“ಮುತ್ತಣ್ಣ’ ಚಿತ್ರವನ್ನು ನೋಡಲಿಕ್ಕೆ ಇಲ್ಲಿವೆ ಏಳು ಕಾರಣಗಳು!
Team Udayavani, Oct 9, 2017, 5:13 PM IST
ಕಳೆದ ವಾರದಂತೆ ಈ ವಾರ ಸಹ ಹಲವು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ವಿಶೇಷವೆಂದರೆ, ಈ ವಾರ ಶಿವರಾಜಕುಮಾರ್ ಅವರ ಹಳೆಯ ಚಿತ್ರವಾದ “ಮುತ್ತಣ್ಣ’ ಸಹ ಮತ್ತೂಮ್ಮೆ ಬಿಡುಗಡೆಯಾಗುತ್ತಿರುವುದು. “ಮುತ್ತಣ್ಣ’ ಚಿತ್ರವು 1994ರಲ್ಲಿ ಬಿಡುಗಡೆಯಾಗಿತ್ತು. ಈಗ 23 ವರ್ಷಗಳ ನಂತರ 2ಕೆ 7.1 ಡಿಜಿಟಲ್ ಸೌಂಡ್ನಲ್ಲಿ ಬಿಡುಗಡೆಯಾಗುತ್ತಿದೆ.
ಚಿತ್ರದ ನಿರ್ಮಾಪಕ ಎಲ್. ಸೋಮಣ್ಣ ಗೌಡರೇ ಹಳೆಯ ಚಿತ್ರಕ್ಕೆ ಸುಮಾರು 30 ಲಕ್ಷ ಖರ್ಚು ಮಾಡಿ, ಹೊಸ ತಂತ್ರಜ್ಞಾನ ಅಳವಡಿಸಿ, ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲಾ ಸರಿ, 23 ವರ್ಷಗಳ ಹಿಂದೆ ಬಿಡುಗಡೆಯಾದ “ಮುತ್ತಣ್ಣ’ ಚಿತ್ರವನ್ನು ಪ್ರೇಕ್ಷಕರು ಏಕೆ ನೋಡಬೇಕು. ಯಾಕೆ ನೋಡಬೇಕು ಎಂಬುದಕ್ಕೆ ನಿರ್ಮಾಪಕ ಏಳು ಕಾರಣಗಳನ್ನು ನೀಡಿದ್ದಾರೆ. ಆ ಕಾರಣಗಳು ಇಲ್ಲಿವೆ.
1) ಪ್ರಥಮ ಬಾರಿಗೆ ಶಿವರಾಜಕುಮಾರ್ ಅವರು ಸ್ವಂತ ಬ್ಯಾನರ್ನಿಂದ ಹೊರಗಡೆ ಬ್ಯಾನರ್ನಲ್ಲಿ ನಟಿಸಿರುವ ಚಿತ್ರ.
2) ಪ್ರಥಮ ಬಾರಿಗೆ ಶಿವರಾಜಕುಮಾರ್ ಅವರು ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರ.
3) ಪ್ರಥಮ ಬಾರಿಗೆ ಗೀತಾ ಶಿವರಾಜಕುಮಾರ್ ಅವರು ಕಾಸ್ಟೂಮ್ ಡಿಸೈನ್ ಮಾಡಿದ ಚಿತ್ರ.
4) ಪ್ರಥಮ ಬಾರಿಗೆ ಶಿವರಾಜಕುಮಾರ್ ಅವರ ಸುಪುತ್ರಿ ನಿರುಪಮಾ ಶಿವರಾಜಕುಮಾರ್ ನಟಿಸಿರುವ ಚಿತ್ರ.
5) ಪ್ರಥಮ ಬಾರಿಗೆ ಹಂಸಲೇಖ ಅವರು “ಮುತ್ತಣ್ಣ ಪೀಪಿ ಊದುವ …’ ಹಾಡಿಗೆ 80 ಪಿಟೀಲುಗಳನ್ನು ಬಳಸಿರುವ ಚಿತ್ರ.
6) ಪ್ರಥಮ ಬಾರಿಗೆ ಛಾಯಾಗ್ರಾಹಕ ಆರ್. ಮಧುಸೂಧನ್ ಅವರು ಎರಡು ಕ್ಯಾಮೆರಾಗಳನ್ನು ಬಳಸಿ ಸಂಪೂರ್ಣ ಚಿತ್ರವನ್ನು ಚಿತ್ರೀಕರಿಸಿದ ಚಿತ್ರ.
7) ಪ್ರಥಮ ಬಾರಿಗೆ ಚೆನ್ನೈನ ಸ್ಟಂಟ್ ಮಾಸ್ಟರ್ ರಾಜ ರಾಜೇಶ್ ಅವರು, ಶಿವರಾಜಕುಮಾರ್ ಅವರ ದ್ವಿಪಾತ್ರದ ಸಾಹಸಗಳನ್ನು ಸಂಯೋಜಿಸಿರುವ ಚಿತ್ರ.
ಇವೇ ಆ ಏಳು ವಿಶೇಷ ಕಾರಣಗಳು. ಅಂದಹಾಗೆ, “ಮುತ್ತಣ್ಣ’ ಚಿತ್ರವನ್ನು ಎಂ.ಎಸ್. ರಾಜಶೇಖರ್ ನಿರ್ದೇಶಿಸಿದ್ದು, ಚಿತ್ರಕ್ಕೆ ಹಂಸಲೇಖ ಅವರು ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ. ಇನ್ನು ಚಿತ್ರದಲ್ಲಿ ಶಿವರಾಜಕುಮಾರ್ ಅವರೊಂದಿಗೆ ಸುಪ್ರಿಯಾ, ಶಶಿಕುಮಾರ್, ಭವ್ಯಶ್ರೀ ರೈ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್ ಅರವಿಂದ್
Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್ವುಡ್ನ ಪಾರ್ಟ್-2 ಕ್ರೇಜ್
Upendra Movie: ರೀ ರಿಲೀಸ್ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ
Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್ ರೋಡ್ʼ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.