ಕನ್ನಡ ಕುಳ್ಳನ ಹಳೆಯ ನೆನಪುಗಳು…


Team Udayavani, Feb 15, 2017, 11:03 AM IST

Dwarakish-1.jpg

ದ್ವಾರಕೀಶ್‌ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ “ಚೌಕ’ಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರತಂಡ ಕೂಡ ಹ್ಯಾಪಿಯಾಗಿದೆ. ಆದರೆ, ಹಿರಿಯ ನಿರ್ದೇಶಕ, ನಿರ್ಮಾಪಕ ಕಮ್‌ ನಟ ದ್ವಾರಕೀಶ್‌ ಅವರಿಗೆ ಮಾತ್ರ, ಸಿನಿಮಾ ಅವಧಿ ಜಾಸ್ತಿಯಾಯ್ತು ಎಂಬ ಸಣ್ಣ ಬೇಸರ ಇದೆ. ಅದಕ್ಕೆ ಸರಿಯಾಗಿ, ಚಿತ್ರ ಬಿಡುಗಡೆಗೂ ಮುನ್ನವೇ ಸಿನಿಮಾದ ಅವಧಿ ಜಾಸ್ತಿಯಾಗಿದೆ, ಅಷ್ಟೊಂದು ತಾಳ್ಮೆಯಿಂದ ಕುಳಿತು ಜನ ಸಿನಿಮಾ ನೋಡೋದು ಕಷ್ಟ.

ಅಂತ ಹೇಳಿದ್ದರಂತೆ. ಆದರೆ, ಅವರ ಪುತ್ರ ಯೋಗೀಶ್‌ ಬಾಲಿವುಡ್‌ನ‌ ಕೆಲವು ಸಿನಿಮಾಗಳ ಅವಧಿ ಬಗ್ಗೆ ಹೇಳಿ ವಾದ ಮಾಡಿದ್ದರಂತೆ. “ಸಿನಿಮಾವೇನೋ ಚೆನ್ನಾಗಿದೆ. ಆದರೆ, ಅವಧಿಯನ್ನು ಇನ್ನಷ್ಟು ಮಿತಗೊಳಿಸಬೇಕು ಅಂತ ಮೊದಲೇ ಹೇಳಿದ್ದೆ. ಅದು ಬಿಡುಗಡೆ ನಂತರ ಚಿತ್ರತಂಡಕ್ಕೆ ಗೊತ್ತಾಗಿದೆ. ನಾನು ಕೆಲ ತಪ್ಪುಗಳನ್ನು ಮಾಡಿ ಅದೆಷ್ಟೋ ವರ್ಷಗಳ ಕಾಲ ಸಮಸ್ಯೆ ಎದುರಿಸಬೇಕಾಗಿ ಬಂತು. ಆದರೆ, ಅಂತಹ ತಪ್ಪುಗಳನ್ನು ಮಕ್ಕಳು ಮಾಡಬಾರದು.

ಆ ಕಾಲದಲ್ಲಿ ನಾನು ಅತಿ ವೇಗವಾಗಿ ಸಿನಿಮಾಗಳನ್ನು ಮಾಡುತ್ತಿದ್ದವನು. ಅಂತಹವನಿಗೇ, ಕೆಲ ತಪ್ಪುಗಳಿಂದಾಗಿ ಸಿನಿಮಾ ಮಾಡಲಾಗದೆ ನನ್ನ ಕೈಕಾಲುಗಳು ಕಟ್ಟಿದಂತಾಗಿದ್ದವು. ಮುಂದಿನ ದಿನಗಳಲ್ಲಿ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ ಸಿನಿಮಾ ನಿರ್ಮಾಣ ಮಾಡಬೇಕು’ ಎಂಬುದು ದ್ವಾರಕೀಶ್‌ ಅವರ ಮನವಿ. “ಆ ಕಾಲದಲ್ಲೇ ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡುತ್ತಿದ್ದವನು ನಾನು. ಸಿನಿಮಾ ಮುಹೂರ್ತ ದಿನದಂದೇ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಅನೌನ್ಸ್‌ ಮಾಡುತ್ತಿದ್ದೆ.

