![rain 21](https://www.udayavani.com/wp-content/uploads/2024/07/rain-21-415x263.jpg)
Anantnag; ಅನಂತ ಕೋಪ: ಪತಿಯ ಕೋಪದ ಬಗ್ಗೆ ಹೇಳಿದ ಗಾಯತ್ರಿ ಅನಂತ್ನಾಗ್
Team Udayavani, Aug 15, 2023, 2:31 PM IST
![Anantnag; ಅನಂತ ಕೋಪ: ಪತಿಯ ಕೋಪದ ಬಗ್ಗೆ ಹೇಳಿದ ಗಾಯತ್ರಿ ಅನಂತ್ನಾಗ್](https://www.udayavani.com/wp-content/uploads/2023/08/gayat-620x342.jpg)
“ಅವರ ಕೋಪನಾ ನೀವು ನೋಡಿಲ್ಲ, ಅದೊಂಥರ ಜ್ವಾಲಾಮುಖೀ ಇದ್ದಂತೆ. ಯಾವಾಗ ಸ್ಫೋಟವಾಗುತ್ತೋ ಗೊತ್ತಾಗಲ್ಲ…’ – ಅನಂತ್ ನಾಗ್ ಅವರಿಗೆ ಕೋಪ ಬರಲ್ವಾ ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆ ಅವರ ಪತ್ನಿ ಗಾಯತ್ರಿ ಅನಂತ್ನಾಗ್ ತಮ್ಮ ಪತಿಯ ಕೋಪದ ಬಗ್ಗೆ ಹೀಗೆ ಹೇಳಿದರು.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಿರೂಪಕರು ಅನಂತ್ನಾಗ್ ಅವರನ್ನು, “ನಿಮಗೆ ಕೋಪ ಬರಲ್ವಾ’ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ಅನಂತ್ನಾಗ್ ಪತ್ನಿ ಗಾಯತ್ರಿ. “ಅವರಿಗೆ ಸಿಕ್ಕಾ ಪಟ್ಟೆ ಕೋಪ ಬರುತ್ತೆ. ಯಾವುದಕ್ಕೆ ಕೋಪ ಬರುತ್ತೆ ಎಂದು ಹೇಳುವಂತಿಲ್ಲ. ಅಡುಗೆ ಸರಿಯಾಗಿಲ್ಲಂದ್ರೂ ಕೋಪ ಬರುತ್ತೆ, ಅವರಿಟ್ಟ ಪುಸ್ತಕ ಆಚೀಚೆ ಆದರೂ ಕೋಪ ಬರುತ್ತೆ, ಮನೆಯ ವಸ್ತುಗಳು ಅಸ್ತವ್ಯಸ್ತ ಇದ್ದರೂ ಕೋಪಬರುತ್ತೆ… ಅವರ ಕೋಪ ಒಂಥರಾ ಜ್ವಾಲಾಮುಖೀ ತರಹ.. ಯಾವಾಗ ಸ್ಫೋಟವಾಗುತ್ತೋ ಗೊತ್ತಾಗಲ್ಲ’ ಎನ್ನುತ್ತಾ ಅನಂತ್ ನಾಗ್ ಕೋಪಕ್ಕೆ ಸಂಬಂಧಿಸಿದ ಘಟನೆಯೊಂದನ್ನು ವಿವರಿಸಿದರು.
“ಅವರಿಗೆ ಮನೆಯಲ್ಲಷ್ಟೇ ಅಲ್ಲ, ಕೆಲವೊಮ್ಮೆ ಹೊರಗಡೆಯೂ ಸಿಟ್ಟು ಬರುತ್ತದೆ. ಒಮ್ಮೆ ನಾವು ಊಟಕ್ಕೆಂದು ಹೋಟೆಲ್ಗೆ ಹೋದೆವು. ಅಲ್ಲಿ ಇವರು ಸೌತ್ ಇಂಡಿಯನ್ ಥಾಲಿ ಆರ್ಡರ್ ಮಾಡಿದರು. ಆದರೆ, ಆ ಹೋಟೆಲ್ನವನು ಸೌತ್ ಇಂಡಿಯನ್ ಥಾಲಿ ಇಲ್ಲ ಎಂದ. ಇವರಿಗೆ ಆಗ ಕೋಪ ಬಂದು, “ಕರ್ನಾಟಕದಲ್ಲಿದ್ದು ಸೌತ್ ಇಂಡಿಯನ್ ಥಾಲಿ ಇಲ್ಲಾಂದ್ರೆ ಏನ್ ಅರ್ಥ’ ಎಂದು ಅವರ ಮೇಲೆ ರೇಗಿದರು’ ಎನ್ನುತ್ತಾ ಅನಂತ್ ನಾಗ್ ಕೋಪದ ವಿವರಿಸಿದರು ಗಾಯತ್ರಿ.
ವೇದಿಕೆ ಮೇಲಿದ್ದ ಅನಂತ್ ನಾಗ್, “ನಗುತ್ತಾ ಪ್ರೀತಿ ಎಲ್ಲಿರುತ್ತೋ ಅಲ್ಲಿ ಕೋಪವೂ ಇರುತ್ತದೆ’ ಎಂದಾಗ ಸಭೆಯಲ್ಲಿ ನಗೆಬುಗ್ಗೆ.
ಟಾಪ್ ನ್ಯೂಸ್
![rain 21](https://www.udayavani.com/wp-content/uploads/2024/07/rain-21-415x263.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![rain 21](https://www.udayavani.com/wp-content/uploads/2024/07/rain-21-150x95.jpg)
Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ
![Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ](https://www.udayavani.com/wp-content/uploads/2024/07/Bha-150x73.jpg)
Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ
![1-wqwewewq](https://www.udayavani.com/wp-content/uploads/2024/07/1-wqwewewq-150x106.jpg)
T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ
![renukaacharya](https://www.udayavani.com/wp-content/uploads/2024/07/renukaacharya-150x100.jpg)
Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ
![BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!](https://www.udayavani.com/wp-content/uploads/2024/07/BSNL-150x84.jpg)
BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.