![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 8, 2020, 3:16 PM IST
ಬೆಂಗಳೂರು:ನಿರ್ದೇಶಕ ಯೋಗರಾಜ್ ಭಟ್ ,ಶಶಾಂಕ್, ಕೆ. ಎಂ. ಚೈತನ್ಯ, ಜಯತೀರ್ಥ, ಪವನ್ ಕುಮಾರ್ ಇವರೆಲ್ಲಾ ಚಿತ್ರರಂಗದಲ್ಲಿ ತಮ್ಮನ್ನು ತಾವು ವಿಭಿನ್ನವಾಗಿ ಗುರುತಿಸಿಕೊಂಡವರು. ಇದೀಗ ಈ ಪಂಚ ಪಾಂಡವರು ಒಟ್ಟಾಗಿ ಸೇರಿ ಹೊಸ ಚಿತ್ರವೊಂದನ್ನು ರೂಪಿಸಲು ಹೊರಟಿದ್ದಾರೆ. ಇನ್ನು ಟೈಟಲ್ ಬಿಡುಗಡೆಯಾಗದ ಈ ಸಿನಿಮಾಕ್ಕೆ ಪಾತ್ರಗಳ ಆಯ್ಕೆಯನ್ನು ಚಿತ್ರತಂಡ ಮುಗಿಸಿದ್ದು ಕೆಲ ಪ್ರಮುಖ ಪಾತ್ರಗಳಿಗಾಗಿ ಕಾಮಿಡಿ ಕಿಲಾಡಿಗಳನ್ನು ಆರಿಸಿಕೊಂಡಿದ್ದಾರೆ.
ಯೋಗರಾಜ್ ಭಟ್ ಸಿನಿಮಾ ಅಂದ ಮೇಲೆ ಅಲ್ಲಿ ಅದ್ಭುತ ಸಂಭಾಷಣೆಯ ಜೊತೆ ಜೊತೆಗೆ ಒಂದಷ್ಟು ತಮಾಷೆಯಂತೂ ಇದ್ದೇ ಇರುತ್ತದೆ. ಹಾಗಾಗಿ ಈ ಹೊಸ ಚಿತ್ರಕ್ಕಾಗಿ ಕಾಮಿಡಿ ಕಿಲಾಡಿಗಳಾದ ನಯನ, ಗೋವಿಂದೇಗೌಡ, ದಿವ್ಯಾ ರನ್ನು ತೆರೆ ಮೇಲೆ ತರಲಿದ್ದಾರೆ.
ಸಿನಿಮಾದ ಕುರಿತಾಗಿ ಮಾತನಾಡಿದ ಯೋಗರಾಜ್ ಭಟ್ ಸಂಬಂಧಗಳು ಮುರಿದು ಬಿದ್ದಾಗ ಏನಾಗುತ್ತದೆ ಎಂಬುವುದೇ ನನ್ನ ಸಿನಿಮಾದ ಕಥೆಯಾಗಿದೆ. ನಾನು ಆಯ್ಕೆ ಮಾಡಿಕೊಂಡಿರುವ ಕಲಾವಿದರ ಜೊತೆಗೆ ಇನ್ನಷ್ಟು ಜನ ಸೇರಿಕೊಳ್ಳಲಿದ್ದಾರೆ. ಅಭಿನಯದಲ್ಲಿ ಅನುಭವ ಹೊಂದಿದವರು ನನ್ನ ಕಥೆಗೆ ಬೇಕಿತ್ತು ಹಾಗಾಗಿ ಇವರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಆನ್ಲೈನ್ ಮೂಲಕ ಬಿಲ್ ಪಾವತಿಸುವುದು ಹೇಗೆ?
ಪ್ರಸ್ತುತ ಈ ಚಿತ್ರದ ಕೆಲಸಗಳು ಬರದಿಂದ ಸಾಗಿದ್ದು ಚಿತ್ರದ ಹಾಡುಗಳು ಕೂಡ ಅದ್ಭುತವಾಗಿ ಮೂಡಿಬರಲಿವೆ ಎಂದು ಚಿತ್ರ ತಂಡ ತಿಳಿಸಿದೆ. ಚಿತ್ರದ ಕುರಿತು ಮಾಡನಾಡಿರುವ ನಿರ್ದೇಶಕ ಶಶಾಂಕ್ ನನ್ನ ಕಥೆಗಳು ಸಾಮಾನ್ಯವಾಗಿ ಮಹಿಳಾ ಪ್ರಧಾನ ಕತೆಗಳಾಗಿರುತ್ತವೆ ಹಾಗೂ ಮನರಂಜನೆಯೂ ಕೂಡ ಇರುತ್ತದೆ ಎಂದಿದ್ದಾರೆ.
ಈ ಸಿನಿಮಾ ಕೂಡಾ ಮಹಿಳಾ ಪ್ರಧಾನ ಕಥೆಯಾಗಿರಲಿದ್ದು, ಸಿನಿಮಾದಲ್ಲಿ ನಾಯಕಿಯಾಗಿ ಸಂಜನಾ ಆನಂದ್ ತರೆಮೇಲೆ ಬರಲಿದ್ದಾರೆ. ಅಲ್ಲದೆ ಇವರ ಜೊಡಿಯಾಗಿ ‘ನಡುವೆ ಅಂತರವಿರಲಿ’ ಖ್ಯಾತಿಯ ನಟ ಪ್ರಖ್ಯಾತ್ ಕಾಣಿಸಿಕೊಳ್ಳಲಿದ್ದು, ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟ ಶಶಾಂಕ್ ಪುರುಷೋತ್ತಮ್ ಬಣ್ಣ ಹಚ್ಚಲಿದ್ದಾರೆ ಎಂದು ವರದಿಯಾಗಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.