Renukaswamy Case: ಸೆ.12ರವರೆಗೆ ದರ್ಶನ್ & ಗ್ಯಾಂಗ್ಗೆ ಜೈಲೇ ಗತಿ
ನ್ಯಾಯಾಂಗ ಬಂಧನ ವಿಸ್ತರಣೆ
Team Udayavani, Sep 9, 2024, 2:21 PM IST
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ(Renukaswamy Case) ಜೈಲಿನಲ್ಲಿರುವ ನಟ ದರ್ಶನ್(Darshan) ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೋಮವಾರ(ಸೆ.9ರಂದು) ವಿಸ್ತರಣೆ ಮಾಡಲಾಗಿದೆ.
ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೆ ಹಾಜರಾದ ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟಿನಲ್ಲಿ ವಿಚಾರಣೆ ನಡೆಸಿತು.
ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ. ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
ಇನ್ನೊಂದೆಡೆ ದರ್ಶನ್ ಅವರು ಚಾರ್ಜ್ಶೀಟ್ನಲ್ಲಿನ ಗೌಪ್ಯ ಮಾಹಿತಿಯನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ನಿರ್ಬಂಧವನ್ನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ತನಿಖಾಧಿಕಾರಿ ಎಸಿಪಿ ಚಂದನ್ ಡಿಜಿಟಲ್ ಎವಿಡೆನ್ಸ್ ಗಳಾದ ಪೆನ್ ಡ್ರೈವ್, ಸಿಡಿ, ಡಿವಿಡಿ, ಹಾರ್ಡ್ ಡಿಸ್ಕ್ ಕಂ ಪೆನ್ ಡ್ರೈವ್ ಸೇರಿ ಒಟ್ಟು 60 ಡಿಜಿಟಲ್ ಎವಿಡೆನ್ಸ್ಗಳನ್ನು ಕೋರ್ಟ್ಗೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ಪೊಲೀಸರು ಪ್ರಕರಣ ಸಂಬಂಧ 3991 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಕೋರ್ಟ್ಗೆ ಸಲ್ಲಿಕೆ ಮಾಡಿರುವ ದೋಷಾರೋಪಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳನ್ನು ಉಲ್ಲೇಖ ಮಾಡಲಾಗಿದೆ. 3 ಪ್ರತ್ಯಕ್ಷ ಸಾಕ್ಷಿಗಳಿದ್ದು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿವೆ. 27 ಜನರ 164ರ ಅಡಿಯಲ್ಲಿ ಹೇಳಿಕೆ, 161 ಅಡಿಯಲ್ಲಿ 70 ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 59 ಜನ ಸಮಕ್ಷಮದಲ್ಲಿ ಮಹಜರು ಮಾಡಲಾಗಿದೆ. 8 ವೈದ್ಯರು, ತಹಶೀಲ್ದಾರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ಕಾಂಗ್ರೆಸ್ನಲ್ಲಿ ಭಿನ್ನರಾಗ!: ಊಹಾಪೋಹಕ್ಕೆ ಸಚಿವರು ಗರಂ
ಸಾವಿನಂಚಿನ ರೋಗಿಯ ಸುಖಮರಣಕ್ಕೆ ಸಮ್ಮತಿ : ಏನಿದು ನಿರ್ಧಾರ? ಅನುಮತಿ ಹೇಗೆ?
BJP; ಬಣ ಜಗಳ ದಿಲ್ಲಿ ವರಿಷ್ಠರ ಜಗಲಿಗೆ:ಬೊಮ್ಮಾಯಿ ಸಲಹೆ ಮೇರೆಗೆ ದಿಲ್ಲಿಗೆ ತೆರಳಲು ನಿರ್ಧಾರ
MUDA; ಅಕ್ರಮ ವಹಿವಾಟು ಬಗ್ಗೆ ಯಾವುದೇ ಸಾಕ್ಷಿಯಿಲ್ಲ: ಸಿದ್ದರಾಮಯ್ಯ
MUDA ಹಗರಣ ಮಾಡಿಲ್ಲ ಅಂದಮೇಲೆ ಸೈಟ್ ಏಕೆ ವಾಪಸ್ ಕೊಟ್ಟಿರಿ?
MUST WATCH
ಹೊಸ ಸೇರ್ಪಡೆ
Ullala: ಕೋಟೆಕಾರಿನಲ್ಲಿ ಮತ್ತೊಂದು ಶೂಟೌಟ್; ದರೋಡೆ ಆರೋಪಿಗೆ ಗುಂಡೇಟು
Bengaluru: ಗುಂಡಿಟ್ಟು ವಿದ್ಯಾರ್ಥಿನಿಯ ಕೊಂದವನಿಗೆ ಜೀವಾವಧಿ ಶಿಕ್ಷೆ
Budget 2025: ಕ್ಯಾನ್ಸರ್ ಔಷಧಗಳ ಮೇಲೆ ವಿನಾಯ್ತಿ-ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?
Union Budget 2025: ದೇಶದ 50 ಪ್ರವಾಸಿ ಸ್ಥಳಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು
Union Budget 2025: ಎಐ ಕೇಂದ್ರಗಳಿಗೆ ₹500 ಕೋಟಿ, ಐಐಟಿ ಮೂಲಸೌಕರ್ಯ ವಿಸ್ತರಣೆ