Darshan: ಸ್ಯಾಂಡಲ್‌ವುಡ್‌ಗೆ ಮತ್ತೆ ಆತಂಕ; ಚಿಗುರಿದ ಕನಸಿಗೆ ದರ್ಶನ್ ಏಟು


Team Udayavani, Jun 12, 2024, 11:31 AM IST

Darshan: ಸ್ಯಾಂಡಲ್‌ವುಡ್‌ಗೆ ಮತ್ತೆ ಆತಂಕ; ಚಿಗುರಿದ ಕನಸಿಗೆ ದರ್ಶನ್ ಏಟು

ಸಿನಿಮಾಗಳು ಗೆದ್ದ ಸಂಭ್ರಮದಲ್ಲಿ ತೇಲಾಡಬೇಕಿದ್ದ ಕನ್ನಡ ಚಿತ್ರರಂಗ ಒಂದರ ಹಿಂದೊಂದರಂತೆ ಶಾಕಿಂಗ್‌ ನ್ಯೂಸ್‌ಗಳನ್ನು ಎದುರಿಸುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳ ಸುದ್ದಿಯ ಬದಲು ಕನ್ನಡ ಚಿತ್ರರಂಗದ ವಿವಾದಗಳು ಸದ್ದು ಮಾಡುತ್ತವೆ. ಇದೇ ಕಾರಣದಿಂದ ಸಿನಿಮಾ ಮಂದಿ ನಿಜಕ್ಕೂ ಶಾಕ್‌ ಆಗಿದ್ದಾರೆ. ‌

ಕೆಲವು ದಿನಗಳ ಹಿಂದಷ್ಟೇ ಚಂದನ್‌-ನಿವೇದಿತಾ ಡೈವೋರ್ಸ್‌ ಸುದ್ದಿ, ಅದರ ಬೆನ್ನಿಗೆ ದೊಡ್ಮನೆಯ ಕುಡಿ ವಿನಯ್‌ ವಿಚ್ಛೇದನ… ಈಗ ಕೊಲೆ ಆರೋಪಿಯಾದ ದರ್ಶನ್‌.

ವಿಚ್ಛೇದನವೇನೋ ಅವರವರ ವೈಯಕ್ತಿಕ ವಿಚಾರವೆಂದು ಪಕ್ಕಕ್ಕಿಟ್ಟರೂ ಸದ್ಯ ದರ್ಶನ್‌ ಪ್ರಕರಣವಂತೂ ಇಡೀ ಸ್ಯಾಂಡಲ್‌ವುಡ್‌ ತಲೆತಗ್ಗಿಸುವಂತಾಗಿರುವುದು ಸುಳ್ಳಲ್ಲ. ಕೆಲವು ದಿನಗಳ ಹಿಂದಷ್ಟೇ ಗೋವಾದಲ್ಲಿ ನಿರ್ಮಾಪಕರು ಪಾರ್ಟಿ ಮಾಡಿ ಹೊಡೆದಾಡಿದ ವಿಚಾರಕ್ಕೆ ಸ್ಯಾಂಡಲ್‌ವುಡ್‌ ಬಗ್ಗೆ ಅನೇಕರು ತುತ್ಛವಾಗಿ ಮಾತನಾಡುತ್ತಿದ್ದರು.

ಈಗ ಬಹುಬೇಡಿಕೆಯ, ಅಪಾರ ಅಭಿಮಾನಿ ವರ್ಗ ಹೊಂದಿರುವ ಸ್ಟಾರ್‌ ನಟನೊಬ್ಬ ಸಣ್ಣ ವಿಚಾರಕ್ಕೆ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡುವ, ಮಾಡಿಸುವ ಹಂತಕ್ಕೆ ಹೋಗುತ್ತಾನೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾದರೂ ಯಾವ ಸಿನಿಮಾವೂ ಗೆದ್ದಿಲ್ಲ. ಸೆಕೆಂಡ್‌ ಹಾಫ್ ನ ಲ್ಲಾದರೂ ಸಿನಿಮಾಗಳು ಗೆಲ್ಲಬಹುದು, ಯಶಸ್ಸನ್ನು ಸಂಭ್ರಮಿಸಬಹುದು ಎಂದು ಕಾಯುತ್ತಿದ್ದ ಸಿನಿಮಾ ಮಂದಿ ಹಾಗೂ ಪ್ರೇಕ್ಷಕರಿಗೆ ಸ್ಯಾಂಡಲ್‌ವುಡ್‌ ನಟ ಶಾಕ್‌ ನೀಡಿದಂತಾಗಿದೆ. ಒಂದಷ್ಟು ದಿನವಂತೂ ಸ್ಯಾಂಡಲ್‌ವುಡ್‌ ಇದೇ ಸುದ್ದಿಯ ಗುಂಗಲ್ಲಿರುವುದಂತೂ ಸುಳ್ಳಲ್ಲ.

