Gowri Movie: ಸಮರ್ಥ ಸಮರ್ಜಿತ; ಇಂದ್ರ ಲೋಕದ ಸುಂದ್ರ ಇವ..


Team Udayavani, Aug 15, 2024, 1:49 PM IST

Gowri Movie: ಸಮರ್ಥ ಸಮರ್ಜಿತ; ಇಂದ್ರ ಲೋಕದ ಸುಂದ್ರ ಇವ..

ಇಂದ್ರಜಿತ್‌ ಲಂಕೇಶ್‌ ಪುತ್ರ ಸಮರ್ಜಿತ್‌ “ಗೌರಿ’ ಚಿತ್ರದ ಮೂಲಕ ಹೀರೋ ಆಗಿ ಇಂದು ತೆರೆಗೆ ಬರುತ್ತಿದ್ದಾರೆ. ಈ ಚಿತ್ರವನ್ನು ಇಂದ್ರಜಿತ್‌ ಲಂಕೇಶ್‌ ಅವರೇ ನಿರ್ದೇಶನ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಕುರಿತು ಸಮರ್ಜಿತ್‌ ಮಾತನಾಡಿದ್ದಾರೆ.

ಹೀರೋ ಆಗಿ ಇಂದು ತೆರೆಮೇಲೆ ಬರುತ್ತಿದ್ದೀರಿ?

ತುಂಬ ಖುಷಿಯ ಕ್ಷಣವಿದು. ಸಿನಿಮಾ ಚೆನ್ನಾಗಿ ಬಂದಿದೆ. ಸಿನಿಮಾ ಮೇಲೆ ಮತ್ತು ನಮ್ಮ ಕನ್ನಡ ಜನರ ಮೇಲೆ ನಂಬಿಕೆ ಇದೆ. ಒಳ್ಳೆ ಸಿನಿಮಾ ಮಾಡಿದ್ರೆ ಖಂಡಿತಾ ಅವರು ಗೆಲ್ಲಿಸುತ್ತಾರೆ. ಮೊದಲ ಸಿನಿಮಾವಿದು.. ಹಾಗಾಗಿ ಬಹಳ ಎಕ್ಸೆ„ಟ್‌ ಆಗಿದ್ದೇನೆ. ಸಿನಿಮಾದ ರಿಸಲ್ಟ್ಗೆ ಎದುರು ನೋಡುತ್ತಿದ್ದೇನೆ.

ಅಪ್ಪನ ನಿರ್ದೇನದ ಬಗ್ಗೆ ಹೇಳಿ?

ಇದು ಬಹಳ ವಿಶೇಷ. ಮೊದಲ ಸಿನಿಮಾವನ್ನು ಅಪ್ಪಾಜಿ ನಿರ್ದೇಶನ ಮಾಡ್ತಾರೆ ಅಂದುಕೊಂಡಿರಲಿಲ್ಲ. ಸಿನಿಮಾದಲ್ಲಿ ಸ್ವಲ್ಪ ಹೆಸರು ಮಾಡಿದ ನಂತರ ಅಪ್ಪ ನಿರ್ದೇಶನ ಮಾಡಬಹುದು ಅಂತ ಅಂದುಕೊಂಡಿದ್ದೆ. ಅವರ ಜತೆ ಕೆಲಸ ಮಾಡಿದ್ದಕ್ಕೆ ಖುಷಿಯಾಗ್ತಿದೆ. ಸಿನಿಮಾ ಶುರು ಆದಾಗಿನಿಂದ ಅವರ ಜತೆ ಇನ್ನಷ್ಟು ಕ್ಲೋಸ್‌ ಆಗಿದ್ದೀನಿ.

ನಟನೆ ಮತ್ತು ಸಿನಿಮಾದ ಕಥೆಗೆ ನಿಮ್ಮ ತಯಾರಿ ಹೇಗಿತ್ತು?

ನಟನೆಯಲ್ಲಿ ತಯಾರಿ ಮಹತ್ವದ್ದು. ನಿನ್ನೆಗಿಂತ ಇವತ್ತು ಚೆನ್ನಾಗಿ ಮಾಡಬೇಕು, ಇದೇ ಮನಸ್ಥಿತಿ ಇರುತ್ತದೆ. ನಮ್ಮ ಕನ್ನಡ ಸಿನಿರಂಗದಲ್ಲಿ ಒಬ್ಬ ನಟನಿಗೆ ಏನೇನು ತಯಾರಿ ಅವಶ್ಯವಿದೆಯೋ ಅದೇ ರೀತಿ ನಾನು ತಯಾರಿ ಮಾಡಿಕೊಳ್ಳುತ್ತಲೇ ಇದ್ದೆ. ಇನ್ನು ಸಿನಿಮಾದಲ್ಲಿ ಪಾತ್ರ ಸವಾಲಿನದ್ದಾಗಿತ್ತು. ರಂಗಭೂಮಿಯಿಂದ ಬಂದಿದ್ದಕ್ಕೆ ನನಗೆ ಸಹಾಯವಾಯ್ತು. ನನ್ನ ಪ್ರಕಾರ, ಮುಂದೆ ಯಾರೇ ಸಿನಿಮಾಗೆ ಬರಬೇಕಂದ್ರೆ ರಂಗಭೂಮಿ ಮೂಲಕ ಬರುವುದು ಉತ್ತಮ. ಆಗ ಒಳ್ಳೆ ಅನುಭವ, ತರಬೇತಿ ಪಡೆದುಕೊಳ್ಳಬಹುದು.

ಗೌರಿ’ ಸಿನಿಮಾದ ಟೈಟಲ್‌ನಲ್ಲೇ ಒಂದು ವಿಶೇಷತೆ ಇದೆ?

