ್ಬ ಕಲಾವಿದನಾಗಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮೊದಲ ಸಿನಿಮಾ “ಪದವಿ ಪೂರ್ವ’ ನನಗೆ ಸಾಕಷ್ಟು ವಿಷಯಗಳನ್ನು ಕಲಿಸಿತು. ಎರಡು-ಮೂರು ಸಿನಿಮಾದಲ್ಲಿ ಕಲಿಯಬೇಕಾಗಿರುವುದನ್ನು ಒಂದೇ ಸಿನಿಮಾದಲ್ಲಿ ಕಲಿಯುವ ಅವಕಾಶ ಸಿಕ್ಕಿತು. ಯೋಗರಾಜ್‌ ಭಟ್‌, ಹರಿಪ್ರಸಾದ್‌ ಅವರಂಥ ನಿರ್ದೇಶಕರು ನನ್ನನ್ನು ಒಬ್ಬ ನಟನಾಗುವಂತೆ ಮಾಡಿದರು’ ಎನ್ನುತ್ತಾರೆ ಪೃಥ್ವಿ.

“ಪದವಿ ಪೂರ್ವ’ ಸಿನಿಮಾಕ್ಕೆ ಒಳ್ಳೆಯ ಓಪನಿಂಗ್‌ ಸಿಕ್ಕಿತು. ಸಿನಿಮಾವನ್ನು ಥಿಯೇಟರ್‌, ಓಟಿಟಿ ಮತ್ತು ಟಿ.ವಿಯಲ್ಲಿ ನೋಡಿದ ಪ್ರೇಕ್ಷಕರು ಕೂಡ ನಮ್ಮ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು. “ಪದವಿ ಪೂರ್ವ’ ಸಿನಿಮಾ ನಡೆಯುತ್ತಿರುವಾಗಲೇ “ಗರಡಿ’ ಸಿನಿಮಾದ ಆಫ‌ರ್‌ ಸಿಕ್ಕಿತು. ಅಲ್ಲೂ ನನಗೊಂದು ಪ್ರಮುಖ ಪಾತ್ರ ಸಿಕ್ಕಿತು. ನಿರ್ದೇಶಕ ಯೋಗರಾಜ್‌ ಭಟ್‌, ನಿರ್ಮಾಪಕ ಬಿ. ಸಿ. ಪಾಟೀಲ್‌ ನನ್ನನ್ನು ನಂಬಿ ಒಳ್ಳೆಯ ಪಾತ್ರ ಕೊಟ್ಟರು. ಸುಮಾರು ಮೂರು ತಿಂಗಳು “ಗರಡಿ’ ಸಿನಿಮಾಕ್ಕೆ ಕುಸ್ತಿ ತರಬೇತಿ ಪಡೆದುಕೊಂಡೆ. ಕುಸ್ತಿ ಪಟ್ಟುಗಳನ್ನು ಕಲಿತು ಸಿನಿಮಾದಲ್ಲಿ ಅಭಿನಯಿಸಿದೆ. ಇತ್ತೀಚೆಗೆ “ಗರಡಿ’ ರಿಲೀಸ್‌ ಆಗಿದ್ದು, ಆ ಪಾತ್ರಕ್ಕೆ ಏನೂ ಎಫ‌ರ್ಟ್‌ ಹಾಕಿದ್ದೆವೋ, ಅದಕ್ಕೆ ತಕ್ಕಂಥ ರೆಸ್ಪಾನ್ಸ್‌ ಸಿಕ್ಕಿತು. ಅನೇಕ ಹಿರಿಯ ಕಲಾವಿದರು ನನ್ನ ಪಾತ್ರವನ್ನು ಮೆಚ್ಚಿ ಮಾತನಾಡಿದರು. ಅದು ನನಗೆ ಹೊಸ ಜೋಶ್‌ ಕೊಟ್ಟಿತು’ ಎನ್ನುತ್ತಾರೆ ಪೃಥ್ವಿ.

ಸದ್ಯ ತಮ್ಮ ಹೋಂ ಬ್ಯಾನರ್‌ನಲ್ಲಿ ಅಮೂಲ್‌ ಪಾಟೇಲ್‌ ನಿರ್ದೇಶನದಲ್ಲಿ ಹೊಸ ಸಿನಿಮಾಕ್ಕೆ ಪೃಥ್ವಿ ಸದ್ದಿಲ್ಲದೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇಡೀ ಸಿನಿಮಾದ ಕಥೆ ಬಿಜಾಪುರದಲ್ಲಿ ನಡೆಯಲಿದ್ದು, ಅದಕ್ಕಾಗಿ ಬಿಜಾಪುರ ಭಾಷೆಯನ್ನೂ ಕಲಿಯುತ್ತಿದ್ದಾರೆ. “ಸಿನಿಮಾಕ್ಕೆ ಬಂದು ಸುಮಾರು ಮೂರು ವರ್ಷವಾಯ್ತು. ಫ್ಯಾಮಿಲಿ-ಫ್ರೆಂಡ್ಸ್‌ ಹೀಗೆ ಎಲ್ಲರ ಸಹಕಾರದಿಂದ ಸಿನಿಮಾ ಯಾನ ಸಲೀಸಾಗಿ ನಡೆಯುತ್ತಿದೆ. ಒಮ್ಮೆ ಹಿಂತಿರುಗಿ ನೋಡಿದ್ರೆ, ಈ ಜರ್ನಿ ಸಾಕಷ್ಟು ಕಲಿಸಿದೆ ಎಂದು ಖುಷಿಯಾಗುತ್ತದೆ’ ಎನ್ನುತ್ತಾರೆ ಪೃಥ್ವಿ.

 

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

family drama movie title track

Sandalwood; “ಫ್ಯಾಮಿಲಿ ಡ್ರಾಮಾ’ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಂತು

TOOFAAN

Toofaan; ಭರವಸೆ ಮೂಡಿಸಿದ ತೂಫಾನ್‌ ನೋಟ

forest

Forest; ಕಾಡಿನಲ್ಲಿ ಹಾಡಿನ ಸದ್ದು; ಫಾರೆಸ್ಟ್‌ ಒಳಗೆ ಚಿಕ್ಕಣ್ಣ- ಟೀಂ

‘Kenda’ premiere show at Tisch School of Art

Sandalwood; ಟಿಶ್‌ ಸ್ಕೂಲ್‌ ಆಫ್ ಆರ್ಟ್‌ನಲ್ಲಿ ‘ಕೆಂಡ’ ಪ್ರೀಮಿಯರ್‌ ಶೋ

Ronny

Ronny; ಕಿರಣ್‌ ರಾಜ್‌ ನಟನೆಯ ಸಿನಿಮಾದ ಹಾಡು ಬಂತು

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.