![Father in Sindh arrested for burying 15-day-old daughter alive](https://www.udayavani.com/wp-content/uploads/2024/07/sindh-415x229.jpg)
Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’
Team Udayavani, Jul 5, 2024, 3:40 PM IST
![Huccha movie to be re-released with technical update](https://www.udayavani.com/wp-content/uploads/2024/07/huccha-620x342.jpg)
ಹುಚ್ಚ’- ಸಿನಿಮಾ ಪ್ರೇಮಿಗಳ ಹೃದಯದಲ್ಲಿ ಈ ಚಿತ್ರಕ್ಕೊಂದು ವಿಶೇಷ ಸ್ಥಾನವಿದೆ. ಅದಕ್ಕೆ ಕಾರಣ ನಾಯಕ ಸುದೀಪ್ ಅವರ ನಟನೆ. ತಮ್ಮ ಅದ್ಭುತ ನಟನೆಯ ಮೂಲಕ “ಹುಚ್ಚ’ ಚಿತ್ರದಲ್ಲಿ ಮಿಂಚಿದ್ದರು ಸುದೀಪ್. ನಟನೆ, ಹಾಡು ಎಲ್ಲದರಲ್ಲೂ ಆ ಚಿತ್ರ ಫುಲ್ ಮಾರ್ಕ್ಸ್ ಪಡೆದುಕೊಂಡಿತ್ತು. ಸುದೀಪ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಕೂಡಾ ಹೌದು. ಅದೇ ಕಾರಣದಿಂದ ಸುದೀಪ್ ಅವರಿಗೂ ಆ ಚಿತ್ರದ ಮೇಲೆ ವಿಶೇಷ ಪ್ರೀತಿ ಇದೆ. ಈಗ ಯಾಕೆ ಈ ವಿಚಾರ ಎಂದು ಕೇಳಬಹುದು. ಅದಕ್ಕೆ ಕಾರಣ “ಹುಚ್ಚ’ ಮತ್ತೂಮ್ಮೆ ಪ್ರೇಕ್ಷಕರ ಎದುರು ಬರಲು ಸಿದ್ಧವಾಗಿದೆ. ಅದು ತಾಂತ್ರಿಕ ಶ್ರೀಮಂತಿಕೆಯೊಂದಿಗೆ.
ಹೌದು, “ಹುಚ್ಚ’ ಚಿತ್ರ ಮರುಬಿಡುಯಾಗುತ್ತದೆ. ಚಿತ್ರವನ್ನು ಮೂಲ ನಿರ್ಮಾಪಕರ ಅನುಮತಿ ಪಡೆದು ಎ.ಎಂ.ಎಸ್ ಬ್ಯಾನರ್ನ ನಿರ್ಮಾಪಕ ಎಸ್.ಡಿ. ಮುನಿಸ್ವಾಮಿ ಅವರು ಅಪ್ಪು ಆರ್ಟ್ಸ್ ಮೂಲಕ ರೀ ರಿಲೀಸ್ ಮಾಡುತ್ತಿದ್ದಾರೆ.
ಮುನಿಸ್ವಾಮಿ ಅವರು ಈಗಾಗಲೇ “ಕುಲ್ಫಿ’ ನಿರ್ಮಿಸಿದ್ದು, “ಲಂಕಾಸುರ’ ಚಿತ್ರದ ನಿರ್ಮಾಣದಲ್ಲೂ ತೊಡಗಿದ್ದರು. ನೆಗೆಟಿವ್ನಿಂದ ಡಿಜಿಟಲ್ ಫಾರ್ಮೆಟ್ಗೆ ಚಿತ್ರವನ್ನು ಬದಲಿಸಲಾಗಿದ್ದು, ಜೊತೆಗೆ ಎಫೆಕ್ಟ್ ಡಿಟಿಎಸ್, ಡಿಐ ಸೇರಿದಂತೆ ಇಡೀ ಸಿನಿಮಾವನ್ನು ತಾಂತ್ರಿಕವಾಗಿ ಅಪ್ಡೇಟ್ ಮಾಡಲಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎಂಬ ವಿಶ್ವಾಸವಿದೆ.
“ಹುಚ್ಚ’ ಚಿತ್ರದ ಈ ಎಲ್ಲಾ ಕಾರ್ಯಗಳನ್ನು “ಲಂಕಾಸುರ’ ಚಿತ್ರದ ಸಹಾಯಕ ನಿರ್ದೇಶಕ ವಿಕ್ರಮ್ ಅವರು ನಿಂತು ಮಾಡಿಸಿದ್ದು, ಈ ತಿಂಗಳಾಂತ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
![Father in Sindh arrested for burying 15-day-old daughter alive](https://www.udayavani.com/wp-content/uploads/2024/07/sindh-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![forest](https://www.udayavani.com/wp-content/uploads/2024/07/forest-150x83.jpg)
Forest; ಕಾಡಿನಲ್ಲಿ ಹಾಡಿನ ಸದ್ದು; ಫಾರೆಸ್ಟ್ ಒಳಗೆ ಚಿಕ್ಕಣ್ಣ- ಟೀಂ
![Father in Sindh arrested for burying 15-day-old daughter alive](https://www.udayavani.com/wp-content/uploads/2024/07/sindh-150x83.jpg)
Sindh; 15 ದಿನದ ಮಗಳನ್ನು ಜೀವಂತ ಸಮಾಧಿ ಮಾಡಿದ ತಂದೆ! ಬಂಧನ
![ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಕೃಷ್ಣಾ, ದೂಧಗಂಗಾ, ಮಲಪ್ರಭಾ ಒಳಹರಿವು ಹೆಚ್ಚಳ](https://www.udayavani.com/wp-content/uploads/2024/07/dudhaganga-150x83.jpg)
Rain: ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಕೃಷ್ಣಾ, ದೂಧಗಂಗಾ, ಮಲಪ್ರಭಾ ಒಳಹರಿವು ಹೆಚ್ಚಳ
![ಹುಬ್ಬಳ್ಳಿ: ಗಾರ್ಮೆಂಟ್ನಲ್ಲಿ ತೆರೆದುಕೊಳ್ಳುತ್ತಿವೆ ದೊಡ್ಡ ಅವಕಾಶಗಳು-ಜೋಶಿ](https://www.udayavani.com/wp-content/uploads/2024/07/Hubli-150x61.jpg)
ಹುಬ್ಬಳ್ಳಿ: ಗಾರ್ಮೆಂಟ್ನಲ್ಲಿ ತೆರೆದುಕೊಳ್ಳುತ್ತಿವೆ ದೊಡ್ಡ ಅವಕಾಶಗಳು-ಜೋಶಿ
![Shimoga; ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣ; ತಲಾ 1 ಲಕ್ಷ ಪರಿಹಾರ ನೀಡಿದ ದಂಪತಿ](https://www.udayavani.com/wp-content/uploads/2024/07/Shivanna-150x83.jpg)
Shimoga; ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣ; ತಲಾ 1 ಲಕ್ಷ ಪರಿಹಾರ ನೀಡಿದ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.