Max Teaser: I Will Finsh the.. Game.. ‘ಮ್ಯಾಕ್ಸ್‌ʼ ಟೀಸರ್‌ನಲ್ಲಿ ಮಚ್ಚು ಹಿಡಿದ ಕಿಚ್ಚ


Team Udayavani, Jul 16, 2024, 12:45 PM IST

Max Teaser: I Will Finsh the.. Game.. ‘ಮ್ಯಾಕ್ಸ್‌ʼ ಟೀಸರ್‌ನಲ್ಲಿ ಮಚ್ಚು ಹಿಡಿದ ಕಿಚ್ಚ

ಬೆಂಗಳೂರು: ಕಿಚ್ಚ ಸುದೀಪ್‌ ಅವರ ಬಹುನಿರೀಕ್ಷಿತ್‌ ʼಮ್ಯಾಕ್ಸ್‌ʼ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಆ ಮೂಲಕ ಬಹು ಸಮಯದಿಂದ ಕಾಯುತ್ತಿದ್ದ ಅಭಿಮಾನಿಗಳು ಸಖತ್‌ ಖುಷ್‌ ಆಗಿದ್ದಾರೆ.

ʼವಿಕ್ರಾಂತ್‌ ರೋಣʼ ಬಳಿಕ ಕಿಚ್ಚ ಸುದೀಪ್‌ ʼಮ್ಯಾಕ್ಸ್‌ʼ ಮೂಲಕ ಮತ್ತೆ ಬಿಗ್‌ ಸ್ಕ್ರೀನ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಅನೌನ್ಸ್‌ ಆದ ದಿನದಿಂದ ಇತ್ತೀಚೆಗೆ ಬಂದ ಅಪ್ಡೇಟ್‌ ವಿಚಾರದವರೆಗೂ ಫ್ಯಾನ್ಸ್‌ ಗಳಲ್ಲಿ ʼಮ್ಯಾಕ್ಸ್‌ʼ ಕುತೂಹಲ ಹೆಚ್ಚಾಗಿಸಿದೆ.

ಕಿಚ್ಚ ಸುದೀಪ್‌ ʼಮ್ಯಾಕ್ಸ್‌ʼ ಡಬ್ಬಿಂಗ್‌ ಮುಗಿಸಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದೀಗ ʼಮ್ಯಾಕ್ಸ್‌ʼ ಟೀಸರ್‌ ಬಿಟ್ಟು ಪ್ರೇಕ್ಷಕರನ್ನು ಸಿನಿಮಾ ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ರೌಡಿಗಳ ಅಖಾಡದಲ್ಲಿತ್ತು, ನಿಂತು ಎರಡು ಕೈಗಳಿಂದ ಮಚ್ಚು ಬೀಸಿ ಸಂಹಾರಗೈಯುವ ಮಾಸ್‌ ಲುಕ್‌ ನಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದಾರೆ.

ಖಡಕ್‌ ಡೈಲಾಗ್ಸ್‌ ಗಳನ್ನು ಹೇಳಿ ಚಿತ್ರದ ಮೇಲಿನ ಹೈಪ್‌ ಹೆಚ್ಚಿಸಿದ್ದಾರೆ. ರೌಡಿಗಳ ಮೇಲೆ ಅಟ್ಯಾಕ್‌ ಮಾಡಿದ ಬಳಿಕ ನೃತ್ಯ ಮಾಡುವ ಕಿಚ್ಚನ ಖದರ್‌ ನೋಡಿ ಪ್ಯಾನ್ಸ್‌ ಫಿದಾ ಆಗಿದ್ದಾರೆ. ಟೀಸರ್‌ ನಲ್ಲಿ ಟಪ್ಪಂಗುಚ್ಚಿ ಹಾಗೆ ಕೇಳುವ ಅಜನೀಶ್‌ ಅವರ ಮ್ಯೂಸಿಕ್‌ ಕಿಕ್‌ ಕೊಡುತ್ತದೆ. ಶೀಘ್ರದಲ್ಲಿ ತೆರೆ ಮೇಲೆ ಬರಲಿದೆ ಎಂದು ಟೀಸರ್‌ ನಲ್ಲಿ ಹೇಳಲಾಗಿದೆ.

ಕಾಲಿವುಡ್‌ ನ ವಿಜಯ್ ಕಾರ್ತಿಕೇಯನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿ ಕ್ರಿಯೇಷನ್ಸ್ ಅಡಿಯಲ್ಲಿ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ಥಾನು ಅವರು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಅಜನೀಶ್‌ ಅವರ ಸಂಗೀತ ಚಿತ್ರಕ್ಕಿದೆ.

ಚಿತ್ರದಲ್ಲಿ ಕಿಚ್ಚ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಆಗಿ ಸುದೀಪ್ ಬಣ್ಣ ಹಚ್ಚಿದ್ದಾರೆ‌.

