Copyright Case: ರಕ್ಷಿತ್ಗೆ 20 ಲಕ್ಷ ರೂ. ಠೇವಣಿ ಇಡಲು ದೆಹಲಿ ಹೈಕೋರ್ಟ್ ಆದೇಶ
Team Udayavani, Aug 18, 2024, 11:54 AM IST
ನವದೆಹಲಿ: ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರಿಗೆ ಕಾಪಿರೈಟ್ ಸಂಬಂಧದ ಪ್ರಕರಣದಲ್ಲಿ 20 ಲಕ್ಷ ರೂ. ಠೇವಣಿ ಇಡಲು ದೆಹಲಿ ಹೈಕೋರ್ಟ್ ಆದೇಶಿಸಿದೆ.
ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆ ಪರಂವಾ ಸ್ಟುಡಿಯೋಸ್ ನಿರ್ಮಿಸಿದ್ದ ‘ಬ್ಯಾಚು ಲರ್ ಪಾರ್ಟಿ’ ಸಿನಿಮಾದಲ್ಲಿ “ನ್ಯಾಯ ಎಲ್ಲಿದೆ’ ಹಾಡನ್ನು ಅನಧಿಕೃತವಾಗಿ ಬಳಸಲಾಗಿದೆ ಎಂದು ನವೀನ್ ಕುಮಾರ್ ಎಂಬುವರ ನೇತೃತ್ವದ ಎಂಆರ್ಟಿ ಮ್ಯೂಸಿಕ್ ಕಂಪನಿಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಆ.12 ರಂದೇ ತೀರ್ಪು ನೀಡಿತ್ತು ಎಂದು ಎಂ.ಆರ್.ಟಿ. ಮ್ಯೂಸಿಕ್ ಸಂಸ್ಥೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಚಿತ್ರದಲ್ಲಿ “ನ್ಯಾಯ ಎಲ್ಲಿದೆ’ ಮತ್ತು “ಒಮ್ಮೆ ನಿನ್ನನ್ನು’ ಎಂಬ ಹಾಡುಗಳನ್ನು ಅನುಮತಿಯಿಲ್ಲದೇ ಬಳಸಿಕೊಳ್ಳಲಾಗಿದೆ ಎಂದು ಎಂಆರ್ಟಿ ಸಂಸ್ಥೆ ಪ್ರತಿಪಾದಿಸಿ, ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿತ್ತು.
ಸಮನ್ಸ್ ನೀಡಿದ ಬಳಿಕವೂ ರಕ್ಷಿತ್ ವಿಚಾರಣೆಗೆ ಗೈರಾದ ಕಾರಣ ದೆಹಲಿ ಹೈಕೋರ್ಟ್ ಅವರಿಗೆ 20 ಲಕ್ಷ ರೂ. ಠೇವಣಿ ಇಡಲು ಸೂಚಿಸಿದೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡ ಲಾಗಿರುವ ಈ ಹಾಡುಗಳನ್ನು ತೆಗೆಯಬೇಕೆಂದು ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.