ಗಣೇಶ್‌ ಮೆಡಿಕಲ್ಸ್‌ನಲ್ಲಿ ಸತೀಶ್‌ ನೀನಾಸಂ


Team Udayavani, Apr 11, 2017, 12:03 PM IST

Neenasam-Satish-(5).jpg

“ನಮ್‌ ತಾಯಾಣೆಗೂ ನಾನ್‌ ಹೀರೋ ಅಲ್ಲ, ಪ್ರೊಡ್ನೂಸರ್‌ ಅಷ್ಟೇ …’ ಅಂತ ಚಿತ್ರದ ಜಾಹೀರಾತಿನಲ್ಲೇ ಹಾಕಿಸಿಕೊಂಡು ಬಿಟ್ಟಿದ್ದರು ಸ್ಕಂದ ಆಡಿಯೋದ ಪ್ರಸನ್ನ. ಈ ಮೂಲಕ ಈ ಚಿತ್ರದ ಹೀರೋ ಬೇರೆ ಯಾರೋ ಇರುತ್ತಾರೆ ಎಂದು ಸೂಕ್ಷ್ಮವಾಗಿ ಹಿಂಟ್‌ ಕೊಟ್ಟಿದ್ದರು. ಆದರೆ, ಆ ಹೀರೋ ಯಾರೂ? ಅವರು ಉತ್ತರಿಸಿರಲಿಲ್ಲ. ರೆಸಾರ್ಟನಲ್‌É ಅವ್ರೇ ಅಂತ ಇತ್ತು. ಹೋಗಲಿ ನಿರ್ದೇಶಕರು ಯಾರು ಎಂದರೆ ಅದಕ್ಕೂ ಸರಿಯಾದ ಉತ್ತರವಿಲ್ಲ. ಕೋಟಿ ಕೇಳ್ತಾವ್ರೇ ಅಂತ ಜಾಹೀರಾತಿನಲ್ಲಿತ್ತೇ ಹೊರತು, ಆ ಕೋಟಿ ಕೇಳ್ಳೋ ಪುಣ್ಯಾತ್ಮ ಯಾರು ಅಂತ ಮಾತ್ರ ಬಿಟ್ಟುಕೊಟ್ಟಿರಲಿಲ್ಲ.

ಈಗ ಕೊನೆಗೂ ಉತ್ತರ ಸಿಕ್ಕಿದೆ. “ಗಣೇಶ್‌ ಮೆಡಿಕಲ್ಸ್‌’ನ ಹೀರೋ ಆಗಿ ಸತೀಶ್‌ ನೀನಾಸಂ ನಟಿಸುತ್ತಿದ್ದರೆ, ಚಿತ್ರದ ನಿರ್ದೇಶನವನ್ನು ವಿಜಯಪ್ರಸಾದ್‌ ಮಾಡಲಿದ್ದಾರೆ. ಇವರಿಬ್ಬರೂ ಪ್ರಸನ್ನ ಜೊತೆಗೆ ಈ ಹಿಂದೆ ಕೆಲಸ ಮಾಡಿದವರೇ. ಪ್ರಸನ್ನ ನಿರ್ಮಾಣದ “ನೀರ್‌ ದೋಸೆ’ ಚಿತ್ರವನ್ನು ವಿಜಯಪ್ರಸಾದ್‌ ನಿರ್ದೇಶಿಸಿದರೆ, “ಬ್ಯೂಟಿಫ‌ುಲ್‌ ಮನಸುಗಳು’ ಚಿತ್ರದಲ್ಲಿ ಸತೀಶ್‌ ನಾಯಕರಾಗಿದ್ದರು. ತಮ್ಮ ಮೊದಲ ಚಿತ್ರದ ನಿರ್ದೇಶಕ ಮತ್ತು ಎರಡನೆಯ ಚಿತ್ರದ ನಾಯಕರನ್ನೇ ಇಟ್ಟುಕೊಂಡು ಮೂರನೆಯ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ಪ್ರಸನ್ನ.

ವಿಜಯಪ್ರಸಾದ್‌ ಮತ್ತು ಸತೀಶ್‌ ಈ ಹಿಂದೆ “ಪೆಟ್ರೋಮ್ಯಾಕ್ಸ್‌’ ಎಂಬ ಚಿತ್ರ ಮಾಡಬೇಕಿತ್ತು. ಚಿತ್ರ ಸೆಟ್ಟೇರಿದರೂ, ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಈಗ “ಪೆಟ್ರೋಮ್ಯಾಕ್ಸ್‌’ ಪಕ್ಕಕ್ಕಿಟ್ಟು ಇಬ್ಬರೂ “ಗಣೇಶ್‌ ಮೆಡಿಕಲ್ಸ್‌’ ಚಿತ್ರದ ಮೂಲಕ ಒಟ್ಟಾಗುತ್ತಿದ್ದಾರೆ. “ವಿಜಯಪ್ರಸಾದ್‌ ಅವರ ಜೊತೆಗೆ ಈ ಹಿಂದೆಯೇ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸ್ಟ್ರಕ್‌ ಆಗಿತ್ತು. ಈಗ ಕಾಲ ಕೂಡಿ ಬಂದಿದೆ. ವಿಜಯಪ್ರಸಾದ್‌ ಬಹಳ ಒಳ್ಳೆಯ ಕಥೆ ಮಾಡಿದ್ದಾರೆ. ಶೂಟಿಂಗ್‌ ಶುರು ಮಾಡಬೇಕು. ಅದಕ್ಕೂ ಮುನ್ನ ಇಬ್ಬರೂ ನಮ್ಮ ಈಗಿರುವ ಚಿತ್ರಗಳನ್ನು ಮುಗಿಸಬೇಕು’ ಎನ್ನುತ್ತಾರೆ ಸತೀಶ್‌ ನೀನಾಸಂ.

ಅಂದಹಾಗೆ, “ಗಣೇಶ್‌ ಮೆಡಿಕಲ್ಸ್‌’ ಚಿತ್ರ ಶುರುವಾಗುವುದೇನಿದ್ದರೂ ಈ ವರ್ಷದ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ಹೊತ್ತಿಗೇ. ಅದಕ್ಕೂ ಮುನ್ನ ವಿಜಯಪ್ರಸಾದ್‌ “ಲೇಡೀಸ್‌ ಟೈಲರ್‌’ ಚಿತ್ರ ಮುಗಿಸಬೇಕು. ಇನ್ನು ಸತೀಶ್‌ ಸಹ ಇನ್ನೊಂದು (ಜೇಕಬ್‌ ವರ್ಗೀಸ್‌ ಶಿಷ್ಯ ನಿರ್ದೇಶನದ ಹೆಸರಿಡದ) ಚಿತ್ರವನ್ನು ಮುಗಿಸಬೇಕು. ಇಬ್ಬರೂ  ಈಗ ಒಪ್ಪಿರುವ ಚಿತ್ರಗಳನ್ನು ಮುಗಿಸಿ, “ಗಣೇಶ್‌ ಮೆಡಿಕಲ್ಸ್‌’ನ ಶಟರ್‌ ತೆಗೆಯಬೇಕಿದೆ. ಇನ್ನು ಚಿತ್ರವೇನಿದ್ದರೂ ಮುಂದಿನ ವರ್ಷವೇ ಬಿಡುಗಡೆ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bigg

BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..

Komal Kumar’s Yala kunni ready to release

Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ

Arjun Sarja announces new film Seetha Payana

Seetha Payana: ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್‌ ಹೀರೋ

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

2

Actor Darshan: ಅ.22ಕ್ಕೆ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.