![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Sep 25, 2019, 3:03 AM IST
ನಿರ್ದೇಶಕ ಸುನಿ ಈಗ “ಅವತಾರ್ ಪುರುಷ’ ಸಿನಿಮಾದಲ್ಲಿ ಬಿಝಿ ಆಗಿರುವುದು ಗೊತ್ತೇ ಇದೆ. ಸದ್ಯಕ್ಕೆ ಆ ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸುವ ಉತ್ಸಾಹದಲ್ಲಿದ್ದಾರೆ ಅವರು. ಹಾಗಾದರೆ, ಸುನಿ ನಿರ್ದೇಶನದ ಮುಂದಿನ ಸಿನಿಮಾ ಯಾವುದು? ಇದಕ್ಕೆ ಸದ್ಯ ಅವರ ಬಳಿ ಉತ್ತರವಿಲ್ಲ. ಆದರೆ, ಅವರಿಗೆ ಶಿವರಾಜಕುಮಾರ್ ಅವರ ಸಿನಿಮಾ ನಿರ್ದೇಶನ ಮಾಡಬೇಕೆಂಬ ಬಯಕೆಯಂತೂ ಬತ್ತಿಲ್ಲ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಸುನಿ ಶಿವರಾಜಕುಮಾರ್ ಅವರ ಚಿತ್ರ ಮಾಡಬೇಕಿತ್ತು. ಆದರೆ, ಅದು ಕೆಲ ಕಾರಣಗಳಿಂದ ಸಾಧ್ಯವಾಗಲಿಲ್ಲ. ಸುನಿ ಈ ಹಿಂದೆ ಶಿವರಾಜಕುಮಾರ್ ಅವರಿಗೆ “ಮನಮೋಹಕ’ ಎಂಬ ಚಿತ್ರ ಮಾಡುವುದಾಗಿ ಘೋಷಣೆ ಮಾಡಿದ್ದು ಎಲ್ಲರಿಗೂ ನೆನಪಿರಬಹುದು. ಆ ಚಿತ್ರಕ್ಕಾಗಿ ಚೆಂದದ ಫೋಟೋ ಶೂಟ್ ಕೂಡ ಮಾಡಿದ್ದರು.
ಶಿವರಾಜಕುಮಾರ್ ಆ ಚಿತ್ರದ ಕಥೆ ಕೇಳಿ, ಸುನಿ ಅವರಿಗೆ ಡೇಟ್ ಕೂಡ ನೀಡಿದ್ದರು. ಆದರೆ, ಸಿನಿಮಾ ಮಾತ್ರ ಶುರುವಾಗಲಿಲ್ಲ. ಅದಕ್ಕೆ ಕಾರಣ, ಬಿಗ್ ಬಜೆಟ್. ಹೌದು, ನಿರ್ದೇಶಕ ಸುನಿ ಹೇಳುವಂತೆ, “ಮನಮೋಹಕ’ ಚಿತ್ರ ಮಾಡುವ ಆಸೆ ಇನ್ನೂ ಇದೆ. ಯಾವಾಗ ಆ ಚಿತ್ರ ಮಾಡ್ತೀನೋ ಎಂಬ ತುಡಿತವಿದೆ. ಶಿವರಾಜಕುಮಾರ್ ಅವರು ಸಿಕ್ಕಾಗೆಲ್ಲಾ, “ಆ ಸಿನಿಮಾ ಯಾವಾಗ ಶುರು ಮಾಡ್ತೀಯಾ’ ಅಂತ ಕೇಳುತ್ತಾರೆ. ಅಷ್ಟರ ಮಟ್ಟಿಗೆ ಆ ಕಥೆ ಶಿವಣ್ಣ ಅವರಿಗೆ ಇಷ್ಟವಾಗಿತ್ತು.
ಆದರೆ, ಆ ಚಿತ್ರಕ್ಕೆ ಏನಿಲ್ಲವೆಂದರೂ ಹದಿನೇಳು ಕೋಟಿ ಬಜೆಟ್ ಬೇಕು. ಹಾಗಾಗಿಯೇ ಅದು ಸದ್ಯಕ್ಕೆ ಸೆಟ್ಟೇರಿಲ್ಲ. ಆದರೂ, ಅದನ್ನು ಮಾಡ್ತೀನಿ ಎಂಬ ಭರವಸೆಯಂತೂ ನನಗಿದೆ. ಈಗ “ಅವತಾರ್ ಪುರುಷ’ ನಡೆಯುತ್ತಿದೆ. ಆ ಬಳಿಕ “ಮನಮೋಹಕ’ ಸಿನಿಮಾ ಮಾಡೋಕೆ ನಿರ್ಮಾಪಕರು ಮುಂದೆ ಬಂದರೆ, ಖಂಡಿತ ಮಾಡ್ತೀನಿ. ಒಂದು ವೇಳೆ ಇಲ್ಲವಾದರೂ, ಅದನ್ನು ಏನಾದರೂ ಮಾಡಿ, ಶುರುಮಾಡುವ ಬಗ್ಗೆ ಯೋಚಿಸುತ್ತೇನೆ’ ಎನ್ನುತ್ತಾರೆ ಸುನಿ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.