ಜಗ್ಗೇಶ್‌-ವಿಜಯಪ್ರಸಾದ್‌ ಬ್ಯಾಂಗ್‌ ಬ್ಯಾಂಗ್‌:  ಸೆ.30ಕ್ಕೆ ‘ತೋತಾಪುರಿ’ ಭರ್ಜರಿ ಬಿಡುಗಡೆ


Team Udayavani, Aug 12, 2022, 12:50 PM IST

ಜಗ್ಗೇಶ್‌-ವಿಜಯಪ್ರಸಾದ್‌ ಬ್ಯಾಂಗ್‌ ಬ್ಯಾಂಗ್‌:  ಸೆ.30ಕ್ಕೆ ‘ತೋತಾಪುರಿ’ ಭರ್ಜರಿ ಬಿಡುಗಡೆ

ಈ ವರ್ಷ ಚಂದನವನದಲ್ಲಿ ಸ್ಟಾರ್‌ ಸಿನಿಮಾಗಳು ಬಂಗಾರದ ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಫ‌ಸಲು ಭರ್ಜರಿಯಾಗಿಯೇ ಇದೆ. ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶದಲ್ಲೂ ಜೋರಾಗಿಯೇ ಸದ್ದು ಮಾಡಿರುವುದು ಸ್ಯಾಂಡಲ್ ವುಡ್‌ ಹೆಚ್ಚುಗಾರಿಕೆ. ಕೆಜಿಎಫ್ 2, ಜೇಮ್ಸ್, 777 ಚಾರ್ಲಿ, ವಿಕ್ರಾಂತ್‌ ರೋಣ ಸೇರಿದಂತೆ ಮೊದಲಾದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಿಂಚು ಹರಿಸಿವೆ.

ಇದೀಗ ಅದೇ ಸಾಲಿನಲ್ಲಿ “ತೋತಾಪುರಿ’ ಸಹ ಸದ್ದು ಮಾಡಲು ಸಜ್ಜಾಗಿದೆ. ಇವೆಲ್ಲವೂ ಪ್ಯಾನ್‌ ಇಂಡಿಯಾ ಸಿನಿಮಾ ಎಂಬುದು ಒಂದೆಡೆಯಾದರೆ, “ತೋತಾಪುರಿ’ ಭಾಗ 1 ಭಾಗ 2 ರೂಪದಲ್ಲಿ ತೆರೆಕಾಣುತ್ತಿರೋದು ವಿಶೇಷ. ಈ ಚಿತ್ರದಲ್ಲಿ “ನೀರ್‌ ದೋಸೆ’ ಹಿಟ್‌ ಜೋಡಿ ಜಗ್ಗೇಶ್‌ ಹಾಗೂ ವಿಜಯಪ್ರಸಾದ್‌ ಮೋಡಿ ಮಾಡಲಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ‘ತೋತಾಪುರಿ’ಗಾಗಿ ವಿಶ್ವಾದ್ಯಂತ ಕುತೂಹಲದಿಂದ ಎದುರು ನೋಡುತ್ತಿರುವುದು ವಿಶೇಷ ಸಂಗತಿ.

ಸೆಪ್ಟೆಂಬರ್‌ 30ರಂದು ವಿಶ್ವಾದ್ಯಂತ “ತೋತಾಪುರಿ’ ಭಾಗ 1 ತೆರೆಗೆ ಬರಲು ಸಜ್ಜಾಗಿದೆ. ಇಷ್ಟಲ್ಲದೇ ಈ ಸಿನಿಮಾದಲ್ಲಿ ಇನ್ನೂ ಸಾಕಷ್ಟು ಸಂಗತಿಗಳಿವೆ. ತಾರಾಗಣ, ತಾಂತ್ರಿಕತೆ ಹಾಗೂ ವಿವಿಧ ಲೊಕೇಶನ್‌ಗಳ ವೈವಿಧ್ಯತೆ “ತೋತಾಪುರಿ’ಯಲ್ಲಿ ಅಡಕವಾಗಿದೆ. ಈಗಾಗಲೇ ಬೇರೆ ಭಾಷೆಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ “ಡಾಲಿ’ ಧನಂಜಯ್‌ ಈ ಸಿನಿಮಾದ ಮತ್ತೂಂದು ಆಕರ್ಷಣೆ. ಅಲ್ಲದೇ ತಮಿಳಿನ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಅನೂಪ್‌ ಸೀಳಿನ್‌ ಈ ಚಿತ್ರಕ್ಕೂ ಸಂಗೀತ ನೀಡಿರುವುದು ಪ್ಲಸ್‌ ಪಾಯಿಂಟ್‌.