ಕಿಚ್ಚನ ಜೊತೆ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ ಭಟ್ ಮುಂತಾದ ಕಲಾವಿದರು ನಟಿಸಿದ್ದಾರೆ.

ಅಂದಹಾಗೆ, “ಮ್ಯಾಕ್ಸ್‌ʼ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ಆಗಸ್ಟ್‌ ಅಥವಾ ಸೆಪ್ಪೆಂಬರ್ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

1-census

Report; ಸೆಪ್ಟಂಬರ್‌ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?

Mysuru

Mysuru Dasara: ಅರಮನೆ ತಲುಪಿದ ಗಜಪಡೆ : ಭವ್ಯ ಸ್ವಾಗತ

CM-Siddu

Misappropriation Fund: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

Malpe ಮುಂದುವರಿದ ಗಾಳಿ; ಕಡಲಿಗೆ ಇಳಿಯದ ಬೋಟುಗಳು

Malpe ಮುಂದುವರಿದ ಗಾಳಿ; ಕಡಲಿಗೆ ಇಳಿಯದ ಬೋಟುಗಳು

Joshi-vijyebdra

Secret meeting: ಕೇಂದ್ರ ಸಚಿವ ಪ್ರಹ್ಲಾದ ಜೋಶಿ- ವಿಜಯೇಂದ್ರ ಗೌಪ್ಯ ಸಭೆ

Udupi ಗೀತಾರ್ಥ ಚಿಂತನೆ-15; ಭಗವದಿಚ್ಛೆಯೇ ಧರ್ಮಮೂಲ

Udupi ಗೀತಾರ್ಥ ಚಿಂತನೆ-15; ಭಗವದಿಚ್ಛೆಯೇ ಧರ್ಮಮೂಲ

Udupi ಶ್ರೀ ಕೃಷ್ಣಮಠದಲ್ಲಿ ವೈಭವದ ಲಡ್ಡುತ್ಸವ

Udupi ಶ್ರೀ ಕೃಷ್ಣಮಠದಲ್ಲಿ ವೈಭವದ ಲಡ್ಡುತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Krishna Sarthak; ಭೀಮ ಗೆಲುವಲ್ಲಿ ಸಾರ್ಥಕ ಸಂಭ್ರಮ: ʼಕೃಷ್ಣʼನ್‌ ಸಕ್ಸಸ್‌ ಸ್ಟೋರಿ

Krishna Sarthak; ಭೀಮ ಗೆಲುವಲ್ಲಿ ಸಾರ್ಥಕ ಸಂಭ್ರಮ: ʼಕೃಷ್ಣʼನ್‌ ಸಕ್ಸಸ್‌ ಸ್ಟೋರಿ

Rakshit Shetty

Rakshit Shetty; ದೊಡ್ಡ ಕನಸಿಗೆ ಸಮಯ ಬೇಕಾಗುತ್ತದೆ ರಕ್ಷಿತ್‌ ಶೆಟ್ಟಿ ನೇರ ಮಾತು

ಚಂದನವನದ ಚೆಂದದ ಶೀರ್ಷಿಕೆ; ಅಚ್ಚ ಕನ್ನಡದ ಸ್ವಚ್ಛ ಪದಗಳು

Kannada Movies: ಚಂದನವನದ ಚೆಂದದ ಶೀರ್ಷಿಕೆ; ಅಚ್ಚ ಕನ್ನಡದ ಸ್ವಚ್ಛ ಪದಗಳು

powder

Powder; ದಿಗಂತ್‌ ನಟನೆಯ ಪೌಡರ್‌ ಇಂದು ತೆರೆಗೆ

Atikaya Movie; ಹೊಸ ಲುಕ್‌ ನಲ್ಲಿ ನಿರೂಪ್‌ ಭಂಡಾರಿ

Atikaya Movie; ಹೊಸ ಲುಕ್‌ ನಲ್ಲಿ ನಿರೂಪ್‌ ಭಂಡಾರಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-census

Report; ಸೆಪ್ಟಂಬರ್‌ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?

BJP 2

Kashmir Elections:ಬಿಜೆಪಿ ಏಕಾಂಗಿ ಸ್ಪರ್ಧೆ, ಶೀಘ್ರ ಅಭ್ಯರ್ಥಿಗಳ ಪಟ್ಟಿ

air india

Training ಇಲ್ಲದ ಪೈಲಟ್‌ ಬಳಕೆ: ಏರ್‌ ಇಂಡಿಯಾಕ್ಕೆ 90 ಲಕ್ಷ ರೂ. ದಂಡ!

1-gb

Norway ಕಾಯ್ದೆ ಸಡಿಲ: 18ನೇ ವಾರಕ್ಕೂ ಗರ್ಭಪಾತಕ್ಕೆ ಸಮ್ಮತಿ

Mysuru

Mysuru Dasara: ಅರಮನೆ ತಲುಪಿದ ಗಜಪಡೆ : ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.