ರೀಮಿಕ್ಸ್ನಲ್ಲಿ ಜಾನಪದ ಗೀತೆಗಳ ಆಲ್ಬಂ
Team Udayavani, Oct 28, 2018, 10:53 AM IST
ಕಾಲ ಬದಲಾಗಿದೆ. ಜೊತೆಗೆ ಇದೀಗ ತಂತ್ರಜ್ಞಾನವೂ ಹೊಸದಾಗಿದೆ. ಈಗಾಗಲೇ ಹಳೆಯ ಹಾಡುಗಳಿಗೆ ಹೊಸ ಸಂಗೀತ ಸ್ಪರ್ಶ ನೀಡಿದ ಉದಾಹರಣೆ ಸಾಕಷ್ಟಿದೆ. ಹಳೆಯ ಮಧುರ ಹಾಡುಗಳಿಗೆ ಈಗಿನ ಸಂಗೀತ ಸೇರಿಸಿ ಅದೆಷ್ಟೋ ಆಡಿಯೋ, ವಿಡಿಯೋ ಆಲ್ಬಂಗಳು ಬಂದಿವೆ, ಬರುತ್ತಲೂ ಇವೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ಅಂದರೆ, ಪ್ರಸಿದ್ಧ ಜಾನಪದ ಹಾಡುಗಳೂ ಸೇರಿವೆ.
ಹೌದು. ಈಗ ಜನಪ್ರಿಯ ಜಾನಪದ ಹಾಡುಗಳಿಗೆ ರೀಮಿಕ್ಸ್ ಮಾಡಿ ಹೊಸ ಸೌಂಡಿಂಗ್ನೊಂದಿಗೆ ಆಲ್ಬಂವೊಂದನ್ನು ಬಿಡುಗಡೆ ಮಾಡಲಾಗಿದೆ. ಡಿ.ಜೆ.ಯಶ್ಗೌಡ ಅವರ ಮೊದಲ ಪ್ರಯತ್ನವಿದು. ಹಳೆಯ ಹಾಡುಗಳು ಇಂದಿಗೂ, ಎಂದಿಗೂ ಅಚ್ಚುಮೆಚ್ಚು. ಅಂತಹ ಹಾಡುಗಳನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಯಶ್ಗೌಡ ಈಗ, “ಜಾನಪದ ಸಮ್ಮಿಲನ’ ಹೆಸರಿನ ಆಲ್ಬಂ ಹೊರತಂದಿದ್ದಾರೆ.
ಈ ಆಲ್ಬಂನಲ್ಲಿ “ಹೇಳ್ಕೊಳ್ಳೋಕೆ ಒಂದೂರು’, “ಸಿದ್ದಯ್ಯ ಸ್ವಾಮಿ ಬನ್ನಿ’,” ಚೆಲುವಯ್ಯ ಚೆಲುವಾ’,”ಗಲ್ಲು ಗಲೆನುತಾ,”ಚೆಲ್ಲಿದರೂ ಮಲ್ಲಿಗೆಯಾ’ ಸೇರಿದಂತೆ ಹಲವು ಜಾನಪದ ಗೀತೆಗಳಿವೆ. ಇದರೊಂದಿಗೆ ಉಪೇಂದ್ರ ಅವರ “ಎ’ ಚಿತ್ರ ಹಾಗೂ ವಿಜಯರಾಘವೇಂದ್ರ ನಟನೆಯ “ಸೇವಂತಿ ಸೇವಂತಿ’ ಹಾಡುಗಳನ್ನೂ ಬಳಸಲಾಗಿದೆ.
ಇನ್ನು, ಈ ಆಲ್ಬಂ ಗೀತೆಗಳಿಗೆ ವಿಜಯ ಪ್ರಕಾಶ್, ರಘು ದೀಕ್ಷಿತ್, ಅನನ್ಯಭಟ್ ಮತ್ತು ಹೊಸ ಗಾಯಕರಾದ ಶ್ವೇತಾ ರಾಕೇಶ್, ಶ್ವೇತಾ ಸುಬ್ರಮಣ್ಯ, ವೈಶಾಖ ವರ್ಮ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಲಹರಿ ಆಡಿಯೋ ಕಂಪೆನಿ ಮೂಲಕ ಹಾಡುಗಳನ್ನು ಹೊರತರಲಾಗಿದೆ. ಇಲ್ಲಿರುವ ಎಲ್ಲಾ ಹಾಡುಗಳು ಲಹರಿ ಸಂಸ್ಥೆಯ ಹಕ್ಕುಗಳಾಗಿದ್ದು, ಅವರ ಅನುಮತಿ ಪಡೆದೇ ಯುಟ್ಯೂಬ್ನಲ್ಲಿ ಹಾಡುಗಳನ್ನು ಅಪ್ಲೋಡ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್ ಆರೋಪ
Yaduveer Wadiyar: ಉಡುಪಿ ಶ್ರೀಕೃಷ್ಣಮಠಕ್ಕೆ ಸಂಸದ ಯದುವೀರ್ ಭೇಟಿ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ
MINCHU HULA: ತಂದೆ ಮಗನ ಸುತ್ತ ʼಮಿಂಚು ಹುಳʼ; ಅ.4ಕ್ಕೆ ತೆರೆಗೆ
Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.