ದಿ ಕಲರ್‌ ಆಫ್ ಟೊಮೊಟೋ; ಕೋಲಾರ ಸೊಗಡಿನ ರಗಡ್‌ ಸಿನಿಮಾ


Team Udayavani, Sep 11, 2021, 3:15 PM IST

ದಿ ಕಲರ್‌ ಆಫ್ ಟೊಮೊಟೋ; ಕೋಲಾರ ಸೊಗಡಿನ ರಗಡ್‌ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಈಗ ಒಂದಷ್ಟು ವಿಭಿನ್ನ ಟೈಟಲ್‌ನ ಚಿತ್ರಗಳು ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ಸಿನಿಮಾ ವೊಂದು ಸೇರ್ಪಡೆಯಾಗುತ್ತಿದೆ. ಅದು “ದಿ ಕಲರ್‌ ಆಫ್ ಟೊಮೊಟೋ’ ಚಿತ್ರ ಸೇರಿದೆ. ಹೀಗೊಂದು ವಿಭಿನ್ನ ಟೈಟಲ್‌ನ ಸಿನಿಮಾ ಆರಂಭವಾಗುತ್ತಿದೆ. ವಿಶೇಷವೆಂದರೆ ಇದು ಕೋಲಾರ ಮಣ್ಣಿನ ಸೊಗಡಿನ ಚಿತ್ರ. ಈ ಚಿತ್ರದ ಟೀಸರ್‌ ಅನ್ನು ಇತ್ತೀಚೆಗೆ ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ತಾಯಿ ಲೋಕೇಶ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನ1ಟು100 ಡ್ರೀಮ್ಸ್ ಮೂವೀಸ್‌ ಬ್ಯಾನರ್‌ನಡಿಯಲ್ಲಿ ಸ್ವಾತಿ
ಕುಮಾರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಇದು ಇವರ ಎರಡನೇ ಚಿತ್ರವಾಗಿದೆ. ಈಗಾಗಲೇ ಎಸ್‌. ನಾರಾಯಣ್‌ ನಿರ್ದೇಶನದಲ್ಲಿ “5ಡಿ’ ಚಿತ್ರ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ
ಮಾತನಾಡುವ ನಿರ್ಮಾಪಕಿ ಸ್ವಾತಿ, “ಚಿತ್ರದಕತೆ ಹಾಗೂ ಟೈಟಲ್‌ ಎರಡೂ ನನಗೆ ಇಷ್ಟವಾಯಿತು. ಹಾಗಾಗಿ, ನಾನು ನಿರ್ಮಿಸಲು ಮುಂದಾದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸದಭಿರುಚಿಯ ಸಿನಿಮಾ ನಿರ್ಮಿಸಲಿದ್ದೇನೆ’ ಎಂದರು.

ಈ ಚಿತ್ರಕ್ಕೆ ಕೋಟಿಗಾನಹಳ್ಳಿ ರಾಮಯ್ಯಕಥೆ ಒದಗಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಹಿಂದೊಮ್ಮೆ ನಿರ್ದೇಶಕ ತಾಯಿ ಲೋಕೇಶ್‌ ನನ್ನ ಬಳಿ ಬಂದಾಗ ನಾನುಕಥೆ ಹಾಗೂ ಟೈಟಲ್‌ ಹೇಳಿದ್ದೆ. ಈ ಚಿತ್ರದಲ್ಲಿ ಹಿಂಸೆಗೆ ಹೊಸ ವ್ಯಾಖ್ಯಾನ ನೀಡಿದ್ದೇವೆ. ಇದು ಹೊಸ ಬಗೆಯ ಚಿತ್ರವಾಗಿ ಪ್ರೇಕ್ಷಕರ ಗಮನ ಸೆಳೆಯಲಿದೆ ಎಂದರು.

ಇದನ್ನೂ ಓದಿ:RRR ಚಿತ್ರತಂಡದಿಂದ ಅಭಿಮಾನಿಗಳಿಗೆ ಮತ್ತೆ ನಿರಾಸೆ

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಬೇರೆ ತರಹದ ಸಿನಿಮಾ ಮಾಡಬೇಕೆಂದುಕನಸು ಕಂಡಿದ್ದ ನನಗೆ ಈ ಕಥೆಯನ್ನು ಕೋಟಿಗಾನಹಳ್ಳಿ ರಾಮಯ್ಯ ಅವರು ನೀಡಿದರು. ಇದುಕೋಲಾರ ಸೊಗಡಿನ ಕಥೆ. ಚಿತ್ರದಲ್ಲಿಕೇವಲ ಹಿಂಸೆಯಷ್ಟೇ ಇರೋದಿಲ್ಲ. ಪ್ರೀತಿ, ಸ್ನೇಹ ಸೇರಿದಂತೆ ಹಲವು ಅಂಶಗಳನ್ನು ಹೇಳಲಿದ್ದೇವೆ. ಮೂರುಕಥೆಗಳು ಈ ಚಿತ್ರದಲ್ಲಿ ಸಮನಾಗಿ ಸಾಗುತ್ತವೆ. ಒಂದರಲ್ಲಿ ಪ್ರತಾಪ್‌ ನಾರಾಯಣ್‌ , ಮತ್ತೊಂದು ಬಿ. ಸುರೇಶ್‌ ನಟಿಸುತ್ತಿದ್ದಾರೆ’ ಎಂದರು. ಈ ಹಿಂದೆ “ಬೆಂಕಿಪಟ್ಟಣ’ ಸಿನಿಮಾ ಮಾಡಿದ್ದ ಪ್ರತಾಪ್‌ ನಾರಾಯಣ್‌ ಈ ಸಿನಿಮಾದಲ್ಲಿ ಸಖತ್‌ ರಗಡ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಕೋಲಾರ ಗ್ರಾಮೀಣ ಪ್ರತಿಭೆಗಳು ನಟಿಸಲಿದ್ದಾರೆ. ಈ ಚಿತ್ರಕ್ಕೆ ಅರ್ಜುನ್‌ ರಾಮು ಸಂಗೀತ ಪ್ರಶಾಂತ್‌ ಸಾಗರ್‌ ಛಾಯಾಗ್ರಹಣ, ವಲ್ಲಿಕುಲ್ಯಸ್‌ ಸಂಕಲನವಿದೆ.

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.