Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್ ಬಿ ಶೆಟ್ಟಿ
Team Udayavani, Jun 26, 2024, 6:01 PM IST
ಬೆಂಗಳೂರು/ಮಂಗಳೂರು: ಕರಾವಳಿ ಭಾಗದ ಕಥೆಯನ್ನು ಹೇಳುವ ಮೂಲಕ ಇಂದು ಸ್ಯಾಂಡಲ್ ವುಡ್ ಹಾಗೂ ಮಾಲಿವುಡ್ ನಲ್ಲಿ ತನ್ನ ನಟನೆಯ ಮೂಲಕ ಮಿಂಚಿರುವ ನಿರ್ದೇಶಕ, ನಟ ರಾಜ್ ಶೆಟ್ಟಿ ಹೊಸ ಸಿನಿಮಾವೊಂದನ್ನು ಅನೌನ್ಸ್ ಮಾಡಲಿದ್ದಾರೆ.
ರಾಜ್ ಬಿ ಶೆಟ್ಟಿ ಚಂದನವನದಲ್ಲಿ ಈಗಾಗಲೇ ತಾನೊಬ್ಬ ನಿರ್ದೇಶಕ ಮಾತ್ರವಲ್ಲ ಅದ್ಭುತ ನಟ ಕೂಡ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಅವರ ನಟನಾ ಕೌಶಲ್ಯ ಮಾಲಿವುಡ್ ಮಂದಿಯನ್ನೂ ಫಿದಾ ಆಗಿಸಿದೆ. ಇತ್ತೀಚೆಗಷ್ಟೇ ಮಮ್ಮುಟ್ಟಿ ಅವರೊಂದಿಗೆ ʼಟರ್ಬೊʼ ಸಿನಿಮಾದಲ್ಲಿ ಖಡಕ್ ರೋಲ್ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದರು.
ರಾಜ್ ಬಿ ಶೆಟ್ಟಿ ಅವರು ನಿರ್ದೇಶನ ಮಾಡುವ ಸಿನಿಮಾಗಳಿಗೆ ಪ್ರತ್ಯೇಕ ಪ್ರೇಕ್ಷಕರಿರುತ್ತಾರೆ. 2017 ರಲ್ಲಿ ಅವರ ಚೊಚ್ಚಲ ನಿರ್ದೇಶನದ ʼಒಂದು ಮೊಟ್ಟೆಯ ಕಥೆʼ ಚಿತ್ರ ಬಿಡುಗಡೆ ಆಗಿತ್ತು. ಈ ಸಿನಿಮಾಕ್ಕೆ ನಿರೀಕ್ಷೆಗೂ ಮೀರಿ ಉತ್ತಮ ಅಭಿಪ್ರಾಯ ಎಲ್ಲೆಡಯಿಂದ ಕೇಳಿ ಬಂದಿತ್ತು. ಇದಾದ ಬಳಿಕ 2021 ರಲ್ಲಿ ʼಗರುಡ ಗಮನ ವೃಷಭ ವಾಹನʼ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದಲ್ಲಿನ ಅಭಿನಯ ಹಾಗೂ ನಿರ್ದೇಶನಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ರಾಜ್ ಬಿ ಶೆಟ್ಟಿ ಮತ್ತೆ ʼಒಂದು ಮೊಟ್ಟೆಯ ಕಥೆʼಯ ತಂಡದೊಂದಿಗೆ ಸಿನಿಮಾವನ್ನು ಮಾಡಲಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಲೈವ್ ಬಂದು ಮಾಹಿತಿ ನೀಡಿದ್ದಾರೆ.
