![Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ](https://www.udayavani.com/wp-content/uploads/2024/07/raga-2-415x247.jpg)
ಬರ್ತ್ಡೇ ಬಾಯ್ ಪ್ರಮೋದ್ ಸಿಕ್ಕಾಪಟ್ಟೆ ಬಿಝಿ
Team Udayavani, Jan 10, 2021, 3:37 PM IST
![ಬರ್ತ್ಡೇ ಬಾಯ್ ಪ್ರಮೋದ್ ಸಿಕ್ಕಾಪಟ್ಟೆ ಬಿಝಿ](https://www.udayavani.com/wp-content/uploads/2021/01/pramod-620x403.jpg)
ಕೆಲವು ನಾಯಕ ನಟರು ಆರಂಭದಲ್ಲೇ ಭರವಸೆ ಮೂಡಿಸುತ್ತಾರೆ. ಆ ತರಹದ ಭರವಸೆ ಮೂಡಿಸಿದ ನವನಟ ಪ್ರಮೋದ್. ಯಾರು ಈ ಪ್ರಮೋದ್ ಎಂದರೆ “ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ನಟ. ಈಗ ಪ್ರಮೋದ್ ಬಿಝಿ ಯುವ ನಟರ ಪಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆಂದರೆ ತಪ್ಪಲ್ಲ. ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ
ಪ್ರಮೋದ್ ಕೈಯಲ್ಲಿ ಸದ್ಯ ಎಂಟು ಸಿನಿಮಾಗಳಿವೆ. ಇದರಲ್ಲಿ ಕೆಲವು ಸಿನಿಮಾಗಳು ಇಂದು ಸಿನಿಮಾದ ಫಸ್ಟ್ಲುಕ್, ಪೋಸ್ಟರ್ ಲಾಂಚ್ ಮಾಡುವ ಮೂಲಕ ಚಿತ್ರ ಶುಭಕೋರಲಿವೆ.
ಪ್ರಮೋದ್ ಕೈಯಲ್ಲಿರುವ ಸಿನಿಮಾಗಳು ಯಾವ್ಯಾವು ಎಂದು ನೀವು ಕೇಳಬಹುದು. ಧನಂಜಯ್ ನಾಯಕರಾಗಿರುವ “ರತ್ನನ್ ಪ್ರಪಂಚ’ ಸಿನಿಮಾದಲ್ಲಿ ಸೆಕೆಂಡ್ ಲೀಡ್ ಮಾಡುತ್ತಿದ್ದಾರೆ. ಮಿಕ್ಕಂತೆ ಎಲ್ಲಾ ಚಿತ್ರಗಳಲ್ಲೂ ಹೀರೋ ಆಗಿ ನಟಿಸುತ್ತಿದ್ದಾರೆ. “ಇಂಗ್ಲೀಷ್ ಮಂಜ’, ಡಿಸೈನರ್ ಅವೀಸ್ ನಿರ್ದೇಶನದ ಚಿತ್ರ, ಗೀತರಚನೆಕಾರ ಸಂತೋಷ್ ನಾಯಕ್ ನಿರ್ದೇಶನದ ಹೊಸ ಚಿತ್ರ ಜೊತೆಗೆ “ಅಲಂಕಾರ್ ವಿದ್ಯಾರ್ಥಿ’, “ಪ್ರೀಮಿಯರ್ ಪದ್ಮಿನಿ-2′ ಹಾಗೂ ಇದರ ಜೊತೆಗೆ ಇನ್ನೂ ಎರಡು ಚಿತ್ರಗಳು ಕೈಯಲ್ಲಿವೆ. ಈ ಮೂಲಕ ಪ್ರಮೋದ್ ಬಿಝಿ ನವನಟರ ಸಾಲಿಗೆ ಸೇರಿದಂತಾಗಿದೆ. “ತುಂಬಾ ಖುಷಿಯಾಗುತ್ತಿದೆ.
ಇದನ್ನೂ ಓದಿ:ಶ್ರೀನಿಧಿ ಶೆಟ್ಟಿ ಗೆ ಡಬಲ್ ಖುಷಿ ಕೋಬ್ರಾ ಟೀಸರ್ ರಿಲೀಸ್
ವಿಭಿನ್ನವಾದ ಕಥೆಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಈ ಮಟ್ಟಕ್ಕೆ ಸಿನಿಮಾರಂಗ ನನ್ನ ಕೈ ಹಿಡಿಯುತ್ತದೆ ಅಂದುಕೊಂಡಿರಲಿಲ್ಲ. ನನ್ನ ಪಾತ್ರಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ’ ಎನ್ನುವುದು ಪ್ರಮೋದ್ ಮಾತು.
ಟಾಪ್ ನ್ಯೂಸ್
![Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ](https://www.udayavani.com/wp-content/uploads/2024/07/raga-2-415x247.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ](https://www.udayavani.com/wp-content/uploads/2024/07/raga-2-150x89.jpg)
Election: ಅಯೋಧ್ಯೇಲಿ ಸ್ಪರ್ಧಿಸಿದ್ರೆ ಮೋದಿ ಸೋಲು ಎಂದಿತ್ತು ಸಮೀಕ್ಷೆ: ರಾಗಾ
![Police-Head](https://www.udayavani.com/wp-content/uploads/2024/07/Police-Head-150x86.jpg)
Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ
![Prahalad-Joshi](https://www.udayavani.com/wp-content/uploads/2024/07/Prahalad-Joshi-150x90.jpg)
MUDA Scam ತನಿಖೆ ಸಿಬಿಐಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
![Masoud Pezeshkian: ಇರಾನ್ನಲ್ಲಿ ಸುಧಾರಣ ಆಡಳಿತದ ಜಮಾನ ಶುರು](https://www.udayavani.com/wp-content/uploads/2024/07/masood-150x84.jpg)
Masoud Pezeshkian: ಇರಾನ್ನಲ್ಲಿ ಸುಧಾರಣ ಆಡಳಿತದ ಜಮಾನ ಶುರು
![23](https://www.udayavani.com/wp-content/uploads/2024/07/23-150x90.jpg)
“140ಕ್ಕೂ ಹೆಚ್ಚು ಮುಡಾ ಕಡತ ಕದ್ದೊಯ್ದ ಅಧಿಕಾರಿಗಳು’ʼ: ಶಾಸಕ ಟಿ.ಎಸ್. ಶ್ರೀವತ್ಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.