ಕನ್ನಡ ಕಲಿತ ಕೇರಳ ಚೆಲುವೆ!
Team Udayavani, Apr 18, 2018, 10:59 AM IST
ಕನ್ನಡದಲ್ಲಿ ನೀತು ಅಂದಾಕ್ಷಣ, ಎಲ್ಲರಿಗೂ “ಗಾಳಿಪಟ’ ಬೆಡಗಿ ನೀತು ನೆನಪಾಗದೇ ಇರದು. ಆದರೆ, ಈಗ ಕನ್ನಡಕ್ಕೆ ಮತ್ತೂಬ್ಬ ನೀತು ಎಂಬ ನಟಿಯ ಆಗಮನವಾಗಿದೆ. ಈಕೆ ಕೇರಳದ ಬೆಡಗಿ ಪೂರ್ಣ ಹೆಸರು ನೀತು ಬಾಲ. ಕನ್ನಡದಲ್ಲಿ ಈಗಾಗಲೇ “ಮೇಘ ಅಲಿಯಾಸ್ ಮ್ಯಾಗಿ’ ಎಂಬ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದಾಳೆ.
ಈಗ ಇನ್ನೂ ಹೆಸರಿಡದ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಇರುವ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಎರಡು ಚಿತ್ರದಲ್ಲಿ ನಟಿಸಿರುವ ಈ ನೀತು ಬಾಲ ಬಗ್ಗೆ ಇಷ್ಟೊಂದು ಪೀಠಿಕೆ ಬೇಕಾ? ಎಂಬ ಪ್ರಶ್ನೆ ಬರಬಹುದು. ಆದರೆ, ಕೇರಳದ ಹುಡುಗಿಯೊಬ್ಬಳು ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತಾಡುತ್ತಾಳೆ ಅಂದರೆ, ಸ್ವಲ್ಪ ಹೇಳಲೇಬೇಕು.
ಹೌದು, ನೀತು ಬಾಲ ಮೂಲತಃ ಕೇರಳದ ಹುಡುಗಿ. “ಮೇಘ ಅಲಿಯಾಸ್ ಮ್ಯಾಗಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನೀತು ಬಾಲ, ಮೊದ ಮೊದಲು ಕನ್ನಡ ಅಂದರೆ ಬೆಚ್ಚಿ ಬೀಳುತ್ತಿದ್ದಳು. ಆದರೆ, ಆ ಚಿತ್ರ ಮುಗಿಯುವ ಹೊತ್ತಿಗೆ ನಾನು ಕನ್ನಡ ಕಲಿಯಲೇಬೇಕು ಅಂತ ಛಲತೊಟ್ಟು, ಕನ್ನಡವನ್ನು ಕಲಿತೇ ಬಿಟ್ಟಳು.
ಅಷ್ಟೇ ಅಲ್ಲ, ಆ ಚಿತ್ರ ಬಿಡುಗಡೆಯೇ ಕಂಡಿಲ್ಲ. ಈಗ ನೀತು ಬಾಲ, ಕನ್ನಡ ಭಾಷೆಯನ್ನು ಕಲಿಯುವುದರ ಜತೆಗೆ ಒಂದಷ್ಟು ಬರೆಯುವುದನ್ನೂ ಕಲಿಯುತ್ತಿದ್ದಾರೆ. ಇತ್ತೀಚೆಗೆ ನಡೆದ ಹೊಸ ಚಿತ್ರದ ಮುಹೂರ್ತದಲ್ಲಿ ಸಿಕ್ಕ ನೀತು ಬಾಲ, “ನನಗೆ ಮಲಯಾಳಂ ಬಿಟ್ಟರೆ, ಇಂಗ್ಲೀಷ್ ಮತ್ತು ಹಿಂದಿ ಮಾತ್ರ ಬರುತ್ತಿತ್ತು. ಕನ್ನಡದಲ್ಲಿ ಅವಕಾಶ ಸಿಕ್ಕಾಗ, ಕನ್ನಡ ಭಾಷೆಯನ್ನೂ ಕಲಿಯಬೇಕು ಅಂತ ನಿರ್ಧರಿಸಿದೆ.
ಸೆಟ್ನಲ್ಲಿ ಕನ್ನಡ ಮಾತಾಡುವವರ ಜೊತೆ ಮಾತಾಡಲು ಮುಂದಾದೆ, ಪ್ರತಿ ಪದಕ್ಕೂ ಅರ್ಥ ಕೇಳುತ್ತಿದ್ದೆ. ಆ ಚಿತ್ರ ಮುಗಿಯುವ ಹೊತ್ತಿಗೆ ಕನ್ನಡವನ್ನು ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ರೆಡಿಯಾದೆ. ಆ ಬಳಿಕ, ಕನ್ನಡವನ್ನು ಸ್ಪಷ್ಟವಾಗಿ ಮಾತಾಡಬೇಕು ಅಂತ, ಕೆಲ ಅಕ್ಷರಗಳ ಅಭ್ಯಾಸ ಮಾಡುವ ಮೂಲಕ ಕನ್ನಡವನ್ನೂ ನನ್ನ ಶೈಲಿಯಲ್ಲೇ ಮಾತಾಡುತ್ತಿದ್ದೇನೆ.
ಇದು ನನಗೆ ಹೆಮ್ಮೆ’ ಎನ್ನುತ್ತಾಳೆ ನೀತು ಬಾಲ. ಅದೇನೆ ಇರಲಿ, ಕೆಲವು ಕನ್ನಡ ನಟಿಮಣಿಗಳೇ ಕನ್ನಡ ಬದಲು ಇಂಗ್ಲೀಷ್ ಬಳಸುತ್ತಿರುವಾಗ, ಕೇರಳದ ಹುಡುಗಿ ಒಂದೇ ವರ್ಷದಲ್ಲಿ ಕನ್ನಡ ಮಾತಾಡುವುದು ವಿಶೇಷವಲ್ಲದೆ ಮತ್ತೇನು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.