ಕನ್ನಡ ಶೀರ್ಷಿಕೆಗಳಿಗೆ ಆದ್ಯತೆ ಕೊಡಿ
Team Udayavani, Feb 15, 2017, 10:58 AM IST
ಇತ್ತೀಚೆಗೆ ಬರುತ್ತಿರುವ ಬಹುತೇಕ ಕನ್ನಡ ಸಿನಿಮಾಗಳ ಶೀರ್ಷಿಕೆಗಳು ಇಂಗ್ಲೀಷ್ಮಯವಾಗಿವೆ. ಇಂಗ್ಲೀಷ್ ಶೀರ್ಷಿಕೆ ಇಡೋದೇ ಒಂದು ಫ್ಯಾಶನ್ ಎಂಬಂತೆ ಚಿತ್ರತಂಡಗಳು ಏನೇನೋ ಇಂಗ್ಲೀಷ್ ಟೈಟಲ್ ಇಡುತ್ತಿವೆ. ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಬೇಸರ ತರಿಸಿದೆ. ಸ್ವತಃ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು “ಕನ್ನಡ ಶೀರ್ಷಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಹೇಳಿದ್ದಾರೆ.
“ಪರಭಾಷಾ ಚಿತ್ರರಂಗಗಳಲ್ಲಿ ಆಯಾ ಭಾಷೆಯ ಶೀರ್ಷಿಕೆಗಳಿಗಷ್ಟೇ ಆದ್ಯತೆ. ಅದಕ್ಕೆ ಸರಿಯಾಗಿ ಅಲ್ಲಿನ ನಿರ್ದೇಶಕ, ನಿರ್ಮಾಪಕರು ಆಯಾ ಭಾಷೆಯ ಶೀರ್ಷಿಕೆಗಳನ್ನೇ ಇಡುತ್ತಿದ್ದಾರೆ. ನಮ್ಮಲ್ಲಿ ಇಂಗ್ಲೀಷ್ ವ್ಯಾಮೋಹ ಜಾಸ್ತಿಯಾಗಿದೆ. ಶೀರ್ಷಿಕೆ ನೋಂದಾವಣೆಗೆ ಬರುವ ಬಹುತೇಕ ಶೀರ್ಷಿಕೆಗಳು ಇಂಗ್ಲೀಷ್ನಲ್ಲಿರುತ್ತವೆ. ನಾವು “ಕನ್ನಡ ಶೀರ್ಷಿಕೆ ಇಡಿ, ಈ ಶೀರ್ಷಿಕೆ ಬದಲಿಸಿ’ ಎಂದು ಎಷ್ಟು ಹೇಳಿದರೂ ನಿರ್ದೇಶಕರು ಕೇಳುತ್ತಿಲ್ಲ.
“ಇಲ್ಲಾ ಸಾರ್, ಕಥೆಗೆ ತುಂಬಾ ಹೊಂದುತ್ತೆ. ಟೈಟಲ್ ಬದಲಿಸಿದರೆ ಸಿನಿಮಾದ ಸಾರವೇ ಹೋಗುತ್ತದೆ’ ಎನ್ನುತ್ತಾರೆ. ನಾವು ಹೇಳುವಷ್ಟು ಹೇಳುತ್ತೇವೆ. ಮತ್ತೆ ಏನಾದರೂ ಮಾಡಿಕೊಳ್ಳಿ, ನಮ್ಮಿಂದ ಸಿನಿಮಾ ಸೋತಿತು ಎಂಬ ಅಪವಾದ ಬೇಡ ಎಂದು ಟೈಟಲ್ ಕೊಟ್ಟು ಕಳಿಸುತ್ತಿದ್ದೇವೆ.
ಕೇವಲ ಇಂಗ್ಲೀಷ್ ಟೈಟಲ್ ಇಟ್ಟ ಕೂಡಲೇ ಸಿನಿಮಾ ಯಶಸ್ವಿಯಾಗುತ್ತದೆ ಎಂಬುದು ಕೇವಲ ಭ್ರಮೆ’ ಎನ್ನುವ ಮೂಲಕ ಕನ್ನಡ ಶೀರ್ಷಿಕೆಗಳಿಗೆ ಆದ್ಯತೆ ಕೊಡಬೇಕು ಎಂದಿದ್ದಾರೆ ಸಾ.ರಾ.ಗೋವಿಂದು. ಅಂದಹಾಗೆ, ಸಾ.ರಾ.ಗೋವಿಂದು ಟೈಟಲ್ ಬಗ್ಗೆ ಮಾತನಾಡಿದ್ದು “ಬ್ರಾಂಡ್’ ಎಂಬ ಕನ್ನಡ ಸಿನಿಮಾದ ಆಡಿಯೋ ರಿಲೀಸ್ನಲ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.