Sandalwood; ಸೆ.6ಕ್ಕೆ ʼಅನ್ನʼ ಚಿತ್ರ ತೆರೆಗೆ
Team Udayavani, Aug 31, 2024, 4:21 PM IST
“ಅನ್ನ’ದ ಮಹತ್ವ ಸಾರುವ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಎನ್. ಎಸ್. ಇಸ್ಲಾಹುದ್ದೀನ್ ಈ ಚಿತ್ರದ ನಿರ್ದೇಶಕರು.
ಚಿತ್ರದ ಬಗ್ಗೆ ಮಾತನಾಡುವ ಅವರು, “ಇದು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಂತ ಹನೂರು ಚೆನ್ನಪ್ಪನವರ ಕಥಾಸಂಕಲನದ ಅನ್ನ ಎಂಬ ಕಥೆಯ ಬಗ್ಗೆ ತಿಳಿದುಕೊಂಡು ಒಂದಷ್ಟು ಈ ಕಥೆಯ ಮೇಲೆ ಕೆಲಸವನ್ನು ಆರಂಭಿಸಿ ಮಾಡಿದ ಸಿನಿಮಾ. 80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ. ಕೆಲವೊಂದು ಹಳ್ಳಿಗಾಡುಗಳಲ್ಲಿ ಅನ್ನ ಹಬ್ಬದ ದಿನ ಮಾತ್ರ ಮಾಡುವುದು ಅಂತ ತಿಳಿದಿತ್ತು. ಈ ಕಥೆಯು ಇದರ ಸುತ್ತವೇ ತಿರುಗಲಿದ್ದು, ಅನ್ನ ಎಷ್ಟು ಮುಖ್ಯ , ಅದರ ಮಹತ್ವ ಏನು, ಎಂಬುದರ ಸುತ್ತ ಚಿತ್ರ ಸಾಗಲಿದೆ’ ಎಂದರು. ಅಂದಹಾಗೆ, ಈ ಚಿತ್ರ ಸೆಪ್ಟೆಂಬರ್ 06ರಂದು ಬಿಡುಗಡೆ ಆಗುತ್ತಿದೆ.
ಕಥೆ ಬರೆದ ಹನೂರು ಚೆನ್ನಪ್ಪ ಮಾತನಾಡಿದರು. ಬಸವರಾಜ್ ಈ ಚಿತ್ರದ ನಿರ್ಮಾಪಕರು. ನಾಗೇಶ್ ಕಂದೇಗಾಲ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಮಾಸ್ಟರ್ ನಂದನ್, ಮಹಾದೇವ ಎಂಬ ಪಾತ್ರ ಮಾಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಸಿದ್ದು ಪ್ರಸನ್ನ , ಸಂಪತ್ ಮೈತ್ರಿಯ , ಬಾಲ ರಾಜವಾಡಿ, ರಮೇಶ್ ಸಿದ್ದಯ್ಯನಪುರ , ನಾಗಶ್ರೀ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.