Krishna Sarthak; ಭೀಮ ಗೆಲುವಲ್ಲಿ ಸಾರ್ಥಕ ಸಂಭ್ರಮ: ʼಕೃಷ್ಣʼನ್‌ ಸಕ್ಸಸ್‌ ಸ್ಟೋರಿ


Team Udayavani, Aug 23, 2024, 4:33 PM IST

Krishna Sarthak; ಭೀಮ ಗೆಲುವಲ್ಲಿ ಸಾರ್ಥಕ ಸಂಭ್ರಮ: ʼಕೃಷ್ಣʼನ್‌ ಸಕ್ಸಸ್‌ ಸ್ಟೋರಿ

“ಭೀಮ’ ಗೆದ್ದಿದೆ. ನಿರ್ಮಾಪಕರು ಖುಷಿಯಾಗಿದ್ದಾರೆ. ಅದರಲ್ಲೂ ಇನ್ನೂ ಚಿಕ್ಕ ವಯಸ್ಸಿನ ಚಿಗುರು ಮೀಸೆಯ ನಿರ್ಮಾಪಕ ಕೃಷ್ಣ ಸಾರ್ಥಕ್‌ ಸ್ವಲ್ಪ ಹೆಚ್ಚೇ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ತುಂಬಾ ವರ್ಷಗಳ ನಿರ್ಮಾಣದ ಶ್ರಮಕ್ಕೆ ಸಿಕ್ಕ ಫ‌ಲ.

“ದಯವಿಟ್ಟು ಗಮನಿಸಿ’ ಎಂಬ ಸಿನಿಮಾ ಮೂಲಕ ನಿರ್ಮಾಪಕರಾದವರು ಕೃಷ್ಣ ಸಾರ್ಥಕ್‌. ಮಾಡಿದ ಸಿನಿಮಾಗಳೆಲ್ಲವೂ ದೊಡ್ಡ ಮಟ್ಟದಲ್ಲಿ ಕೈ ಹಿಡಿಯದಿದ್ದರೂ, ಕಾಸು ಕಳೆದು ಕೊಳ್ಳುತ್ತಿರಲಿಲ್ಲ. ಹಾಗೆಯೇ ಯಾರಿಗೂ ಬಿಡಿಗಾಸನ್ನು ಬಾಕಿ ಇಟ್ಟುಕೊಳ್ಳದೇ ಲೆಕ್ಕ ಚುಕ್ತಾ ಮಾಡಿಬಿಡುತ್ತಿದ್ದರು ಕೃಷ್ಣ ಸಾರ್ಥಕ್‌. ಇಂತಿಪ್ಪ ಕೃಷ್ಣ ಸಾರ್ಥಕ್‌ಗೆ ಸ್ಟಾರ್‌ ಸಿನಿಮಾ ಮಾಡುವ ಬಯಕೆ. ಆಗ ಮೊದಲು ಕಣ್ಣೆದುರಿಗೆ ಬಂದದ್ದೇ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌. ಅದರ ಹಿಂದೆ ಕಾರಣವೂ ಇದೆ.

ಕೃಷ್ಣ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಬಯಕೆ. ಕುಟುಂಬದವರೊಂದಿಗೆ ಸಾಕಷ್ಟು ಸಿನಿಮಾಗಳನ್ನು ನೋಡಿರುವ ಕೃಷ್ಣ, ಮೊದಲು ನೋಡಿದ್ದು ಶಿವಣ್ಣ ನಟಿಸಿದ್ದ 50ನೇ ಸಿನಿಮಾ “ಎ.ಕೆ 47′. “ನಾನೇನಾದ್ರೂ ಪ್ರೊಡ್ನೂಸರ್‌ ಆದ್ರೆ ಶಿವಣ್ಣನ ಸಿನಿಮಾ ಮಾಡ್ಬೇಕು’ ಎಂದು ಸುಮಾರು ವರ್ಷಗಳ ಹಿಂದೆಯೇ ತೀರ್ಮಾನಕ್ಕೆ ಬಂದುಬಿಡುತ್ತಾರೆ. “ದೇವರ ದಯೆಯೋ, ನನ್ನ ಕುಟುಂಬದವರ ಆಶೀರ್ವಾದವೋ ಇಂಡಸ್ಟ್ರಿಗೆ ಬಂದ ಮೂರ್ನಾಲ್ಕು ವರ್ಷದಲ್ಲೇ ಶಿವಣ್ಣ ಸಿನಿಮಾ ಪ್ರೊಡ್ಯೂಸ್‌ ಮಾಡುವ ಸುಯೋಗ ಒದಗಿ ಬಂತು’ ಎನ್ನುವ ಕೃಷ್ಣ ಸಾರ್ಥಕ್‌, ತಡಮಾಡದೇ “ಬೈರಾಗಿ’ಗೆ ಮುಹೂರ್ತ ಮಾಡುತ್ತಾರೆ.

