![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 19, 2022, 10:49 AM IST
ಕನ್ನಡ ಚಿತ್ರರಂಗ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರೋದು ಗೊತ್ತೇ ಇದೆ. ಈಗಾಗಲೇ ಬಿಡುಗಡೆಯಾಗಿರುವ ಕೆಜಿಎಫ್-2, 777 ಚಾರ್ಲಿ, ವಿಕ್ರಾಂತ್ ರೋಣ ಚಿತ್ರಗಳು ಇಡೀ ದೇಶ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಈಗ ಆ ಸಾಲಿಗೆ ಮತ್ತೂಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಅದು ” ಕಬ್ಜ’.
ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟಿಸಿರುವ ” ಕಬ್ಜ ‘ ಚಿತ್ರ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಟೀಸರ್ ಗೆ ಸಿನಿಪ್ರಿಯರು ಫಿದಾ ಆಗಿದ್ದು, ಟೀಸರ್ ಹಿಟ್ಲಿಸ್ಟ್ ಸೇರಿದೆ. ಈ ಮೂಲಕ ” ಕಬ್ಜ’ ಹವಾ ಜೋರಾಗಿಯೇ ಎದ್ದಿದೆ.
ನಿರ್ದೇಶಕ ಆರ್.ಚಂದ್ರು ಏನು ಮಾಡಿರಬಹುದು ಎಂಬ ಕುತೂಹಲ ಅನೇಕರಲ್ಲಿತ್ತು. ಅದಕ್ಕೆ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಉತ್ತರ ನೋಡಿದೆ. ಚಂದ್ರು ತಮ್ಮ ದೊಡ್ಡ ಕನಸನ್ನು ಅಷ್ಟೇ ದೊಡ್ಡದಾಗಿ ತೆರೆಮೇಲೆ ತರುತ್ತಿರುವುದಕ್ಕೆ ಸಾಕ್ಷಿಯಾಗಿ ಟೀಸರ್ ಮೂಡಿಬಂದಿದೆ.
ಒಂದು ಗ್ಯಾಂಗ್ಸ್ಟಾರ್ ಕಥೆಯನ್ನು ಪಕ್ಕಾ ರಗಡ್ ಆಗಿ ಹೇಳಲು ಏನೆಲ್ಲಾ ಅಂಶಗಳನ್ನು ಒಟ್ಟು ಮಾಡಬೇಕೋ, ಅವೆಲ್ಲವನ್ನು ಒಟ್ಟು ಸೇರಿಸಿ, ” ಕಬ್ಜ’ ಎಂಬ ಒಂದು ಹೊಸ ಪ್ರಪಂಚವನ್ನು ಚಂದ್ರು ಸೃಷ್ಟಿ ಮಾಡಿರೋದು ಎದ್ದು ಕಾಣುತ್ತದೆ. ಔಟ್ ಅಂಡ್ ಔಟ್ ಆ್ಯಕ್ಷನ್ನೊಂದಿಗೆ ಬಂದಿರುವ ಟೀಸರ್ನಲ್ಲಿ ಗನ್ ಸದ್ದಿನ ಜೊತೆಗೆ ರಕ್ತಸಿಕ್ತ ಅಧ್ಯಾಯವೂ ತೆರೆದುಕೊಳ್ಳುತ್ತದೆ.
ಚಿತ್ರದಲ್ಲಿ ಉಪೇಂದ್ರ, ಸುದೀಪ್ ಸಖತ್ ಸ್ಟೈಲಿಶ್ ಹಾಗೂ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ರೀರೆಕಾರ್ಡಿಂಗ್, ಎ.ಜೆ.ಶೆಟ್ಟಿ ಛಾಯಾಗ್ರಹಣ, ಶಿವಕುಮಾರ್ ಕಲಾ ನಿರ್ದೇಶನ ಕೂಡಾ ಗಮನ ಸೆಳೆಯುತ್ತಿದೆ. ಇವೆಲ್ಲದರ ಜೊತೆ ಚಂದ್ರು ಕಾಸು-ಕನಸು ಟೀಸರ್ ಹೈಲೈಟ್ಗಳಲ್ಲೊಂದು.
ಇನ್ನು, ಟೀಸರ್ ನೋಡಿದವರು ಸಿನಿಮಾದ ಅದ್ಧೂರಿ ಮೇಕಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 15 ಮಿಲಿಯನ್ ಹಿಟ್ಸ್ ಮೂಲಕ ಟ್ರೆಂಡಿಂಗ್ನಲ್ಲಿರುವ ಟೀಸರ್ ಕುರಿತು ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಅನೇಕರು, “ಇದು ಹಾಲಿವುಡ್ ಸಿನಿಮಾ ರೇಂಜ್ಗೆ ಇದೆ’ ಎಂದರೆ, ಇನ್ನೊಂದಿಷ್ಟು ಮಂದಿ, “ಸ್ಯಾಂಡಲ್ವುಡ್ನಿಂದ ಮತ್ತೂಂದು ಬ್ಲಾಕ್ಬಸ್ಟರ್ ಬರಲಿದೆ’ ಎಂದಿದ್ದಾರೆ. ಈ ಮೂಲಕ ಮತ್ತೂಂದು ಕನ್ನಡ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಲು ತಯಾರಾಗಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.