“ಗೌರಿ’ ಹೆಸರು ಬಹಳ ವಿಶೇಷ. ನನ್ನ ಅತ್ತೆಯ ಸ್ಮರಣೆಗಾಗಿ ಈ ಟೈಟಲ್‌ ಇಟ್ಟಿದ್ದೇವೆ. ಅವರು ನನ್ನನ್ನು ಸ್ವಂತ ಮಗನ ರೀತಿ ನೋಡಿಕೊಳ್ಳುತ್ತಿದ್ದರು. ಸಿನಿಮಾ ಕ್ಷೇತ್ರದಲ್ಲಿ ಇಲ್ಲದಿದ್ದರೂ, ಇದರ ಬಗ್ಗೆ ತುಂಬಾ ಜ್ಞಾನ ಅವರಲ್ಲಿತ್ತು. “ಹೀರೋ ಆಗೋಕು ಮುನ್ನ ಒಳ್ಳೆ ಕಲಾವಿದ ಆಗಬೇಕು. ಆಗ ಜನ ಒಪ್ಪಿಕೊಳ್ತಾರೆ’ ಎಂದು ನನಗೆ ಸಲಹೆ ನೀಡಿದ್ದರು. ನನ್ನ ಮೊದಲನೇ ಸಿನಿಮಾ ಅವರು ನೋಡಬೇಕು, ಅವರ ಪ್ರತಿಕ್ರಿಯೆ ಕೇಳಬೇಕು ಅಂತ ಬಹಳ ಆಸೆ ಇತ್ತು. ಆದರೆ ಆ ಸಂದರ್ಭ ತಪ್ಪಿದೆ. ಇದು ಅವರ ಕಥೆಯೇನಲ್ಲ. ಒಂದು ನೈಜ ಘಟನೆಯ ಪ್ರೇರಣೆಯಿಂದ ಈ ಸಿನಿಮಾ ಮಾಡಿದ್ದೇವೆ.

ಅಪ್ಪನಿಗೆ ನೀವು ಮಗ ಇಷ್ಟವೋ, ನಟನಾಗಿಯೋ

ಸದ್ಯ ಮಗನ ದೃಷ್ಟಿಯಿಂದ ಹೊಗಳುತ್ತಿದ್ದಾರೆ ಎಂದೆನಿಸುತ್ತದೆ. ಚಿತ್ರದ ಶೂಟಿಂಗ್‌ ವೇಳೆ, ಪ್ರತಿ ಶಾಟ್‌ ಚೆನ್ನಾಗಿ ಬಂದಿದೆ ಎಂದು ಹೇಳಿದಾಗ ನನಗೆ ಬಹಳ ಖುಷಿಯಾಗುತ್ತಿತ್ತು. ಈ ಕ್ಷೇತ್ರದಲ್ಲಿ ಅವರೇ ನನಗೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅವರಿಂದಲೇ ನಾನಿಲ್ಲಿದ್ದೇನೆ.

ಪ್ರೇಕ್ಷಕರು “ಗೌರಿ’ ಸಿನಿಮಾ ಏಕೆ ನೋಡಬೇಕು?

ಇದೊಂದು ಕೌಟುಂಬಿಕ ಮನರಂಜನಾತ್ಮಕ ಸಿನಿಮಾ. ಇಲ್ಲಿನ ಆ್ಯಕ್ಷನ್‌, ಹಾಡುಗಳು ಖಂಡಿತ ಜನರಿಗೆ ಇಷ್ಟವಾಗುತ್ತದೆ. ನಾನು, ಸಾನಿಯಾ, ನವಾಜ್‌ ಮತ್ತು ಇನ್ನು ಅನೇಕ ಹೊಸ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದೇವೆ. ಕನ್ನಡ ಜನತೆ ಹೊಸ ಪ್ರತಿಭೆಗಳಿಗೆ ಬೆನ್ನುತಟ್ಟಬೇಕೆಂದು ಕೇಳಿಕೊಳ್ಳುತ್ತೇನೆ. ಜತೆಗೆ ಪ್ರಿಯಾಂಕಾ ಉಪೇಂದ್ರ, ಮಾನಸಿ ಸುಧೀರ್‌, ರಾಜೀವ್‌ ಪಿಳ್ಳೆ ಅವರಂಥ ದೊಡ್ಡ ನಟರೂ ಚಿತ್ರದಲ್ಲಿದ್ದಾರೆ. ಅದಕ್ಕಾಗಿ ಈ ಚಿತ್ರವನ್ನು ಜನ ಬಂದು ನೋಡಬೇಕು.

ನೀವು ಆಕ್ಷನ್‌ ಹೀರೋನಾ? ಯಾವ ಜಾನರ್‌ ನಿಮ್ಮದು?

“ಗೌರಿ’ ಒಂದು ಪ್ರೇರಣಾದಾಯಕ, ಕೌಟುಂಬಿಕ ಸಿನಿಮಾ. ಇದರಲ್ಲಿ ಆ್ಯಕ್ಷನ್‌, ಹಾಡು ಎಲ್ಲವೂ ಇದೆ. ಒಂದು ಫ್ಯಾಮಿಲಿ ಎಂಟರ್‌ಟೇನರ್‌ ಎನ್ನಬಹುದು. ಅಪ್ಪಾಜಿ ಸಹ ಇಂಥದ್ದೆ ಸಿನಿಮಾ ಇಷ್ಟಪಡುತ್ತಾರೆ. ಕಥೆಯ ಅನುಸಾರ ಅದನ್ನು ತೆರೆ ಮೇಲೆ ತಂದಿದ್ದೇವೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.