ಇದನ್ನೂ ಓದಿ:ನಿಗದಿತ ದಿನಕ್ಕಿಂತ ಮೊದಲೇ ಆರಂಭವಾಗಲಿದೆ ಕತಾರ್ ಫುಟ್ ಬಾಲ್ ವಿಶ್ವಕಪ್

ಹಾಗೆಯೇ ಈ ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್‌ ನಿರ್ಮಿಸಿರುವ ಗೋವಿಂದಾಯ ನಮಃ, ಶಿವಲಿಂಗ ಸೇರಿದಂತೆ ಅನೇಕ ಸಿನಿಮಾಗಳು ಪರಭಾಷೆಗಳಲ್ಲಿ ರೀಮೇಕ್‌ ಆಗಿರುವುದರಿಂದ ಪಕ್ಕದ ರಾಜ್ಯದಲ್ಲಿ “ತೋತಾಪುರಿ’ ಬಗ್ಗೆ ಅದಾಗಲೇ ಟಾಕ್‌ ಶುರುವಾಗಿದೆ. ಇವೆಲ್ಲಾ ಅಂಶಗಳು ಪ್ಯಾನ್‌ ಮಟ್ಟದ ಸಿನಿಮಾಕ್ಕೆ ಸಾಥ್‌ ನೀಡುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಚಿತ್ರತಂಡದ ಬಲವಾದ ನಂಬಿಕೆ.

ಟಾಪ್ ನ್ಯೂಸ್

1-shetl

Badminton: ವಿಶ್ವದ 4ನೇ ಶ್ರೇಯಾಂಕದ ಆಂಟೊನ್ಸೆನ್ ಗೆ ಶಾಕ್ ನೀಡಿದ ಪ್ರಿಯಾಂಶು ರಾಜಾವತ್

sanjay-raut

Lalu Yadav ಹೇಳಿದ್ದು ಸರಿ; ಅಲೆಗಳು ಇನ್ನೂ ರಾಹುಲ್ ಪರವಿದೆ: ಸಂಜಯ್ ರಾವತ್

BSP president Armstrong case; Chennai police arrested 8 suspects

BSP ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ; 8 ಶಂಕಿತರನ್ನು ಬಂಧಿಸಿದ ತಮಿಳುನಾಡು ಪೊಲೀಸ್

Ludhiana; Shiv Sena leader attacked by Nihang Sikhs in the middle of the day. Video

Ludhiana;ಶಿವಸೇನಾ ನಾಯಕನ ಮೇಲೆ ಹಾಡಹಗಲೇ ನಡುರಸ್ತೆಯಲ್ಲಿ ನಿಹಾಂಗ್ ಸಿಖ್ಖರಿಂದ ದಾಳಿ| Video

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

France-Assmbly

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

Jigar

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

ಶೀಘ್ರದಲ್ಲೇ ಕಿಚ್ಚ ಸುದೀಪ್‌ ʼಹುಚ್ಚʼ, ಶಿವರಾಜ್‌ ಕುಮಾರ್‌ ʼಜೋಗಿʼ ಸಿನಿಮಾ ರೀ-ರಿಲೀಸ್‌

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

“ದರ್ಶನ್‌ ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ..” ಸುಮಲತಾ ಸುದೀರ್ಘ ಪೋಸ್ಟ್

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

1-shetl

Badminton: ವಿಶ್ವದ 4ನೇ ಶ್ರೇಯಾಂಕದ ಆಂಟೊನ್ಸೆನ್ ಗೆ ಶಾಕ್ ನೀಡಿದ ಪ್ರಿಯಾಂಶು ರಾಜಾವತ್

ನೀಟ್‌ ಪರೀಕ್ಷೆ ರದ್ದು ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದ್ರೆ: ಎನ್‌ ಟಿಎ

ನೀಟ್‌ ಪರೀಕ್ಷೆ ರದ್ದು ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದ್ರೆ: ಎನ್‌ ಟಿಎ

sanjay-raut

Lalu Yadav ಹೇಳಿದ್ದು ಸರಿ; ಅಲೆಗಳು ಇನ್ನೂ ರಾಹುಲ್ ಪರವಿದೆ: ಸಂಜಯ್ ರಾವತ್

Kaagada movie review

Kaagada movie review; ಕಾಗದ ಮೇಲೆ ಅರಳಿದ ಮುಗ್ಧ ಪ್ರೀತಿ

BSP president Armstrong case; Chennai police arrested 8 suspects

BSP ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ; 8 ಶಂಕಿತರನ್ನು ಬಂಧಿಸಿದ ತಮಿಳುನಾಡು ಪೊಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.