Sandalwood: ರಾಜ್ ಶೆಟ್ಟಿ ʼರೂಪಾಂತರʼ ಮೆಚ್ಚಿದ ಸ್ಟಾರ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್
Team Udayavani, Jul 25, 2024, 12:56 PM IST
ಬೆಂಗಳೂರು: ರಾಜ್ ಬಿ ಶೆಟ್ಟಿ (Raj b Shetty) ʼಒಂದು ಮೊಟ್ಟೆಯ ಕಥೆʼ ತಂಡದ ಜೊತೆ ಸೇರಿಕೊಂಡು ಮಾಡಿರುವ “ರೂಪಾಂತರ” (Roopantara Movie) ತನ್ನ ಟ್ರೇಲರ್ನಿಂದ ಸಿನಿಮಂದಿಯ ಗಮನ ಸೆಳೆದಿದೆ.
ಇದೇ ವಾರ (ಜು.26ರಂದು) ಸಿನಿಮಾ ಥಿಯೇಟರ್ನಲ್ಲಿ ತೆರೆ ಕಾಣಲಿದೆ. ಪ್ರೀ ರಿಲೀಸ್ ಆಗಿ ತೆರೆಕಂಡಿರುವ “ರೂಪಾಂತರʼಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾದ ಭಿನ್ನವಾದ ಕಥೆ ಹಾಗೂ ಪಾತ್ರಗಳನ್ನು ಹಣೆದಿರುವ ರೀತಿಗೆ ನೋಡುಗರು ಫಿದಾ ಆಗಿದ್ದಾರೆ.
ಕಾಲಿವುಡ್ನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ (Karthik Subbaraj) “ರೂಪಾಂತರ” ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರುವ ವಿಡಿಯೋವನ್ನು ನಟ ರಾಜ್ ಬಿ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ.
“ಇತ್ತೀಚೆಗೆ ನಾನು “ರೂಪಾಂತರ” ಎನ್ನುವ ಸಿನಿಮಾವನ್ನು ನನ್ನ ಸ್ನೇಹಿತನ ಜೊತೆ ನೋಡಿದೆ. ನಾನು ಸಿನಿಮಾದ ಮೊದಲ ವರ್ಷನ್ ನ್ನು ನೋಡಿದೆ. ನಿಜವಾಗಿ ಹೇಳಬೇಕೆಂದರೆ ಸಿನಿಮಾ ನೋಡಿ ನನಗೆ ರೋಮಾಂಚನವಾಯಿತು. ಭಿನ್ನ ಜನರ ನಾಲ್ಕು ಕಥೆಗಳ ಹೈಪರ್ ಲಿಂಕ್ ಸಿನಿಮಾವಿದು. ಆದರೆ ಸಿನಿಮಾದ ಕಥೆ ಹಾಗೂ ಅದನ್ನು ಬರೆದ ರೀತಿ, ಕಲಾವಿದರ ಅಭಿನಯ ನನ್ನನು ಸಿನಿಮಾದ ಮೊದಲ ಫ್ರೇಮ್ನಿಂದಲೇ ಕೂತು ನೋಡುವಂತೆ ಮಾಡಿತು. ನಮಗೆಲ್ಲರಿಗೂ ಗೊತ್ತು ರಾಜ್ ಬಿ ಶೆಟ್ಟಿ ಒಬ್ಬ ಅದ್ಭುತ ಕಲಾವಿದ. ಈ ಸಿನಿಮಾದಲ್ಲಿ ಅವರು ಮಾತ್ರವಲ್ಲದೆ, ಉಳಿದ ಪಾತ್ರಗಳ ಅಭಿನಯ ಕೂಡ ಅಷ್ಟೇ ಚೆನ್ನಾಗಿದೆ. ನನಗೆ ಸಿನಿಮಾ ತುಂಬಾ ಇಷ್ಟವಾಯಿತು. ನಿರ್ದೇಶನ, ಕಥೆ, ಬರವಣಿಗೆ ಎಲ್ಲಾ ಅಂಶವೂ ಇಷ್ಟವಾಯಿತು. ಥಿಯೇಟರ್ ನಲ್ಲಿ ಸಿನಿಮಾ ತುಂಬಾ ಚೆನ್ನಾಗಿ ಓಡುತ್ತದೆನ್ನುವ ಭರವಸೆಯಿದೆ. ಎಲ್ಲರೂ ಸಿನಿಮಾವನ್ನು ನೋಡಿ” ಎಂದು ಅವರು ಹೇಳಿದ್ದಾರೆ.
View this post on Instagram
ಮಿಥಿಲೇಶ್ ಎಡವಲತ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸುಹಾನ್ ಪ್ರಸಾದ್ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ.
ಅಂಜನ್ ಭಾರದ್ವಾಜ್ ,ಲೇಖಾ ನಾಯ್ಡು , ಹನುಮಕ್ಕ, ಸೋಮಶೇಖರ್ ಬೋಲೇಗಾಂವ್,ಭರತ್ ಜಿ.ಬಿ. ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.