![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 24, 2020, 12:28 PM IST
ನಟ ಮತ್ತು ರಾಜಕಾರಣಿ ರೆಬಲ್ಸ್ಟಾರ್ ಅಂಬರೀಶ್ ನಿಧನರಾಗಿ ಇಂದಿಗೆ ಎರಡು ವರ್ಷ. ಅಂಬಿ ದೈಹಿಕವಾಗಿ ಇಲ್ಲದಿದ್ದರೂ ಅವರ ಹೆಸರನ್ನು ಚಿರಸ್ಥಾಯಿಯಾಗಿಡುವ ಕೆಲಸವನ್ನು ಅಂಬರೀಶ್ಕುಟುಂಬ ವರ್ಗ ಮತ್ತು ಅಭಿಮಾನಿಗಳು ನಿರಂತರವಾಗಿ ಮಾಡುತ್ತ ಬರುತ್ತಿದ್ದಾರೆ.
ಈ ಬಾರಿ ಕೂಡ ಅಂಬರೀಶ್ ಪುಣ್ಯತಿಥಿ ಪ್ರಯುಕ್ತ ಒಂದಷ್ಟು ಸಾಮಾಜಿಕ ಕಾರ್ಯಗಳಿಗೆ ಅಂಬರೀಶ್ ಕುಟುಂಬ ವರ್ಗ ಮತ್ತು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂಬರೀಶ್ ಪತ್ನಿ, ಮಂಡ್ಯ ಸಂಸದೆ ಸುಮಲತಾ ತಮ್ಮ ಸಂಸದರ ನಿಧಿಯಿಂದ ಹತ್ತು ಮಂದಿ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಇಂದು ವಿತರಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುಮಲತಾ ಅಂಬರೀಶ್, “ರೆಬಲ್ಸ್ಟಾರ್ ಡಾ. ಅಂಬರೀಶ್ ನಮ್ಮನ್ನು ಅಗಲಿ ಎರಡು ವರ್ಷ. ದೈಹಿಕವಾಗಿ ಅವರು ನಮ್ಮಿಂದ ದೂರವಾಗಿದ್ದರೂ ನಾನಾ ಕೆಲಸಗಳಿಂದಾಗಿ ಅವರ ಹೆಸರು ನಮ್ಮೆಲ್ಲರ
ಹೃದಯದಲ್ಲಿ ಯಾವಾಗಲೂ ಶಾಶ್ವತ. ಅವರಿಂದ ಸಹಾಯ ಪಡೆದಕೈಗಳು ಸಾವಿರಾರು. ಸಿನಿಮಾ ರಂಗ, ರಾಜಕೀಯ ಕ್ಷೇತ್ರದ ಆಚೆಯೂ ಅವರನ್ನು ಜನರು ಅಷ್ಟೊಂದು ಪ್ರೀತಿಸುತ್ತಿದ್ದರು ಅನ್ನುವುದಕ್ಕೆ ಕಾರಣ, ಜನರಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ. ಹಾಗಾಗಿ ಅದೇ ದಿನ ವಾಹನ ಹಂಚಿಕೆ ಮಾಡುತ್ತಿದ್ದೇನೆ’ ಎಂದಿದ್ದಾರೆ.
ಉಳಿದಂತೆ ಅಂಬರೀಶ್ ಅಭಿಮಾನಿಗಳು, ಕೆಲ ಸಂಘ-ಸಂಸ್ಥೆಗಳು ಅಂಬರೀಶ್ ಪುಣ್ಯತಿಥಿ ಪ್ರಯುಕ್ತ ಸಮಾಧಿ ಬಳಿ ಪೂಜೆ, ರಕ್ತದಾನ, ಬಡ ರೋಗಿಗಳಿಗೆ ಹಣ್ಣು-ಹಂಪಲು ಮತ್ತು ಔಷಧಿ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.