ರಿಲೀಸ್‌ ಸಿನಿಮಾಗಳ ಟೆನ್ಷನ್‌: ಈ ವಾರ ಕನ್ನಡ ಚಿತ್ರರಂಗದಲ್ಲಿ ಆರು ಚಿತ್ರಗಳು ಬಿಡುಗಡೆಯಾಗುತ್ತಿವೆ ಕೋಟಿ, ಲವ್‌ಲೀ, ಶಿವಮ್ಮ, ಶೆಫ್ ಚಿದಂಬರ, ಚಿ. ತು. ಸಂಘ, ಯಾವೋ ಇವೆಲ್ಲ ಚಿತ್ರಗಳು ಈ ವಾರ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಇದರಲ್ಲಿ ಒಂದಷ್ಟು ಸಿನಿಮಾಗಳು ನಿರೀಕ್ಷೆ ಕೂಡಾ ಹುಟ್ಟು ಹಾಕಿವೆ. ಆದರೆ, ಈಗ ಆ ಸಿನಿಮಾಗಳಿಗೆ ದರ್ಶನ್‌ ಪ್ರಕರಣದ ಕರಿನೆರಳು ಬೀಳುತ್ತಾ ಎಂಬ ಚಿಂತೆಯಾಗಿದೆ.

ಮುಖ್ಯವಾಗಿ ಜನರ ಹಾಗೂ ಮಾಧ್ಯಮಗಳ ಗಮನವೆಲ್ಲಾ ಈ ಘಟನೆಯ ಮೇಲಿದೆ. ಹೀಗಿರುವಾಗ ತಮ್ಮ ಸಿನಿಮಾಗಳಿಗೆ ಸಿಗಬೇಕಾದ ಪ್ರಚಾರ,ಮಾನ್ಯತೆ ಸಿಗುತ್ತಾ ಎಂಬ ಟೆನ್ಷನ್ ಅಂತೂ ತಂಡಗಳಿಗೆ ಇವೆ. ‌

ಅತಿರೇಕದ ಅಭಿಮಾನ: ಅಭಿಮಾನಿಗಳ ಅತಿರೇಕದ ಅಭಿಮಾನ ಇವತ್ತು ಸ್ಟಾರ್‌ ನಟರನ್ನು ದಾರಿ ತಪ್ಪಿಸುತ್ತಿದೆಯಾ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ತಾವೇನು ಮಾಡಿದರೂ “ಜೈಕಾರ’ ಹಾಕುತ್ತಾರೆ ಎಂಬ ಮನಸ್ಥಿತಿಗೆ ಸ್ಟಾರ್‌ ನಟರು ಬಂದರೆ ಅದು ಮುಂದೆ ಅನೇಕ ಅನಾಹುತಗಳಿಗೆ ದಾರಿ ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ. ಒಳ್ಳೆಯ ಸಿನಿಮಾಗಳನ್ನು ಗೆಲ್ಲಿಸಿ ಆ ಮೂಲಕ ಸ್ಟಾರ್‌ ನಟನನ್ನು ಅಭಿಮಾನಿಗಳು ಮೆರೆಸಬೇಕೇ ವಿನಃ ಆತ ಮಾಡಿದ ತಪ್ಪುಗಳನ್ನು ಸಮಜಾಯಿಷಿಕೊಂಡಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

 

ಟಾಪ್ ನ್ಯೂಸ್

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

1-crick

India vs England ಸೆಮಿ ಪಂದ್ಯ; ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Devaraj; ‘ಮಾಫಿಯಾ’ ಮುಂದೆ ‘ರಾಕ್ಷಸ’ ಹಿಂದೆ; ಒಬ್ಬ ನಿರ್ದೇಶಕನ ಎರಡು ಸಿನಿಮಾ

Prajwal Devaraj; ‘ಮಾಫಿಯಾ’ ಮುಂದೆ ‘ರಾಕ್ಷಸ’ ಹಿಂದೆ; ಒಬ್ಬ ನಿರ್ದೇಶಕನ ಎರಡು ಸಿನಿಮಾ

D Boss, 6106…; title craze continues

D Gang, 6106….; ಮುಂದುವರಿದ ಟೈಟಲ್ ಕ್ರೇಜ್

Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ

Raj B Shetty: ಮತ್ತೆ ʼಒಂದು ಮೊಟ್ಟೆಯ ಕಥೆʼ ತಂಡದ ಸಿನಿಮಾ ಮಾಡಲಿದ್ದಾರೆ ರಾಜ್‌ ಬಿ ಶೆಟ್ಟಿ

ದರ್ಶನ್‌ ಆಡಿದ ತಮಾಷೆಯ ಮಾತುಗಳಿಂದಲೇ ಶುರುವಾಯಿತೇ ತರುಣ್‌ – ಸೋನಲ್‌  ಪ್ರೇಮ್‌ ಕಹಾನಿ?

ದರ್ಶನ್‌ ಆಡಿದ ತಮಾಷೆಯ ಮಾತುಗಳಿಂದಲೇ ಶುರುವಾಯಿತೇ ತರುಣ್‌ – ಸೋನಲ್‌ ಪ್ರೇಮ್‌ ಕಹಾನಿ?

ಸ್ಥಳ ಮಹಜರು ವೇಳೆ ಪವಿತ್ರಾಗೆ ಲಿಪ್‌ ಸ್ಟಿಕ್‌ ಹಚ್ಚಲು ಅವಕಾಶ: ಮಹಿಳಾ PSIಗೆ ನೋಟಿಸ್

ಸ್ಥಳ ಮಹಜರು ವೇಳೆ ಪವಿತ್ರಾಗೆ ಲಿಪ್‌ ಸ್ಟಿಕ್‌ ಹಚ್ಚಲು ಅವಕಾಶ: ಮಹಿಳಾ PSIಗೆ ನೋಟಿಸ್

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

31

Kiran Pahal: ವನಿತೆಯರ 400 ಮೀ.; ಕಿರಣ್‌ ಪಹಲ್‌ ಒಲಿಂಪಿಕ್ಸ್‌ ಗೆ ಅರ್ಹತೆ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.