![rohit sharma](https://www.udayavani.com/wp-content/uploads/2024/07/rohit-415x229.jpg)
ಗಾಂಧಿನಗರಕ್ಕೆ ಕಾಲಿಟ್ಟ ಅಶ್ವಿನಿರಾಮ್ಪ್ರಸಾದ್ ಪುತ್ರ
Team Udayavani, Jul 10, 2017, 10:50 AM IST
![Gharga.jpg](https://www.udayavani.com/wp-content/uploads/2017/07/10/Gharga.jpg)
“ಜ್ಯೋಗಿ’ ಖ್ಯಾತಿಯ ನಿರ್ಮಾಪಕ ಅಶ್ವಿನಿ ರಾಮ್ಪ್ರಸಾದ್ ಇದೀಗ ತಮ್ಮ ಪುತ್ರ ಅರುಣ್ ರಾಮ್ಪ್ರಸಾದ್ ಅವರನ್ನು ಸಿನಿಮಾರಂಗಕ್ಕೆ ಪರಿಚಯಿಸಲು ವೇದಿಕೆಯೊಂದನ್ನು ಸಜ್ಜುಗೊಳಿಸುತ್ತಿದ್ದಾರೆ. “ಘಾರ್ಗಾ’ ಎಂಬ ವಿಭಿನ್ನ ಶೀರ್ಷಿಕೆವುಳ್ಳ ಚಿತ್ರದ ಮೂಲಕ ಅರುಣ್ರಾಮ್ಪ್ರಸಾದ್ ಗಾಂಧಿನಗರಕ್ಕೆ ಹೊಸ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆಗೆ “ದಿ ಲ್ಯಾಂಡ್ ಆಫ್ ಶಾಡೋಸ್’ ಎಂಬ ಅಡಿಬರಹವಿದೆ.
ಸದ್ಯಕ್ಕೆ ಅಶ್ವಿನಿರಾಮ್ಪ್ರಸಾದ್ ಅವರು ಈಗ “ಘಾರ್ಗಾ’ ಎಂಬ ಫಸ್ಟ್ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದಾರಷ್ಟೆ. ಚಿತ್ರದ ನಾಯಕ ಅರುಣ್ರಾಮ್ಪ್ರಸಾದ್ ಬಿಟ್ಟರೆ, ಬೇರೆ ಯಾರೆಲ್ಲಾ ಈ ಚಿತ್ರದಲ್ಲಿದ್ದಾರೆ ಎಂಬುದನ್ನು ಗೌಪ್ಯವಾಗಿಟ್ಟಿದ್ದಾರೆ. ಹೊಸ ನಿರ್ದೇಶಕರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಷ್ಟೇ ತಂತ್ರಜ್ಞರು, ನಾಯಕಿ ಮತ್ತು ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.
ಪುತ್ರನನ್ನು ಸಿನಿಮಾ ರಂಗಕ್ಕೆ ಪರಿಚಯಿಸಬೇಕು ಎಂಬ ಸಲುವಾಗಿಯೇ ರಾಮ್ಪ್ರಸಾದ್, ಅರುಣ್ಪ್ರಸಾದ್ಗೆ ಸಿನಿಮಾಗೆ ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಸಿದ್ದಾರೆ. ಅರುಣ್ಪ್ರಸಾದ್, ನೀನಾಸಂನಲ್ಲಿ ಒಂದು ವರ್ಷ ನಟನೆ ತರಬೇತಿ ಪಡೆದಿದ್ದಾರೆ. ಆರು ತಿಂಗಳ ಕಾಲ ಕಲರಿ ಕಲೆ ಕಲಿತಿದ್ದಾರೆ.
ಬಾಡಿಬಿಲ್ಡ್ ಮಾಡಿ, ಸಿನಿಮಾ ಹೀರೋಗೆ ಇರಬೇಕಾದಂತಹ ಎಲ್ಲಾ ಗುಣಲಕ್ಷಣಗಳನ್ನು ಹೊಂದಿ ಗಾಂಧಿನಗರದಲ್ಲಿ ನಿಲ್ಲೋಕೆ ರೆಡಿಯಾಗಿದ್ದಾರೆ. ಅಂದಹಾಗೆ, ಇದೊಂದು ಹೊಸ ಜಾನರ್ನ ಕಥೆಯಾಗಿದ್ದು, ಈ ಮೂಲಕ ಹೊಸದೇನನ್ನೋ ಹೇಳಲು ಹೊರಟಿದ್ದಾರಂತೆ ಅಶ್ವಿನಿರಾಮ್ಪ್ರಸಾದ್. ಅವರಿಲ್ಲಿ ಸ್ಟ್ರಾಂಗ್ ಟೆಕ್ನೀಷಿಯನ್ಸ್ ಜತೆ ಕೆಲಸ ಮಾಡುತ್ತಿದ್ದು, ಸೆಪ್ಟೆಂಬರ್ನಲ್ಲಿ ಚಿತ್ರಕ್ಕೆ ಚಾಲನೆ ಕೊಡುವ ಯೋಚನೆ ಅವರದು.
ಟಾಪ್ ನ್ಯೂಸ್
![rohit sharma](https://www.udayavani.com/wp-content/uploads/2024/07/rohit-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.