Chandan Shetty: ʼಸಲಗʼ ನಟಿ ಸಂಜನಾ ಜತೆ ಚಂದನ್ 2ನೇ ಮದುವೆ? ರ್ಯಾಪರ್ ಹೇಳಿದ್ದೇನು?
Team Udayavani, Oct 9, 2024, 4:03 PM IST
ಬೆಂಗಳೂರು: ಸೆಲೆಬ್ರಿಟಿ ಲೈಫ್ ಲೀಡ್ ಮಾಡುವವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನಾನಾ ಸುದ್ದಿಗಳು, ಗಾಸಿಪ್ ಹಾಗೂ ವದಂತಿಗಳು ಹರಿದಾಡುತ್ತಲೇ ಇರುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಚಂದನ್ ಶೆಟ್ಟಿ (Chandan Shetty) ಹಾಗೂ ನಟಿ ಸಂಜನಾ ಆನಂದ್ (Sanjana Anand)
ಗಾಯಕ ಚಂದನ್ ಶೆಟ್ಟಿ ನಿವೇದಿತಾ ಅವರೊಂದಿಗಿನ ವಿಚ್ಚೇದನದ ಬಳಿಕ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ಪ್ರಾಜೆಕ್ಟ್ ಹಾಗೂ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಚಂದನ್ ಶೆಟ್ಟಿ ಖ್ಯಾತ ನಟಿಯ ಜತೆ ಎರಡನೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ.
ಇದನ್ನೂ ಓದಿ: BB18: ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ
ʼಸಲಗʼ ಬೆಡಗಿ ಸಂಜನಾ ಆನಂದ್ ಅವರ ಜತೆ ಚಂದನ್ ಶೆಟ್ಟಿ ವಿವಾಹವಾಗಲಿದ್ದಾರೆ ಎನ್ನುವ ಪೋಸ್ಟ್ ಗಳು ಟ್ರೋಲ್ ಪೇಜ್ ಗಳಲ್ಲಿ ಹರಿದಾಡಿದೆ. ಈ ಸುದ್ದಿಗೆ ಸಂಜನಾ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಇದು ಸಂಪೂರ್ಣ ಸುಳ್ಳು ಸುದ್ದಿಯೆಂದು ಹೇಳಿದ್ದಾರೆ.
ಆದರೆ ಇದಾದ ಬಳಿಕವೂ ಅನೇಕರು ಸಂಜನಾ ಹಾಗೂ ಚಂದನ್ ಅವರನ್ನು ಟ್ಯಾಗ್ ಮಾಡಿ ಮದುವೆ ಬಗ್ಗೆ ಕೇಳಿದ್ದಾರೆ.
ಟ್ರೆಂಡಿಂಗ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ಮದುವೆಯ ಕುರಿತು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಬಲ್ಲ ಮೂಲಗಳ ಪ್ರಕಾರ ಇವರಿಬ್ಬರ ಮದುವೆ ಸದ್ಯದಲ್ಲಿಯೇ ಅದ್ದೂರಿಯಾಗಿ ನಡೆಯಲಿದೆ ಎಂದು ಫೋಸ್ಟ್ ನಲ್ಲಿ ಹೇಳಲಾಗಿದೆ.
ಈ ಪೋಸ್ಟ್ಗೆ ಅನೇಕರು ಕಮೆಂಟ್ ಮಾಡಿದ್ದು, ಸ್ವತಃ ಚಂದನ್ ಶೆಟ್ಟಿ ಅವರೇ ಕಮೆಂಟ್ ಮಾಡಿದ್ದಾರೆ. “ಫೇಕ್ ನ್ಯೂಸ್, ದಯವಿಟ್ಟು ಸುಳ್ಳು ಮಾಹಿತಿಯನ್ನು ಹಬ್ಬಿಸಬೇಡಿ” ಎಂದು ಕಮೆಂಟ್ ಮಾಡಿ ಎಲ್ಲಾ ಗೊಂದಲಕ್ಕೂ ತೆರೆ ಎಳೆದಿದ್ದಾರೆ.
ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಸೂತ್ರಧಾರಿ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ಇಬ್ಬರು ಜತೆಯಾಗಿ ಹೆಜ್ಜೆ ಹಾಕಿದ್ದು, ಇದನ್ನು ನೋಡಿ ಕೆಲ ಫ್ಯಾನ್ಸ್ ಗಳು ಪರ್ಫಕ್ಟ್ ಜೋಡಿಯೆಂದು ಕಮೆಂಟ್ ಮಾಡಿದ್ದರು. ಅಲ್ಲಿಂದಲೇ ಈ ಮದುವೆಯ ವಿಚಾರ ಹಬ್ಬಿದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Toxic Movie: ಮುಂಬೈನತ್ತ ಯಶ್ ಟಾಕ್ಸಿಕ್ ಪಯಣ
Bhool Bhulaiyaa 3 trailer: ʼಮಂಜುಲಿಕಾʼಗಳ ರಹಸ್ಯ ಬಯಲಿಗೆ ʼರೂಹ್ ಬಾಬಾʼನಾದ ಕಾರ್ತಿಕ್
MUDA CASE: ಮರೆಮಾಚಲು ಜಾತಿಗಣತಿ ಉದ್ಭವ: ಶಾಸಕ ಕಂದಕೂರ
Hosanagara: 3 ಚಿನ್ನದ ಉಂಗುರ ಸಹಿತ ನಗದು ದೋಚಿ ಪರಾರಿಯಾದ ಕಳ್ಳರು
ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ವಿರುದ್ಧ ತೆರೆಮರೆಯ ಚಟುವಟಿಕೆ ನಡೆಯುತ್ತಿದೆ: ಸಿ.ಟಿ. ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.