“ಮೊದಲಿಗೆ ನಾವು ಸಿನಿಮಾ ಮಾಡಲು ಶುರು ಮಾಡಿದ್ದು ಮಂಗಳೂರಿನಿಂದ. ʼಒಂದು ಮೊಟ್ಟೆಯ ಕಥೆʼ ಸಿನಿಮಾ ಮಾಡುವಾಗ ನಮಗೆ ಒಳ್ಳೆಯ ಕಥೆಯನ್ನು ತುಂಬಾ ಜನರಿಗೆ ತಲುಪಿಸಬೇಕೆನ್ನುವ ಉದ್ದೇಶವಿತ್ತು. ‘ಮ್ಯಾಂಗೊ ಪಿಕಲ್ ಎಂಟರ್ಟೈನ್ಮೆಂಟ್’ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ನಾನು ಮತ್ತು ನನ್ನ ತಂಡ ಆ ಸಿನಿಮಾವನ್ನು ಮಾಡಿದ್ವೀವಿ. ಆ ಸಿನಿಮಾ ನಿರೀಕ್ಷೆಗೂ ಮೀರಿ ಹಿಟ್ ಕೊಟ್ಟಿತು. ಒಂದು ಒಳ್ಳೆಯ ಕಥೆಯನ್ನು ಹೇಳಬೇಕು. ಆ ಕಥೆಯನ್ನು ಪ್ರೇಕ್ಷಕರು ಒಪ್ಪುತ್ತಾರೆ ಎನ್ನುವುದು ನಾನು ಹಾಗೂ ನನ್ನ ತಂಡದ ಅಂದುಕೊಂಡಿರುವ ಸೂತ್ರ. ಅದೇ ನಿಟ್ಟಿನಲ್ಲಿ ಇನ್ನೊಂದು ಸಿನಿಮಾವನ್ನು ತರುತ್ತಿದ್ದೇವೆ. ‘ಮ್ಯಾಂಗೊ ಪಿಕಲ್ ಎಂಟರ್ಟೈನ್ಮೆಂಟ್’ ಇದನ್ನು ನಿರ್ಮಾಣ ಮಾಡುತ್ತಿದೆ. ಈ ಬ್ಯಾನರ್ ಎರಡನೇ ಸಿನಿಮಾ ಇದು. ಈ ಸಿನಿಮಾದ ಪೋಸ್ಟರ್ ನ್ನು ನಾಳೆ ಹಂಚಿಕೊಳ್ಳುತ್ತೇನೆ. ಈ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ನಾನು ತುಂಬಾ ಹೆಮ್ಮೆಪಡಬಹುದಾದ ಸಿನಿಮಾ ಆಗಿರಲಿದೆ. ಕಮರ್ಷಿಯಲಿ ಒಂದು ಕಥೆ ಹೇಳಿ ದುಡ್ಡು ಮಾಡುವುದಕ್ಕಿಂತ, ಒಂದೊಳ್ಳೆ ಸಿನಿಮಾ ಮಾಡುತ್ತೇವೆ. ಆ ಮೇಲೆ ಅದರ ಗುಣಮಟ್ಟವನ್ನು ಅದು ಕಮರ್ಷಿಯಲಿ ಎಷ್ಟು ದುಡ್ಡು ಮಾಡಬೇಕೆನ್ನುವುದನ್ನು ಪ್ರೇಕ್ಷಕರು ನಿರ್ಧಾರ ಮಾಡಬೇಕು ಅಂಥ ನಂಬಿದಂತಹ ಸಿನಿಮಾ ಅದು. ಅದರ ಹೆಸರು ಹಾಗೂ ಪೋಸ್ಟರ್ ನ್ನು ನಾಳೆ ಸಂಜೆ 4 ಗಂಟೆಗೆ ಅನೌನ್ಸ್ ಮಾಡುತ್ತಿದ್ದೇವೆ. ಈ ಸಿನಿಮಾವನ್ನು ನಾನು ಮತ್ತು ನನ್ನ ತಂಡ ಪ್ರಸ್ತುತ ಪಡಿಸುತ್ತಿದ್ದೇವೆ. ಎಂದಿನಂತೆ ಪ್ರೀತಿ, ಪ್ರೋತ್ಸಾಹ ಇರಲಿ” ಎಂದು ಹೇಳಿದ್ದಾರೆ.
ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವುದರ ಬಗ್ಗೆ ರಾಜ್ ಬಿ ಶೆಟ್ಟಿ ಗುಟ್ಟು ಬಿಟ್ಟುಕೊಟ್ಟಿಲ್ಲ.
ʼಒಂದು ಮೊಟ್ಟೆಯ ಕಥೆʼಯನ್ನು ಪವನ್ ಕುಮಾರ್ – ಸುಹಾನ್ ಪ್ರಸಾದ್ ನಿರ್ಮಾಣ ಮಾಡಿದ್ದರು. ರಾಜ್ ಬಿ ಶೆಟ್ಟಿ, ಉಷಾ ಭಂಡಾರಿ, ಶೈಲಶ್ರೀ, ಪ್ರಕಾಶ್ ತುಮಿನಾಡು, ಶ್ರೇಯಾ ಅಂಚನ್, ದೀಪಕ್ ರೈ ಪಾಣಾಜೆ, ವಿಜೆ ವಿನಿತ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್ ಅರವಿಂದ್
Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್ವುಡ್ನ ಪಾರ್ಟ್-2 ಕ್ರೇಜ್
Upendra Movie: ರೀ ರಿಲೀಸ್ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ
Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್ ರೋಡ್ʼ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.