![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 28, 2017, 10:33 AM IST
ಸ್ಯಾಂಡಲ್ವುಡ್ನಲ್ಲಿ ಈಗ ಎಂಗೇಜ್ಮೆಂಟ್ ಮತ್ತು ಮದುವೆಗಳದ್ದೇ ಸುದ್ದಿ! ಹೌದು, ಇತ್ತೀಚೆಗೆ ನಟಿ ಪ್ರಿಯಾಮಣಿ ಅವರು ಮದುವೆ ಆಗಿದ್ದು ಗೊತ್ತೇ ಇದೆ. ಮೊನ್ನೆಯಷ್ಟೇ ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದೂ ಗೊತ್ತು. “ಮೊಗ್ಗಿನ ಮಸ್ಸು’ ಚಿತ್ರದ ನಾಯಕಿಯರಲ್ಲೊಬ್ಬರಾದ ಮಾನಸಿ ಕೂಡ ದೀಪಕ್ ಎಂಬುವವರನ್ನು ಮದುವೆಯಾಗುತ್ತಿದ್ದಾರೆ.
ಈಗ ಗುಳಿಕೆನ್ನೆ ಹುಡುಗ ದಿಗಂತ್ ಅವರ ಸರದಿ. ಹಾಗಂತ ದಿಗಂತ್ ಮದುವೆ ಆಗಿಬಿಟ್ಟರಾ? ಎಂಬ ಪ್ರಶ್ನೆ ಎದುರಾಗಬಹುದು. ಹಾಗೇನೂ ಇಲ್ಲ. ದಿಗಂತ್ ಕೂಡ ಇಷ್ಟರಲ್ಲೇ ಮದುವೆ ಆಗುತ್ತಿದ್ದಾರಂತೆ ಎಂಬ ಸುದ್ದಿಯೊಂದು ಶುಕ್ರವಾರ ಸಂಜೆ ಬಲು ಜೋರಾಗಿಯೇ ಓಡಾಡ ತೊಡಗಿತು. ಆದರೆ, ಆ ಸುದ್ದಿಯೆಲ್ಲ ಸುಳ್ಳು. ಈಗಂತೂ ಮದುವೆ ಸುದ್ದಿ ಇಲ್ಲವೇ ಇಲ್ಲ. ಮದುವೆ ಆಗೋದು ನಿಜ.
ಆದರೆ, ಅದು 2018 ರ ಅಂತ್ಯದಲ್ಲಿ ಎಂದು ದಿಗಂತ್ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ, ದಿಗಂತ್ ಮದುವೆ ಯಾರ ಜತೆಗೆ ಗೊತ್ತಾ? ಅದು ಐಂದ್ರಿತಾ ರೇ ಅವರೊಂದಿಗೆ. ಈಗಾಗಲೇ ದಿಗಂತ್ ಹಾಗು ಐಂದ್ರಿತಾ ಅವರಿಬ್ಬರು ಪ್ರೀತಿಸುತ್ತಿರುವ ಸುದ್ದಿ ಗೊತ್ತೇ ಇದೆ. ಮಧ್ಯೆ ಎಲ್ಲೋ ಇಬ್ಬರ ನಡುವೆ ಬ್ರೇಕಪ್ ಆಯ್ತು ಎಂಬ ಸುದ್ದಿಯೂ ಓಡಾಡಿದ್ದು ನಿಜ.
ಈ ಬ್ರೇಕಪ್ ವಿಷಯಕ್ಕೂ ಪ್ರತಿಕ್ರಿಯಿಸಿರುವ ದಿಗಂತ್, ಅದೆಲ್ಲವೂ ಸುಳ್ಳು. ಯಾವ ಬ್ರೇಕಪ್ ಆಗಿಲ್ಲ. ಈಗಂತು ಇಬ್ಬರು ಮದುವೆ ಆಗುತ್ತಿಲ್ಲ. ಮದುವೆ ಆಗೋದು ನಿಜ. ಆದರೆ, ಅದು ಮುಂದಿನ ವರ್ಷದ ಅಂತ್ಯದಲ್ಲಿ ಎಂದು ಸ್ಪಷ್ಟಪಡಿಸುವ ಮೂಲಕ ಎಲ್ಲಾ ಅಂತೆಕಂತೆಗಳಿಗೆ ತೆರೆ ಎಳೆಯುತ್ತಾರೆ.
ಅಂದಹಾಗೆ, ದಿಗಂತ್ ಮತ್ತು ಐಂದ್ರಿತಾ ರೇ “ಮನಸಾರೆ’, “ಪಾರಿಜಾತ’ ಮತ್ತು “ಶಾರ್ಪ್ ಶೂಟರ್’ ಚಿತ್ರದಲ್ಲಿ ಐಂದ್ರಿತಾ ರೇ ಒಂದು ಸ್ಪೆಷಲ್ ಸಾಂಗ್ ಕೂಡ ಮಾಡಿದ್ದರು. ಸ್ಯಾಂಡಲ್ವುಡ್ನಲ್ಲಿ ಇಬ್ಬರ ಲವ್ ಬಗ್ಗೆ ಗುಸುಗುಸು ಇತ್ತು. ಅದನ್ನು ಅವರು ಹೇಳಿಕೊಂಡಿರಲೂ ಇಲ್ಲ. ಈಗ ಸುದ್ದಿ ಹೊರಬರುತ್ತಿದ್ದಂತೆಯೇ, ಮುಂದಿನ ವರ್ಷ ಮದುವೆ ಎಂಬ ವಿಷಯ ಹೊರಬಿದ್ದಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.