![Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು](https://www.udayavani.com/wp-content/uploads/2025/02/delhi-8-415x213.jpg)
![Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು](https://www.udayavani.com/wp-content/uploads/2025/02/delhi-8-415x213.jpg)
Team Udayavani, Jan 29, 2025, 11:10 AM IST
ಬೆಂಗಳೂರು: ಬಂದೂಕು ಪರವಾನಗಿ ಅಮಾನತುಗೊಳಿಸಿ ಉಪ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ನಟ ದರ್ಶನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರು ವು ದರಿಂದ ಸಾಕ್ಷಿಗಳ ಮೇಲೆ ತಮ್ಮ ಬಳಿ ಇರುವ ಪಿಸ್ತೂಲ್ ಬಳಸಿ ಸಾಕ್ಷ್ಯ ನಾಶಪಡಿ ಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬಂದೂಕು ಪರವಾಗಿ ರದ್ದುಪಡಿಸಿ ಜ.20ರಂದು ಉಪ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅದನ್ನು ಪ್ರಶ್ನಿಸಲಾಗಿದೆ.
ಕುಟುಂಬ ಮತ್ತು ತನ್ನ ಸುರಕ್ಷತೆಯ ದೃಷ್ಟಿಯಿಂದ ಬಂದೂಕು ಪರವಾನಗಿ ಪಡೆದಿದ್ದು, ಪರವಾನಗಿ ಪಡೆಯಲು ಅಗತ್ಯವಾದ ನಿಯಮ ಪಾಲಿಸಲಾಗಿದೆ. ಪರವಾನಗಿ ರದ್ದುಪಡಿ ಸುವ ಸಂಬಂಧ ಜ.7ಕ್ಕೆ ಶೋಕಾಸ್ ನೀಡಲಾಗಿತ್ತು. ಅದಕ್ಕೆ ಉತ್ತರಿಸಿ ಬಂದೂಕು ದುರ್ಬಳಕೆ ಮಾಡುವುದಿಲ್ಲ ಎಂದು ಹೇಳಲಾಗಿತ್ತು. ಅದಾಗ್ಯೂ ಪರವಾನಗಿ ರದ್ದುಪಡಿಸಿ ಜ.20ರಂದು ಆದೇಶಿಸಿ, ಜ.21ರಂದು ಪೊಲೀಸರು ಬಂದೂಕು ವಶಕ್ಕೆ ಪಡೆದು ಕೊಂಡಿದ್ದಾರೆ. ತನಗೆ ಕಿರುಕುಳ ನೀಡುವ ಉದ್ದೇಶದಿಂದ ಪರವಾ ನಗಿ ರದ್ದುಪಡಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Robbery Case: ಅಸಲಿ ಪೊಲೀಸ್ನ ನಕಲಿ ಆಟವನ್ನು ಭೇದಿಸಿದರು!
Indian Deportees: ಭಾರತೀಯರಿಗೆ ಮತ್ತೆ ಕೋಳ ತೊಡಿಸಿ ಗಡೀಪಾರು!
Mahakumbha Mela: ದೇಶದ ಬಹುತೇಕ ರೈಲು ನಿಲ್ದಾಣಗಳು ರಶ್
You seem to have an Ad Blocker on.
To continue reading, please turn it off or whitelist Udayavani.