“ಮುಂದಿನ ನಿಲ್ದಾಣ’ದಲ್ಲಿ ದತ್ತಣ್ಣ ಯಂಗ್‌ಲುಕ್‌

ಟ್ರೆಂಡಿ ಕಾಸ್ಟ್ಯೂಮ್‌ ಧರಿಸಿ ನಟನೆ

Team Udayavani, Aug 31, 2019, 3:03 AM IST

dattanna

ಹಿರಿಯ ಕಲಾವಿದ ದತ್ತಣ್ಣ ಅಂದಾಕ್ಷಣ, ಜುಬ್ಬಾ ಪೈಜಾಮದಲ್ಲಿ ತಂದೆಯಾಗಿಯೋ, ತಾತನಾಗಿಯೋ ಅಥವಾ ಅಂಕಲ್‌ ಆಗಿ ನೆನಪಾಗುವ ಅಪರೂಪದ ನಟ. ತಮ್ಮ ಅಭಿನಯಕ್ಕೆ ರಾಷ್ಟ್ರಶಸ್ತಿಗಳನ್ನು ಪಡೆದ ದತ್ತಣ್ಣ, ಇದುವರೆಗೆ ತರಹೇವಾರಿ ಪಾತ್ರ ನಿರ್ವಹಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನ‌ “ಮಿಷನ್‌ ಮಂಗಲ್‌’ ಚಿತ್ರದಲ್ಲೂ ನಟಿಸಿ ಎಲ್ಲರ ಗಮನಸೆಳೆದಿದ್ದಾರೆ. ಅಷ್ಟಕ್ಕೂ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆಂದರೆ, ಅವರೀಗ ಚಿತ್ರವೊಂದರಲ್ಲಿ ಯಂಗ್‌ಲುಕ್‌ನಲ್ಲಿ ಮಿಂಚಿದ್ದಾರೆ.

ಹೌದು, ಈಗ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ “ಮುಂದಿನ ನಿಲ್ದಾಣ’ ಚಿತ್ರದಲ್ಲಿ ಅವರು ಎನರ್ಜಿ ಇರುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೊಂದು ವಿಭಿನ್ನ ಪಾತ್ರವಾಗಿದ್ದು, ಈಗಿನ ಟ್ರೆಂಡಿ ಕಾಸ್ಟ್ಯೂಮ್‌ ಮೂಲಕ ಸಿನಿಮಾದ ಹೈಲೈಟ್‌ ಆಗಿದ್ದಾರೆ. ಇತ್ತೀಚೆಗೆ ಅವರ ಯಂಗ್‌ಲುಕ್‌ನಲ್ಲಿರುವ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ವಿನಯ್‌ ಭಾರಧ್ವಾಜ್‌ ಅವರು, ದತ್ತಣ್ಣ ಅವರಿಗೊಂದು ವಿಶೇಷ ಪಾತ್ರ ಹೆಣೆದಿದ್ದು, ಚಿತ್ರದಲ್ಲಿ ಅವರು ನಾಯಕನಿಗೆ ಮಾರ್ಗದರ್ಶನ ನೀಡುವ ಪಾತ್ರ ನಿರ್ವಹಿಸಿದ್ದಾರೆ.

ಈಗಿನ ಕಾಲದ ತುಂಬಾ ಕೂಲ್‌ ವ್ಯಕ್ತಿಯಾಗಿ ದತ್ತಣ್ಣ ತೆರೆಯ ಮೇಲೆ ಕಚಗುಳಿ ಇಡಲಿದ್ದಾರೆ ಎಂಬುದು ನಿರ್ದೇಶಕರ ಮಾತು. ದತ್ತಣ್ಣ ಅವರಿಗೂ “ಮುಂದಿನ ನಿಲ್ದಾಣ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅದಕ್ಕೆ ಕಾರಣ, ಅವರು, ನಟಿಸಿರುವ ಬಹುತೇಕ ಚಿತ್ರಗಳ ಪೈಕಿ, ಶೇ.30 ರಷ್ಟು ಯುವ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಬಗ್ಗೆ ಹೇಳುವ ಅವರು, “ಹೊಸಬರ ಚಿತ್ರದಲ್ಲಿ ವಿಷಯದ ಜೊತೆಗೆ ಸಾಕಷ್ಟು ಕಲಿಯುವ ಅವಕಾಶವೂ ಸಿಕ್ಕಿದೆ.

ಚಿತ್ರದ ಪಾತ್ರ ಒಂದು ರೀತಿ ಸದಾ ಮಜ ಕೊಡುವಂತಹ ಪಾತ್ರವಾಗಿದ್ದು, ಇಲ್ಲಿಯವರೆಗೆ ಸಿಕ್ಕ ಪಾತ್ರಗಳಲಿ ಜುಬ್ಬಾ-ಪೈಜಾಮ ಹಾಕಿ ಕ್ಯಾಮೆರಾ ಮುಂದೆ ನಿಲ್ಲಿಸುವ ನಿರ್ದೇಶಕರ ನಡುವೆ, ವಿನಯ್‌ ಅವರು ಮಾಡ್ರನ್‌ ಕಾಸ್ಟ್ಯೂಮ್‌ ಹಾಕಿಸಿ, ಯಂಗ್‌ ಲುಕ್‌ ಕೊಟ್ಟಿದ್ದಾರೆ. ನಿರ್ದೇಶಕರು ಹಲವು ದೇಶ ಸುತ್ತಿರುವುದರಿಂದ, ಅವರಿಗೆ, ಪಾತ್ರಗಳ ಕಲ್ಪನೆಯ ಹಿಡಿತವಿದೆ. ಹಾಗಾಗಿ, ಈ ಚಿತ್ರದ ಪ್ರತಿ ಪಾತ್ರದಲ್ಲೂ ವಿಶೇಷತೆ ಇದೆ. ಇಲ್ಲಿ ಮಜವೂ ಇದೆ, ಒಳ್ಳೆಯ ಸಂದೇಶವೂ ಇದೆ’ ಎಂಬುದು ಅವರ ಮಾತು.

ಚಿತ್ರದಲ್ಲಿ “ಚೂರಿಕಟ್ಟೆ’ ಪ್ರವೀಣ್‌ತೇಜ್‌, ಅನನ್ಯ ಕಶ್ಯಪ್‌, ರಾಧಿಕಾ ನಾರಾಯಣ್‌ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಈಗಾಗಲೇ ಮೊದಲ ಪೋಸ್ಟರ್‌ ಮತ್ತು ಟೀಸರ್‌ನಲ್ಲಿ ಗಮನಸೆಳೆದ ಚಿತ್ರದ ಏಳು ಹಾಡುಗಳಿರುವ ಆಡಿಯೋ ಹಕ್ಕನ್ನು ಪಿಆರ್‌ಕೆ ಸಂಸ್ಥೆ ಪಡೆದಿದೆ. ಇಷ್ಟರಲ್ಲೇ ಆಡಿಯೋ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡವಿದೆ. ಇದು ಕೋಸ್ಟಲ್‌ ಬ್ರಿಡ್ಜ್ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣಗೊಂಡಿದೆ.

ಟಾಪ್ ನ್ಯೂಸ್

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.