![Rain Heavy](https://www.udayavani.com/wp-content/uploads/2024/07/Rain-Heavy-415x276.jpg)
ಹೊಸಬರ ‘ಫೀಲ್ ಮೈ ಲವ್’ ಮೇ.12ರಂದು ಬಿಡುಗಡೆ
Team Udayavani, May 5, 2023, 4:39 PM IST
![ಹೊಸಬರ ‘ಫೀಲ್ ಮೈ ಲವ್’ ಮೇ.12ರಂದು ಬಿಡುಗಡೆ](https://www.udayavani.com/wp-content/uploads/2023/05/feel-my-loe-620x342.jpg)
ಕನ್ನಡ ಚಿತ್ರರಂಗದಲ್ಲಿ ಸಂಪೂರ್ಣ ಲವ್ ಸ್ಟೋರಿ ಚಿತ್ರಗಳು ತೆರೆಗೆ ಬಂದು ಬಹಳ ದಿನಗಳೇ ಆಗಿವೆ. ಇದೀಗ ಬೇಸಿಗೆಯ ಬಿಸಿಲಿಗೆ ತಂಪೆರೆಯಲು ಸಂಪೂರ್ಣ ಲವ್ ಸ್ಟೋರಿ “ಫೀಲ್ ಮೈ ಲವ್’ ಎಂಬ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಸಂಪೂರ್ಣ ಹೊಸಬರ ತಂಡವೇ ನಿರ್ಮಾಣ ಮಾಡಿರುವ ಚಿತ್ರಕ್ಕೆ ಡಿ.ಟಿ ರಮೇಶ್ ನಿರ್ದೇಶನವಿದೆ. “ಜಿ.ಟಿ ಪ್ರೊಡಕ್ಷನ್’ ಬ್ಯಾನರ್ನಡಿಯಲ್ಲಿ ಗೌಸ್ ಪೀರ್ಸಾಬ್ ಚಿತ್ರ ನಿರ್ಮಿಸುತ್ತಿದ್ದು, ಇದು ಅವರ ಚೊಚ್ಚಲ ನಿರ್ಮಾಣದ ಚಿತ್ರ “ಫೀಲ್ ಮೈ ಲವ್’ ಆಗಿದೆ.
“ಚಿತ್ರದಲ್ಲಿ ನನ್ನ ಪಾತ್ರ ಎರಡು ಶೇಡ್ಗಳಲ್ಲಿ ಮೂಡಿಬಂದಿದೆ. ಟೀನೇಜ್ ಹುಡುಗನ ಶೇಡ್ ಮಾಡುವುದು ಚಾಲೆಂಜಿಂಗ್ ಆಗಿ ಇತ್ತು. ಅದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದೇನೆ. 4-5 ವರ್ಷದ ಗ್ಯಾಪ್ ನಂತರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇತ್ತೀಚೆಗೆ ಕನ್ನಡದಲ್ಲಿ ಸಂಪೂರ್ಣ ಲವ್ ಸ್ಟೋರಿ ಚಿತ್ರ ಬಂದಿದ್ದು ಕಡಿಮೆ. ನಮ್ಮ ಚಿತ್ರ ಒಂದು ಭಿನ್ನ ಕಥೆ, ಹೊಸ ಪ್ರತಿಭೆಗಳನ್ನು ಒಳಗೊಂಡ ಚಿತ್ರವಾಗಿದೆ. ನಮ್ಮ ಚಿತ್ರ ಫ್ಯಾಮಿಲಿ ಆಡಿಯೆನ್ಸ್ಗೆ ಇಷ್ಟವಾಗುತ್ತದೆ.’ ಎಂಬುದು ಚಿತ್ರದ ನಾಯಕ ರಾಕೇಶ್ ಮಾತು.
ಚಿತ್ರದಲ್ಲಿ ನಾಯಕ ನಾಯಕಿಯಾಗಿ ರಾಕೇಶ್, ಚರಿತಾ ಕಾಣಿಸಿಕೊಂಡಿದ್ದಾರೆ. ಪ್ರೀತು ಪೂಜಾ, ಮಂಜುನಾಥ್ ಹೆಗಡೆ, ಬೃಂದೇಶ್ವರೀ ಬಾನವಾಡಿ, ವಿಜಯ್ ಕಾಶಿ, ಅಭಿಲಾಶ್, ಬುಲೆಟ್ ವಿನು, ರಾಜೇಶ್, ಯೋಗಿ ಆಚಾರ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.
ಚಿತ್ರಕ್ಕೆ ಕಥೆ, ನಿರ್ದೇಶನ ಡಿ.ಟಿ ರಮೇಶ್, ಗೌಸ್ ಪೀರ್ಸಾಬ್ ನಿರ್ಮಾಣ, ವಿನಯ್ ಹೊಸದುರ್ಗ ಛಾಯಾಗ್ರಹಣ, ಸಂಗೀತ ರಾಹುಲ್ ರಾಜ್ ಮ್ಯೂಸಿಕ್, ದೀಪಕ್ ಗೌಡ ಸಂಕಲನ, ರಾಘು ಆರ್,ಜೆ ನೃತ್ಯ ಸಂಯೋಜನೆ, ಮಂಜು ನಾಗಪ್ಪ ಸಾಹಸವಿದೆ. ನಿಹಾಲ್ ತಾವರೂ, ವಿಜಯ್ ಪ್ರಕಾಶ್, ಐಶ್ವರ್ಯ ರಂಗರಾಜನ್ ಹಿನ್ನೆಲೆ ಗಾಯನ ಚಿತ್ರಕ್ಕಿದೆ.
ಬೆಂಗಳೂರು, ಬಳ್ಳಾರಿ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಮೇ 12 ರಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
ಟಾಪ್ ನ್ಯೂಸ್
![Rain Heavy](https://www.udayavani.com/wp-content/uploads/2024/07/Rain-Heavy-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Rain Heavy](https://www.udayavani.com/wp-content/uploads/2024/07/Rain-Heavy-150x100.jpg)
Heavy Rain ಅಬ್ಬರ; ಜು.9 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ
![1-asaas](https://www.udayavani.com/wp-content/uploads/2024/07/1-asaas-150x100.jpg)
Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್
![Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!](https://www.udayavani.com/wp-content/uploads/2024/07/Apex-150x84.jpg)
Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!
![Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಕೆ. ದಿವಾಕರ ಮಾರ್ಲ ನಿಧನ](https://www.udayavani.com/wp-content/uploads/2024/07/shirva-150x83.jpg)
Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಕೆ. ದಿವಾಕರ ಮಾರ್ಲ ನಿಧನ
![SSMB29: ಮಹೇಶ್ – ಪ್ರಭಾಸ್ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್ ನೀಡಲಿದ್ದಾರೆ ಹಿರಿಯ ನಟ](https://www.udayavani.com/wp-content/uploads/2024/07/15-4-150x90.jpg)
SSMB29: ಮಹೇಶ್ – ಪ್ರಭಾಸ್ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್ ನೀಡಲಿದ್ದಾರೆ ಹಿರಿಯ ನಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.