Bheema Movie: ಪ್ರೇಕ್ಷಕರು ಎಲ್ಲೂ ಹೋಗಿಲ್ಲ…ಇಲ್ಲೇ ಇದ್ದಾರೆ..

ಭರವಸೆ ಮೂಡಿಸಿದ ಭೀಮ ಪ್ರದರ್ಶನ ಹೌಸ್‌ಫ‌ುಲ್‌ ಶೋ, ಥಿಯೇಟರ್‌ ಮಾಲೀಕರು ಖುಷ್‌

Team Udayavani, Aug 13, 2024, 8:59 AM IST

Bheema Movie: ಪ್ರೇಕ್ಷಕರು ಎಲ್ಲೂ ಹೋಗಿಲ್ಲ…ಇಲ್ಲೇ ಇದ್ದಾರೆ..

ಎಷ್ಟೋ ತಿಂಗಳುಗಳ ನಂತರ “ಹೌಸ್‌ಫ‌ುಲ್‌’, “ಚಿತ್ರಮಂದಿರ ತುಂಬಿದೆ’ ಎಂಬ ಫ‌ಲಕಗಳು ಮೈಕೊಡವಿಕೊಂಡು ಥಿಯೇಟರ್‌ಗಳ ಮುಂದೆ ರಾರಾಜಿಸುತ್ತಿವೆ. ಇದು ಕೇವಲ “ಭೀಮ’ ಚಿತ್ರದ ನಿರ್ಮಾಪಕರಿಗಷ್ಟೇ ಅಲ್ಲ, ಕನ್ನಡ ಚಿತ್ರರಂಗದ ನಿಜವಾದ ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ. ಈ ತರಹದ ಒಂದು ಭರ್ಜರಿ ಓಪನಿಂಗ್‌ ಈ ಸಂದರ್ಭಕ್ಕೆ ಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ಕನ್ನಡ ಚಿತ್ರರಂಗದ ಮಂದಿಯ ಬಾಯಲ್ಲಿ ಓಡಾಡುತ್ತಿರುವ ಹೆಸರು “ಭೀಮ’. ಕೊನೆಗೂ “ಭೀಮ’ ಭರವಸೆಯ ಹಾದಿ ತೆರೆಸಿದ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕೆ ಕಾರಣ ವಿಜಯ್‌ ನಟನೆ, ನಿರ್ದೇಶನದ “ಭೀಮ’ ಚಿತ್ರ ತೆರೆಕಂಡ ದಿನದಿಂದಲೇ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದೆ.

ಮಾಸ್‌ ಪ್ರೇಕ್ಷಕರು ಶೋನಿಂದ ಶೋಗೆ ನುಗ್ಗಿ ಬರುತ್ತಿದ್ದಾರೆ. ಎಷ್ಟೋ ತಿಂಗಳುಗಳ ನಂತರ “ಹೌಸ್‌ಫ‌ುಲ್‌’, “ಚಿತ್ರಮಂದಿರ ತುಂಬಿದೆ’ ಎಂಬ ಫ‌ಲಕಗಳು ಮೈಕೊಡವಿಕೊಂಡು ಚಿತ್ರಮಂದಿರಗಳ ಮುಂದೆ ರಾರಾಜಿಸುತ್ತಿದೆ. ಇದು ಕೇವಲ “ಭೀಮ’ ಚಿತ್ರದ ನಿರ್ಮಾಪಕರಿಗಷ್ಟೇ ಅಲ್ಲ, ನಿಜವಾದ ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ.  ಈ ತರಹದ ಒಂದು ಭರ್ಜರಿ ಓಪನಿಂಗ್‌ ಈ ಸಂದರ್ಭಕ್ಕೆ ಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ.

