Kiccha Sudeep: ಸೋಲುವುದೇ ಗೆಲ್ಲುವುದಕ್ಕೋಸ್ಕರ.. ಹೊಸಬರಿಗೆ ಕಿಚ್ಚನ ಕಿವಿಮಾತು
Team Udayavani, Aug 20, 2024, 9:10 AM IST
ಸೋಲುವುದೇ ಗೆಲ್ಲುವುದಕ್ಕೋಸ್ಕರ.. – ಹೀಗೆ ಚಿತ್ರರಂಗಕ್ಕೆ ಬರುವ ಹೊಸಬರಿಗೆ ಕಿವಿಮಾತು ಹೇಳಿದ್ದು ನಟ ಕಿಚ್ಚ ಸುದೀಪ್(Kichcha Sudeep). ಇತ್ತೀಚೆಗೆ ನಡೆದ “ಪೆಪೆ'(Pepe Movie) ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಇತಿಹಾಸವಿದೆ. ಅದು ದೃಢವಾಗಿ ನಿಂತಿದೆ.
ಇಷ್ಟು ವರ್ಷದ ಇತಿಹಾಸದಲ್ಲಿ ಗೆದ್ದಿದ್ದಕ್ಕಿಂತ ಸಿನಿಮಾಗಳು ಸೋತಿದ್ದೇ ಹೆಚ್ಚು. ಹಾಗಂತ ಚಿತ್ರರಂಗ ಏನೂ ಆಗಿಲ್ಲ. ಸೋಲುವುದೇ ಗೆಲ್ಲೋದಕ್ಕೋಸ್ಕರ. ಕನ್ನಡ ಜನ ಯಾವತ್ತೂ ಕನ್ನಡ ಚಿತ್ರರಂಗವನ್ನ ಕೈ ಬಿಟ್ಟಿಲ್ಲ. ಹಾಗಾಗಿ, ಪದೇ ಪದೇ ಕನ್ನಡ ಸಿನಿಮಾಗಳನ್ನು ಗೆಲ್ಲಿಸಿ ಎಂದು ಅವರಲ್ಲಿ ಕೇಳುವ ಅಗತ್ಯವಿಲ್ಲ. ಒಳ್ಳೆಯ ಸಿನಿಮಾಗಳನ್ನು ಗೆಲ್ಲಿಸುತ್ತಾರೆ’ ಎಂದು ಚಿತ್ರರಂಗವನ್ನು ಆಲದ ಮರಕ್ಕೆ ಹೋಲಿಸಿದರು.
ಸದ್ಯ ಸುದೀಪ್ ನಟನೆಯ “ಮ್ಯಾಕ್ಸ್'(Max Movie) ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಬಿಡುಗಡೆಯ ಕುರಿತು ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ದಿಂದ ಸಿನಿಮಾದ ಅಪ್ ಡೇಟ್ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.