ದೊಡ್ಡ ಮಟ್ಟದಲ್ಲಿಯೇ “ಬೈರಾಗಿ’ಯನ್ನು ನಿರ್ಮಿಸಿದ್ದ ಕೃಷ್ಣ ಸಾರ್ಥಕ್‌, ಮುಂದೆ ಮತ್ತಷ್ಟು ಸಿನಿಮಾ ಮಾಡುವ ಹುಮ್ಮಸ್ಸು ಚಿಗುರೊಡೆಯಿತು. ಆಗಷ್ಟೇ “ಸಲಗ’ ಮೂಲಕ ಗೆಲುವಿನ ಪತಾಕೆ ಹಾರಿಸಿದ್ದ ವಿಜಯ್‌ ಕುಮಾರ್‌, ಹೊಸ ಸಿನಿಮಾ ಮಾಡುವ ತಯಾರಿಯಲ್ಲಿದ್ದರು. ಅದರ ನಿರ್ಮಾತೃವಾಗಿ ಕೈ ಜೋಡಿಸಿದ್ದು ಕೃಷ್ಣ ಸಾರ್ಥಕ್‌. ಇವರೊಟ್ಟಿಗೆ ಜಗದೀಶ್‌ ಗೌಡ ಸಹ ಸಾಥ್‌ ನೀಡಿದರು. ಇಂದು ಇಡೀ ಚಿತ್ರತಂಡ “ಭೀಮ’ನ ಗೆಲುವನ್ನು ಸಂಭ್ರಮಿಸುತ್ತಿದೆ. ಗೆಲುವಿನ ಮಳೆಯಿಲ್ಲದೇ ಕಂಗಾಲಾಗಿದ್ದ ಚಂದನವನಕ್ಕೆ ಮಹಾ ಮಳೆಯಾಗಿದೆ.

ಹೊಸ ಪ್ರತಿಭೆಗಳಿಗೆ, ಮತ್ತಷ್ಟು ಸಿನಿಮಾ ತಂಡಗಳಿಗೆ “ಭೀಮ’ ಬಲ ತುಂಬಿದಂತೆ ಚೈತನ್ಯದಿಂದ ಓಡಾಡುವಂತಾಗಿದೆ. ಇದರ ಹಿಂದಿರುವ ಮಾಸ್ಟರ್‌ ಮೈಂಡ್‌, ಸದಾ ಲವಲವಿಕೆಯಿಂದ ಕೂಡಿರುವ ಕೃಷ್ಣ ಸಾರ್ಥಕ್‌ ಕೆಲಸ ಮಾತನಾಡುತ್ತಿದೆ. ಕೃಷ್ಣ ಕ್ರಿಯೇಷನ್ಸ್‌ ಬ್ಯಾನರ್‌ ಮೂಲಕ ಒಂದು ಕೋಟಿಯಿಂದ ನಿರ್ಮಾಣ ಶುರುವಾದ ಸಿನಿಮಾದ ಕಾರ್ಯಗಳು ಇಂದು 25 ಕೋಟಿಯವರೆಗೂ ಬಂದು ತಲುಪಿದೆ. ಇವೆಲ್ಲದರ ಫ‌ಲವಾಗಿ ಇಂದು ಕೃಷ್ಣ ಸಾರ್ಥಕ ಭಾವದಲ್ಲಿದ್ದಾರೆ.

ಟಾಪ್ ನ್ಯೂಸ್

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

PROTEST

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

police

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baghi

Hombale Films ಬಹು ನಿರೀಕ್ಷಿತ ಬಘೀರ ಚಿತ್ರದ ರಿಲೀಸ್ ಡೇಟ್ ಘೋಷಣೆ

Ronny actress Samikshaa

Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ

fire-fly

Firefly: ಟೀಸರ್‌ ನಲ್ಲಿ ಮಿಂಚಿದ ʼಫೈರ್‌ ಫ್ಲೈʼ

krishnam pranaya sakhi 25th day celebration

Krishnam Pranaya Sakhi: ಕೃಷ್ಣ 25ರ ಸಂಭ್ರಮ; ಚಿತ್ರ ಗೆದ್ದಿದೆ, ಕಲೆಕ್ಷನ್‌ ಹೇಳಲ್ಲ..

ಮುಖವಾಡ ಹಾಕಿದವರು ವರ್ಚಸ್ಸು ಕಾಪಾಡಿಕೊಳ್ಳಿ: ರಚಿತಾ ರಾಮ್‌ ಪೋಸ್ಟ್

Rachita Ram: ಮುಖವಾಡ ಹಾಕಿದವರು ವರ್ಚಸ್ಸು ಕಾಪಾಡಿಕೊಳ್ಳಿ: ರಚಿತಾ ರಾಮ್‌ ಪೋಸ್ಟ್

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

congress

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

suicide (2)

Kanpur:ಮಹಿಳೆಯ ಬೆತ್ತಲೆ, ರುಂಡವಿಲ್ಲದ ಮೃತದೇಹ ಪತ್ತೆ

1bbb

Baahubali; ನೆರೆ ನೀರಲ್ಲಿ ತಲೆ ಮೇಲೆ ಬೈಕ್‌ ಹೊತ್ತು ನಡೆದ ‘ಬಾಹುಬಲಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.