![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 21, 2020, 7:05 AM IST
ಕೋವಿಡ್ 19 ಎಫೆಕ್ಟ್ನಿಂದಾಗಿ ಸದ್ಯ ಕನ್ನಡ ಚಿತ್ರರಂಗ ಕೂಡಾ ಸ್ತಬ್ಧವಾಗಿದೆ. ಸಿನಿಮಾ ಕುರಿತಾದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಈ ಸಂದರ್ಭದಲ್ಲಿ ಚಿತ್ರವೊಂದು ಸದ್ದು ಮಾಡಲು ಬರುತ್ತಿದೆ. ಹಾಗಂತ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಹಾಡೊಂದು ಬಿಡುಗಡೆಯಾಗುತ್ತಿದೆ. ಅದು “ಪೊಗರು’ ಚಿತ್ರದ್ದು. ಹೌದು, ಧ್ರುವಸರ್ಜಾ ಅಭಿನಯದ “ಪೊಗರು’ ಸದ್ಯಕ್ಕೆ ನಿರೀಕ್ಷೆ ಹೆಚ್ಚಿಸಿರುವ ಚಿತ್ರ.
ಈಗಾಗಲೇ ತನ್ನ ಪೋಸ್ಟರ್ ಹಾಗು ಡೈಲಾಗ್ ಟೀಸರ್ ಮೂಲಕವೇ ದೊಡ್ಡ ನಿರೀಕ್ಷೆ ಹೆಚ್ಚಿಸಿದ್ದ “ಪೊಗರು’ ಈಗ ಮತ್ತೂಂದು ಹೊಸ ಕುತೂಹಲ ಮೂಡಿಸಿದೆ. ಹೌದು, ಬಿಡುಗಡೆಗೆ ಸಜ್ಜಾಗುತ್ತಿರುವ ಈ ಚಿತ್ರದ ಮೊದಲ ಹಾಡೊಂದು ಬಿಡುಗಡೆಗೆ ಕಾದಿದೆ. ಮಾ.27 ರಂದು “ಕರಾಬು’ ಎಂಬ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಮಾರ್ಚ್ನಲ್ಲೇ “ಪೊಗರು’ ಪ್ರೇಕ್ಷಕರ ಎದುರು ಬರಲಿದೆ ಎಂದೇ ಹೇಳಲಾಗಿತ್ತು. ಆದರೆ, ಚಿತ್ರೀಕರಣ ಕೊಂಚ ತಡವಾದ್ದರಿಂದ ಬಿಡುಗಡೆ ಕೂಡ ತಡವಾಗುತ್ತಿದೆ. ಸದ್ಯಕ್ಕೆ ಈಗ “ಕರಾಬು…’ ಎಂಬ ಹಾಡು ಬಿಡುಗಡೆ ಮಾಡಿ ಆ ನಂತರ ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
#pogaru ?????
ಜೈ ಆಂಜನೇಯ ?? pic.twitter.com/1EQaudsFiZ— Dhruva Sarja (@DhruvaSarja) March 18, 2020
ನಿರ್ದೇಶಕ ನಂದಕಿಶೋರ್ ಸದ್ಯಕ್ಕೆ ಚಿತ್ರ ಹಾಡು ಬಿಡುಗಡೆಯ ಬಿಝಿಯಲ್ಲಿದ್ದಾರೆ. ಧ್ರುವ ಸರ್ಜಾ ಅವರ ಸಿನಿಮಾಗಳು ತುಂಬ ತಡವಾಗಿ ಬಿಡುಗಡೆಯಾಗುತ್ತವೆ ಅನ್ನೋದು ಎಲ್ಲರಿಗೂ ಗೊತ್ತು. ಸ್ವತಃ ಅವರ ಅಭಿಮಾನಿಗಳೇ ಈ ಬಾರಿ “ಪೊಗರು’ ಆದಷ್ಟು ಬೇಗ ಬರಲಿದೆ ಎಂಬ ಖುಷಿಯಲ್ಲಿದ್ದರು. ಆದರೆ, ಚಿತ್ರ ಮಾತ್ರ ಇನ್ನು ಬಿಡುಗಡೆಯ ಲಕ್ಷಣ ಕಾಣುತ್ತಿಲ್ಲ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.