![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 3, 2022, 12:15 PM IST
ಝೈದ್ ಖಾನ್ ನಟನಾಗಿ ಎಂಟ್ರಿಯಾಗುತ್ತಿರುವ ಬನಾರಸ್ ಸಿನಿಮಾದ ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಾರದ ಹಿಂದಷ್ಟೇ ರಿಲೀಸ್ ಆಗಿದ್ದ ಟ್ರೇಲರ್ ಸಿಕ್ಕಾಪಟ್ಟೆ ಮನಸ್ಸುಗಳನ್ನು ಗೆದ್ದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಂಚ ಭಾಷೆಗಳಲ್ಲಿ ಹತ್ತು ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ, ಸಿನಿಮಾದ ಮೇಲಿನ ಭರವಸೆಯನ್ನು ದುಪ್ಪಟ್ಟು ಮಾಡಿದೆ.
ಬನಾರಸ್ ಕಡೆಯಿಂದ ಮಾಯ ಗಂಗೆ ಸಾಂಗ್ ರಿಲೀಸ್ ಆದಾಗಲೇ ಟ್ರೇಲರ್ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆಯನ್ನು ಟ್ರೇಲರ್ ಎಲ್ಲಿಯೂ ಹುಸಿಗೊಳಿಸಲಿಲ್ಲ. ಅಂದುಕೊಂಡಿದ್ದಕ್ಕಿಂತ ಎಕ್ಸ್ಟ್ರಾ ಎನಿಸುವಂತ ಅಂಶಗಳನ್ನು ಇಟ್ಟು, ಟ್ರೇಲರ್ ಅನ್ನು ನೀಡಲಾಗಿದೆ. ವಾವ್ ಎನಿಸುವಂಥ ವಿಷ್ಯೂಲೈಸೇಷನ್, ಶಾಕಿಂಗ್ ಎನಿಸುವಂತ ಘಟನೆಗಳು ಟ್ರೇಲರ್ ನಲ್ಲಿ ಪಾಸ್ ಆಗುತ್ತವೆ. ಝೈದ್ ಖಾನ್ ಈಗಾಗಲೇ ಹಾಡುಗಳಲ್ಲಿ ಭರವಸೆ ಮೂಡಿಸಿದ್ದರು. ಆದರೆ ಟ್ರೇಲರ್ ನಲ್ಲಿ ಮತ್ತಷ್ಟು ಖುಷಿ ನೀಡಿದ್ದಾರೆ. ಝೈದ್ ಗೆ ಇದು ಮೊದಲ ಸಿನಿಮಾ ಎಂಬ ಫೀಲ್ ನೋಡುಗರಲ್ಲಿ ಬರುವಂತೆ ಬಿಟ್ಟುಕೊಟ್ಟಿಲ್ಲ.
ಜಯತೀರ್ಥ ಅವರ ಡೈರೆಕ್ಷನ್ ನಲ್ಲಿ ಬನಾರಸ್ ರೆಡಿಯಾಗಿದ್ದು, ಇತ್ತೀಚೆಗಷ್ಟೇ ದೊಡ್ಡ ವೇದಿಕೆಯಲ್ಲಿ ಟ್ರೇಲರ್ ಲಾಂಚ್ ಮಾಡಲಾಗಿದೆ. ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ನ ಅರ್ಬಾಜ್ ಖಾನ್ ವೇದಿಕೆ ಮೇಲೇರಿ ಬನಾರಸ್ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದರು. ರವಿಚಂದ್ರನ್ ಅಂತು ಟ್ರೇಲರ್ ನೋಡಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. ಇದೀಗ ಟ್ರೇಲರ್ ಜನರ ಮನಸ್ಸನ್ನು ಗೆದ್ದಿದೆ. ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ವೀವ್ಸ್ ಪಡೆದುಕೊಂಡಿದೆ.
ಝೈದ್ ಖಾನ್ ಹಾಗೂ ಸೋನಲ್ ಮೊಂಥೆರೋ ಕೆಮಿಸ್ಟ್ರಿ ಸೂಪರ್ ಆಗಿ ವರ್ಕೌಟ್ ಆಗಿರುವುದು ಟ್ರೇಲರ್, ಸಾಂಗ್ಸ್ ನಲ್ಲಿ ಕಾಣಬಹುದು. ನವೆಂಬರ್ 4ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾಗೆ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.