Sandalwood: ಟ್ರೇಲರ್ ತಂದ ಧೈರ್ಯ; ಕಂಟೆಂಟ್ ನಂಬಿದ ಹೊಸಬರು
Team Udayavani, Feb 14, 2024, 1:25 PM IST
ಸಾಮಾನ್ಯವಾಗಿ ಕೆಲವು ಸಿನಿಮಾಗಳು ತನ್ನ ಕಾಸ್ಟಿಂಗ್, ಬಜೆಟ್ ಮೂಲಕ ಸೌಂಡ್ ಮಾಡಿದರೆ, ಇನ್ನು ಕೆಲವು ಸಿನಿಮಾಗಳು ಅದ್ಯಾವುದೂ ಇಲ್ಲದೆ, ಕೇವಲ ತನ್ನ ಕಂಟೆಂಟ್ ಮತ್ತು ಮೇಕಿಂಗ್ ಮೂಲಕವೇ ಸಿನಿಪ್ರಿಯರ ಮನಮುಟ್ಟಲು ಯಶಸ್ವಿಯಾಗಿಬಿಡುತ್ತವೆ.
ಇಂಥ ಸಾಲಿಗೆ ಸೇರುವ ಸಿನಿಮಾ “ಧೈರ್ಯಂ ಸರ್ವತ್ರ ಸಾಧನಂ’. ಈಗಾಗಲೇ ತನ್ನ ಟೈಟಲ್, ಫಸ್ಟ್ ಲುಕ್, ಟೀಸರ್, ಟ್ರೇಲರ್ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ಒಂದಷ್ಟು ಸೌಂಡ್ ಮಾಡುತ್ತಿರುವ “ಧೈರ್ಯಂ ಸರ್ವತ್ರ ಸಾಧನಂ’ ಫೆ.23ರಂದು ತೆರೆಕಾಣುತ್ತಿದೆ.
“ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾಕ್ಕೆ ಎ. ಆರ್. ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತ ರಚನೆ ಮಾಡಿ ಆ್ಯಕ್ಷನ್-ಕಟ್ ಹೇಳಿದ್ದಾರೆ.
ನಮ್ಮ ಸುತ್ತಮುತ್ತ ನಡೆಯಬಹುದಾದ, ಒಂದಷ್ಟು ಜನರಿಗೆ ಸ್ಫೂರ್ತಿಯಾಗಬಲ್ಲ ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.
ಈಗಾಗಲೇ “ಕಮರೊಟ್ಟು ಚೆಕ್ಪೋಸ್ಟ್’, “ಗುಬ್ಬಿಮರಿ’ ಹೀಗೆ ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಆನಂದ್ ಬಾಬು. ಜಿ “ಎ. ಪಿ. ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ “ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
“ಒಂದು ಸಿನಿಮಾದಲ್ಲಿ ಏನೇನು ಎಲಿಮೆಂಟ್ಸ್ ಇರಬೇಕೋ ಅದೆಲ್ಲವೂ ಈ ಸಿನಿಮಾದಲ್ಲಿದೆ. ಎಲ್ಲ ವರ್ಗದ ಆಡಿಯನ್ಸ್ಗೂ ಇಷ್ಟವಾಗುವಂಥ ಒಳ್ಳೆಯ ಕಥೆ, ಐದು ಫೈಟ್ಸ್, ಎರಡು ಚೇಸಿಂಗ್, ಸಾಂಗ್ಸ್ ಎಲ್ಲವೂ ಸಿನಿಮಾದಲ್ಲಿದೆ. ಬಿಡುಗಡೆಗೂ ಮೊದಲೇ ಸಿನಿಮಾ ತನ್ನ ಕಂಟೆಂಟ್ನಿಂದಾಗಿ ಆಡಿಯನ್ಸ್ಗೆ ಇಷ್ಟವಾಗುತ್ತಿದೆ. ಎಲ್ಲ ಕಡೆಗಳಲ್ಲಿ ಸಿನಿಮಾದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ’
ಎನ್ನುತ್ತಿದೆ ಚಿತ್ರತಂಡ. “ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಬಹು ಮುಖ್ಯವಾದ ಹಾಡು “ಯಾರೋ ಬೆಂಕಿ ಹಚ್ಚಿದ ಕಿಡಿ…’ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ.ಕಿನ್ನಾಳ ರಾಜ್ ಅವರ ಸಾಹಿತ್ಯ ಇದೆ.ನಮ್ಮ ಸಮಾಜದಲ್ಲಿ ನಮ್ಮ ಸುತ್ತ ಮುತ್ತಲೇ ನಮಗೆ ಅರಿವಿಗೆ ಬಾರದ ರೀತಿಯಲ್ಲಿ ನಮ್ಮ ಸುತ್ತ ಮುತ್ತಲು ಬೆಂಕಿ ಹಾಕೋ ಕ್ರೂರ ಮನಸ್ಥಿತಿಗಳ ಅನಾವರಣ ಮಾಡೋದೇ ಈ ಹಾಡು. “ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದಲ್ಲಿ ವಿವಾನ್ ಕೆ. ಕೆ.ನಾಯಕನಾಗಿ ಸ್ಯಾಂಡಲ್ವುಡ್ಗೆ ಪರಿಚಯವಾಗುತ್ತಿದ್ದಾರೆ. ಅನುಷಾ ರೈ ನಾಯಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.