ವಿಜಯ್‌ 360 ಡಿಗ್ರಿ ಪ್ರಚಾರ: “ಭೀಮ’ ಭರ್ಜರಿ ಪ್ರದರ್ಶನ ಒಂದು ವಿಚಾರವನ್ನು ಸಾಬೀತು ಮಾಡಿದೆ. ಅದು ಪ್ರೇಕ್ಷಕರ ಕುರಿತಾಗಿ. ಪ್ರೇಕ್ಷಕ ಪ್ರಭು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ. ಆತನನ್ನು ಚಿತ್ರಮಂದಿರಕ್ಕೆ ಕರೆಸುವಂತಹ ಸಿನಿಮಾ ಬರಬೇಕು, ಜೊತೆಗೆ ಒಂದೊಳ್ಳೆಯ ಪ್ರಚಾರದ ಮೂಲಕ ಆತನಿಗೆ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸಬೇಕೆಂಬುದು. ಈ ವಿಚಾರದಲ್ಲಿ “ಭೀಮ’ನದ್ದು ದೊಡ್ಡ ಸಾಧನೆ. ದುನಿಯಾ ವಿಜಯ್‌ ಸಿನಿಮಾ ಡೇಟ್‌ ಅನೌನ್ಸ್‌ ಆದ ಬಳಿಕ ಮಾಡಿಕೊಂಡು ಪ್ರಚಾರದ ವಿನ್ಯಾಸವೇ ವಿಭಿನ್ನವಾಗಿತ್ತು. ಕೇವಲ “ಪೋಸ್ಟ್‌’, “ಪೋಸ್ಟರ್‌’ಗಷ್ಟೇ ಸೀಮಿತವಾಗದೇ, ಕಾಲೇಜು, ಪಾರ್ಕ್‌, ವಾಕಿಂಗ್‌, ಟಾಕಿಂಗ್‌, ಸ್ಟಾರ್‌ ಇಂಟರ್‌ವ್ಯೂ, ಹೋಟೆಲ್‌, ಜಿಮ್‌.. ಹೀಗೆ 360 ಡಿಗ್ರಿ ಪ್ರಚಾರ ಮಾಡುವ ಮೂಲಕ “ಭೀಮ’ ಒಂದು ಹಂತಕ್ಕೆ ತಂದು ನಿಲ್ಲಿಸಿದ್ದರು. “ಎ’ ಪ್ರಮಾಣ ಪತ್ರದೊಂದಿಗೆ ಬಂದ ಸಿನಿಮಾವಾದ್ದರಿಂದ ಫ್ಯಾಮಿಲಿ ಆಡಿಯನ್ಸ್‌ಗಿಂತ ಮಾಸ್‌ ಪ್ರೇಕ್ಷಕರೇ ತಮ್ಮ ಟಾರ್ಗೆಟ್‌ ಎಂಬುದು ವಿಜಯ್‌ ಆ್ಯಂಡ್‌ ಟೀಮ್‌ಗೆ ಚೆನ್ನಾಗಿ ಗೊತ್ತಿತ್ತು.

ಅದರಂತೆ ಮಾಸ್‌ “ಭೀಮ’ ನೋಡಿ ಖುಷಿಪಡುತ್ತಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಬಹುತೇಕ ಎಲ್ಲಾ ಶೋಗಳು ಹೌಸ್‌ಫ‌ುಲ್‌ ಆಗಿವೆ. ಸಹಜವಾಗಿಯೇ ಯಾವುದೇ ಸೂಪರ್‌ಸ್ಟಾರ್‌, ಸೂಪರ್‌ ಹಿಟ್‌ ಸಿನಿಮಾಗಳು ವೀಕ್‌ ಡೇಸ್‌ನಲ್ಲಿ ಮೊದಲರ್ಧದ ಪ್ರದರ್ಶನ ಕೊಂಚ ಸಪ್ಪೆಯಾಗಿರುತ್ತದೆ. ಆದರೆ, ಮಾಸ್‌ ಸಿನಿಮಾಗಳು ಮ್ಯಾಟ್ನಿ ನಂತರದ ಶೋಗಳು ತುಂಬುತ್ತವೆ ಎಂಬ ಮಾತಿದೆ. ಈ ವಿಚಾರದಲ್ಲಿ “ಭೀಮ’ನ ಮೇಲೂ ನಿರೀಕ್ಷೆ ಇದೆ.

ಸ್ಟಾರ್‌ ಸಿನ್ಮಾ ಬರಬೇಕು…

ಇಡೀ ಚಿತ್ರರಂಗ ಸ್ಟಾರ್‌ಗಳ ಸಿನಿಮಾ ಬಂದರೆ ಒಂದು ಜೋಶ್‌ ಬರುತ್ತದೆ ಎನ್ನುತ್ತಲೇ ಬಂದಿದೆ. ಅದು ಸತ್ಯ ಕೂಡಾ. ಅದನ್ನು ಮತ್ತೂಮ್ಮೆ ಸಾಬೀತು ಮಾಡಿದ್ದು “ಭೀಮ’. ಸ್ಟಾರ್‌ಗಳಿಗೆ ಒಂದು ಅಭಿಮಾನಿ ವರ್ಗವಿರುವುದರಿಂದ ಸಿನಿಮಾ ಓಪನಿಂಗ್‌ ತೆಗೆದುಕೊಳ್ಳುವುದು ಸುಲಭ. ಅದರಲ್ಲೂ ಆ್ಯಕ್ಷನ್‌, ಮಾಸ್‌ ಆದರೆ ಅದು ಇನ್ನೂ ಸುಲಭ. ಸಿನಿಮಾ ಒಂಚೂರು ಚೆನ್ನಾಗಿದ್ದು, ಮಾಸ್‌ ಮನ ಗೆದ್ದರೆ ಅದರ ಓಟ ನಿರಾಳ.. ಈ ವಿಚಾರದಲ್ಲಿ ಸೆಕೆಂಡ್‌ ಹಾಫ್ನಲ್ಲಿ ಸ್ಟಾರ್‌ ಚಿತ್ರವಾಗಿ “ಭೀಮ’ ಒಂದು ಭರವಸೆ ಮೂಡಿಸಿದೆ.

