
ರಿಲೀಸ್ ಅಖಾಡಕ್ಕೆ ಜಗ್ಗೇಶ್ ಸಿನಿಮಾ; ವಿಭಿನ್ನ ಪೋಸ್ಟರ್ ಗಳಲ್ಲಿ ತೋತಾಪುರಿ – 2 ಮಿಂಚು
Team Udayavani, Jun 30, 2023, 2:29 PM IST

ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಸ್ ಗೆ ಬಂದರೆ ಅದರ ಪೋಸ್ಟರ್ ಗಳು ಹೇಗಿರುತ್ತವೆ ಹೇಳಿ? ಸಿನಿಮಾದ ಹೀರೋ ಅಥವಾ ಹೀರೋ-ಹೀರೋಯಿನ್ ಇಬ್ಬರೂ ಇರುವ ವಿಭಿನ್ನ ಪೋಸ್ಟರ್ಗಳನ್ನು ಬಿಡುಗಡೆ ಮಾಡಿ ಸಿನಿಮಾದ ಪ್ರಮೋಶನ್ ಆರಂಭಿಸುತ್ತದೆ. ಆದರೆ, ಇಲ್ಲೊಂದು ಚಿತ್ರತಂಡ ಮಾತ್ರ ಸಿನಿಮಾದ ಯಾವ ಆರ್ಟಿಸ್ಟ್ ಫೋಟೋ ಬಳಸದೇ ವಿಭಿನ್ನ ರೀತಿಯ ಪೋಸ್ಟರ್ ಬಿಡುಗಡೆ ಮಾಡಿ ಗಮನ ಸೆಳೆದಿದೆ. ಅದು ಜಗ್ಗೇಶ್ ನಾಯಕರಾಗಿರುವ “ತೋತಾಪುರಿ-2′ ಚಿತ್ರ.
ಹೌದು, ಜಗ್ಗೇಶ್-ಧನಂಜಯ್ ಮುಖ್ಯಭೂಮಿಕೆಯಲ್ಲಿರುವ “ತೋತಾಪುರಿ-2′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರತಂಡ ರಿಲೀಸ್ ಮಾಡಿರುವ ಪೋಸ್ಟರ್ಗಳು ಗಮನ ಸೆಳೆಯುತ್ತಿವೆ.
ಮೊದಲ ದಿನ ರಾಮ, ಮಾರನೇ ದಿನ ರಾಮ+ಆಂಜನೇಯ, ಮತ್ತೂಂದು ದಿನ ಗಣೇಶ ಹಾಗೂ ಕೃಷ್ಣ..! ಹೀಗೆ ದಿನಕ್ಕೊಂದು ಪೋಸ್ಟರ್ ಬಿಟ್ಟು ಕುತೂಹಲ ಮೂಡಿಸಿದೆ
“ತೋತಾಪುರಿ-2′. ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವೊಂದು ಈ ರೀತಿಯ ಪೋಸ್ಟರ್ ಬಿಟ್ಟಿರೋದು ಸಖತ್ ವೈರಲ್ ಆಗಿದ್ದು, ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ. ಕಾಮಿಡಿ ಸಿನಿಮಾವೊಂದರ ಪೋಸ್ಟರ್ಗೆ ಧಾರ್ಮಿಕ ಟಚ್ ನೀಡಿರುವುದು ಯಾಕೆ ಎಂಬ ಕುತೂಹಲ ಸಿನಿಪ್ರೇಮಿಗಳದ್ದು. ಕೆಲವು ಸಿನಿಮಾಗಳ ಪೋಸ್ಟರ್ಗೂ ಸಿನಿಮಾದೊಳಗಿರುವ ಕಥೆಗೂ ಸಂಬಂಧವಿರುವುದಿಲ್ಲ, ಇನ್ನು ಕೆಲವು ಸಿನಿಮಾಗಳು ಥೀಮ್ ಪೋಸ್ಟರ್ ಬಿಡುಗಡೆ ಮಾಡಿ, ಆ ಮೂಲಕ ತಮ್ಮ ಸಿನಿಮಾದೊಳಗಿನ ಕಥೆಯ ಬಗ್ಗೆ ಪ್ರೇಕ್ಷಕರಿಗೆ ಒಂದು ಸ್ಪಷ್ಟತೆ ಕೊಡುತ್ತಾರೆ. ಹಾಗಾದರೆ, “ತೋತಾಪುರಿ-2′ ಪೋಸ್ಟರ್ನ ಹಿಂದಿನ ಉದ್ದೇಶವೇನು ಎಂಬುದು ಸ್ಪಷ್ಟವಾಗಿಲ್ಲ.
“ತೋತಾಪುರಿ-2′ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹತದಲ್ಲಿದ್ದು, ಶೀಘ್ರದಲ್ಲೇ ಚಿತ್ರತಂಡ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿದೆ. ವಿಜಯಪ್ರಸಾದ್ ನಿರ್ದೇಶನದ ಈ ಚಿತ್ರವನ್ನು ಸುರೇಶ್ ಆರ್ಟ್ಸ್ನಡಿ ಕೆ.ಎ.ಸುರೇಶ್ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಜಗ್ಗೇಶ್, ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಮುಂತಾದವರು ನಟಿಸಿದ್ದಾರೆ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra: ʼಯುಐʼಗೆ ಸ್ಯಾಂಡಲ್ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.