ಮದ್ರಾಸ್‌ನಲ್ಲಿ ಅನೇಕ ನಿರ್ಮಾಪಕರು ನನಗಾಗಿಯೇ ಕಾಯುತ್ತಿದ್ದ ದಿನಗಳಿದ್ದವು. ಕಾರಣ, ಆ ದಿನಗಳಲ್ಲೇ ನಾನು ರಜನಿಕಾಂತ್‌ ಅವರ ಸಿನಿಮಾ ಮಾಡುತ್ತಿದ್ದವನು. ಸ್ಟಾರ್‌ಗಳ ಸಿನಿಮಾ ಕೈಯಲ್ಲಿರುತ್ತಿದ್ದವು. ಬೇಕಾದಷ್ಟು ಹಣವೂ ಹರಿದು ಬರುತ್ತಿತ್ತು. ಬಹುಶಃ ಅದೇ ಕಾರಣಕ್ಕೆ ಒಂದಷ್ಟು ಅಹಂಕಾರವೂ ಬಂದಿತ್ತೇನೋ, ಆ ನಂತರದ ದಿನಗಳಲ್ಲಿ ನನಗೆ ದೊಡ್ಡ ಪೆಟ್ಟು ಬಿದ್ದಿದ್ದು ನಿಜ. ಸುಮಾರು 18 ವರ್ಷ ಆ ಹೊಡೆತದಿಂದ ಹೊರಬರಲಾಗಲೇ ಇಲ್ಲ’ ಎನ್ನುತ್ತಲೇ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ ದ್ವಾರಕೀಶ್‌.

“ಆಗ ರಜನಿಕಾಂತ್‌ಗೆ ಹಿಂದಿ ಸಿನಿಮಾ ಮಾಡಲು ಹೊರಟಿದ್ದೆ. ವಿಷ್ಣುವರ್ಧನ್‌ಗೆ ಇಮೇಜ್‌ ಇಲ್ಲದಂತಹ ಪಾತ್ರ ಕೊಟ್ಟು ಮಾಡಿದ “ಇಂದಿನ ರಾಮಾಯಣ’ ದೊಡ್ಡ ಲಾಭ ತಂದುಕೊಟ್ಟಿತ್ತು. ನಿರ್ದೇಶಿಸಿದ “ನೀ ಬರೆದ ಕಾದಂಬರಿ’ ಚಿತ್ರ ಕೂಡ ಡಬ್ಬಲ್‌ ಲಾಭ ಮಾಡಿಕೊಟ್ಟಿತು. ಆಗ ನಾನು ಅತಿಯಾದ ಖುಷಿಯಿಂದ ತೇಲದಿದ್ದರೆ, ಇಂದಿಗೆ ನೂರು ಸಿನಿಮಾಗಳನ್ನು ಮಾಡುತ್ತಿದ್ದೆನೇನೋ? ಆದರೆ, ಅದು ಸಾಧ್ಯವಾಗಲಿಲ್ಲವಲ್ಲ ಎಂಬ ಸಣ್ಣ ನೋವು ನನ್ನೊಳಗಿದೆ’ ಎನ್ನುತ್ತಲೇ ಹಾಗೊಂದು ನಗೆ ಕೊಡುತ್ತಾರೆ ದ್ವಾರಕೀಶ್‌.

ದ್ವಾರಕೀಶ್‌ ಇಷ್ಟೆಲ್ಲಾ ಮಾತಾಡಿದ್ದು, “ಚೌಕ’ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ. ಪ್ರತಿ ಶುಕ್ರವಾರವೂ, ಒಬ್ಬ ಹೀರೋನ ಉದಯವಾಗುತ್ತೆ. ಅವನ ಜತೆ ಜಗಳ ಶುರುವಾದಾಗ, ಇನ್ನೊಬ್ಬ ಹೀರೋ ಹೊರಬರುತ್ತಿದ್ದ. ಅವನೊಂದಿಗೂ ಗಲಾಟೆಯಾದಾಗ, ಮಗದೊಬ್ಬ ಹೀರೋ ಬರುತ್ತಿದ್ದ. ಈಗ ಮಕ್ಕಳು ನನ್ನಂತೆ ಆ ತಪ್ಪುಗಳನ್ನು ಮಾಡಬಾರದು’ ಎಂಬ ಸಣ್ಣ ಕಿವಿಮಾತನ್ನೂ ಹೇಳಿದರು ದ್ವಾರಕೀಶ್‌. ಈ ಸಂದರ್ಭದಲ್ಲಿ ತರುಣ್‌ ಸುಧೀರ್‌, ಯೋಗೀಶ್‌ ದ್ವಾರಕೀಶ್‌, ಪ್ರೇಮ್‌, ಪ್ರಜ್ವಲ್‌ ಸೇರಿದಂತೆ ಹಲವರು ಇದ್ದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Ramesh aravind: ಇಡೀ ಸಿನಿಮಾರಂಗದ ದೂಷಣೆ ಬೇಡ

Ramesh aravind: ಇಡೀ ಸಿನಿಮಾರಂಗದ ದೂಷಣೆ ಬೇಡ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.