ಹಾಗೆ ನೋಡಿದರೆ “ಭೀಮ’ ತಂದ ಧೈರ್ಯವನ್ನು ಮೆಚ್ಚಲೇಬೇಕು. ಸಾಮಾನ್ಯವಾಗಿ ಚಿತ್ರಮಂದಿರಕ್ಕೆ ಬರುವ ಮುನ್ನ ಸ್ಯಾಟ್‌ಲೈಟ್‌, ಓಟಿಟಿ ಸೇರಿದಂತೆ ಇತರ ಬಿಝಿನೆಸ್‌ಗಳನ್ನು ಮುಗಿಸಿಕೊಂಡೇ ಬರುತ್ತಾರೆ. ಆದರೆ, ಮೂಲಗಳ ಪ್ರಕಾರ, “ಭೀಮ’ ತಂಡ ಮಾತ್ರ ಪ್ರೇಕ್ಷಕರನ್ನೇ ನಂಬಿಕೊಂಡು ಬಂದಿದೆ. ಇಲ್ಲಿ ಗೆದ್ದರೆ “ಡಿಜಿಟಲ್‌’ ಬಿಝಿನೆಸ್‌ನಲ್ಲಿ ಗೆಲ್ಲುತ್ತೇವೆ ಎಂಬ ನಂಬಿಕೆ ಅವರದು. ಈಗ ಅವರ ವಿಶ್ವಾಸ ಗೆದ್ದಂತಿದೆ. “ಭೀಮ’ನ ಕಲೆಕ್ಷನ್‌, ಚಿತ್ರಮಂದಿರಕ್ಕೆ ನುಗ್ಗಿ ಬರುತ್ತಿರುವ ಜನರನ್ನು ನೋಡಿ ಇನ್ನೊಂದಿಷ್ಟು ಸಿನಿಮಾ ತಂಡಗಳಿಗೆ ತಮ್ಮ ಚಿತ್ರಗಳ ಮೇಲೆ ವಿಶ್ವಾಸ ಮೂಡಿದ್ದು, ಬಿಡುಗಡೆಗೆ ತಯಾರಿ ನಡೆಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಇಂತಹ ಒಂದು ಓಪನಿಂಗ್‌ ಬೇಕಿತ್ತು. ಆ ವಿಚಾರದಲ್ಲಿ ಭೀಮನ ಸಾಧನೆ ಚೆನ್ನಾಗಿದೆ. ಬಹುತೇಕ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿದೆ. ನಾನು ಕಂಡ ಸತ್ಯವೆಂದರೆ 100-200 ಕೋಟಿ ಬಜೆಟ್‌ನ ಚಿತ್ರ ಬಿಡುಗಡೆಯಾದಾಗ ಪ್ರೇಕ್ಷಕ ಒಪ್ಪದೇ ಇದ್ದಾಗ ಎರಡನೇ ದಿನದ ಗಳಿಕೆ ಕುಸಿಯುತ್ತದೆ. ಆದರೆ, “ಭೀಮ’ ಕನ್ನಡ ಚಿತ್ರ ಎರಡನೇ ದಿನದಲ್ಲಿ ಶೇ 90 ಗಳಿಸಿದೆ ಎಂದರೆ ಪ್ರೇಕ್ಷಕರು ತುಂಬಾ ಪ್ರಬುದ್ಧರಾಗಿದ್ದಾರೆ. ಪ್ರೇಕ್ಷಕರು ಮಾತ್ರ ಸಿನಿಮಾ ಉದ್ಯಮವನ್ನು ಬದಲಾಯಿಸಬಹುದು ಮತ್ತು ಉಳಿಸಬಹುದು. ಕೆ.ವಿ.ಚಂದ್ರಶೇಖರ್‌, ಅಧ್ಯಕ್ಷರು, ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.