![Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್](https://www.udayavani.com/wp-content/uploads/2024/07/Bombay-1-415x234.jpg)
Marigold Movie: ಮಾರಿಗೋಲ್ಡ್ನಲ್ಲಿ”ಸಿಹಿ ಜೇನ ಮಳೆ…’
Team Udayavani, Mar 20, 2024, 10:18 AM IST
![Marigold Movie: ಮಾರಿಗೋಲ್ಡ್ನಲ್ಲಿ”ಸಿಹಿ ಜೇನ ಮಳೆ…’](https://www.udayavani.com/wp-content/uploads/2024/03/6-15-620x372.jpg)
ಸಂಗೀತಾ ಶೃಂಗೇರಿ ಹಾಗೂ ದಿಗಂತ್ ಮುಖ್ಯಭೂಮಿಕೆಯಲ್ಲಿರುವ “ಮಾರಿಗೋಲ್ಡ್’ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. “ಸಿಹಿ ಜೇನ ಮಳೆ…’ ಎಂಬ ಹಾಡು ರಿಲೀಸ್ ಆಗಿದೆ. ಯೋಗರಾಜ್ ಭಟ್ ಬರೆದಿರುವ ಈ ಗೀತೆಯನ್ನು ಅನುರಾಧ ಭಟ್ ಹಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ದಿಗಂತ್ ಹಾಗು ಸಂಗೀತಾ ಶೃಂಗೇರಿ ಕಾಣಿಸಿಕೊಂಡಿರುವ ಈ ಹಾಡಿಗೆ ಸಿನಿ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದುವರೆಗೂ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಂಡಿದ್ದ ನಟ ದಿಗಂತ್, ಈ ಚಿತ್ರದ ಮೂಲಕ ಮಾಸ್ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಮತ್ತೂಂದೆಡೆ ಸಂಗೀತಾ ಶೃಂಗೇರಿ ಬಿಗ್ಬಾಸ್ ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ.
ಈ ಕುರಿತು ಮಾತನಾಡುವ ನಿರ್ಮಾಪಕ ರಘುವರ್ಧನ್, “ಮಾರಿಗೋಲ್ಡ್ ಆ್ಯಕ್ಷನ್ ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದೆ. ಚಿನ್ನದ ಬಿಸ್ಕತ್ತು ಮಾರಲು ಹೊರಟ ನಾಲ್ವರು ಹುಡುಗರ ಕಥೆ ಆಧರಿಸಿದೆ. ಚಿತ್ರವನ್ನು ಬೆಂಗಳೂರು, ಸಕಲೇಶಪುರ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ’ ಎನ್ನುತ್ತಾರೆ.
ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಲಿರಿಕಲ್ ಹಾಡು ಬಿಡುಗಡೆ ಮಾಡಲಾಗಿದೆ. ಕ್ರೈಮ್ ಥ್ರಿಲ್ಲರ್ ಜಾನರ್ನ ಸಿನಿಮಾ ಇದಾಗಿದ್ದು, ದಿಗಂತ್ ಬಾಡಿ ಲಾಂಗ್ವೇಜ್, ಸಂಪೂರ್ಣ ಬದಲಾಗಿದೆಯಂತೆ. ಚಿತ್ರದಲ್ಲಿ ಸಂಗೀತ ಪಾತ್ರ ಹೊಸತನದಿಂದ ಕೂಡಿದ್ದು, ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಜೀವನ ಕಟ್ಟಿಕೊಳ್ಳಲು ಕನಸು ಕಂಡ ನಾಲ್ವರು ಹುಡುಗರು ಸಮಾಜದಲ್ಲಿ ಹಣ ಸಂಪಾದಿಸಲು ಮುಂದಾಗುತ್ತಾರೆ, ಇಂತಹ ಸಮಯದಲ್ಲಿ ಒಂದು ಕಡೆ ಸಿಕ್ಕಿ ಹಾಕಿಕೊಳ್ತಾರೆ.ಅದರಿಂದ ಹೊರ ಬರುತ್ತಾರಾ ಎಂಬುದು ಸಿನಿಮಾದ ಕುತೂಹಲದ ಘಟ್ಟ.
ಚಿತ್ರಕ್ಕೆ ರಾಘವೇಂದ್ರ ಎಂ. ನಾಯ್ಕ ನಿರ್ದೇಶನವಿದೆ. ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ವಜ್ರಾಂಗ್ ಶೆಟ್ಟಿ, ಬಲರಾಜವಾಡಿ, ಮಹಾಂತೇಶ್, ಸಂದೀಪ್ ಮಲಾನಿ, ಭಜರಂಗ ಶೆಟ್ಟಿ, ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ವೀರ್ ಸಮರ್ಥ್ ಸಂಗೀತವಿದೆ.
ಟಾಪ್ ನ್ಯೂಸ್
![Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್](https://www.udayavani.com/wp-content/uploads/2024/07/Bombay-1-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್](https://www.udayavani.com/wp-content/uploads/2024/07/Bombay-1-150x84.jpg)
Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್
![thief](https://www.udayavani.com/wp-content/uploads/2024/07/thief-150x84.jpg)
Sorry… ತಿಂಗಳೊಳಗೆ ಕದ್ದ ವಸ್ತು ಹಿಂತಿರುಗಿಸುವೆ, ಪತ್ರ ಬರೆದು ಮನೆಗೆ ಕನ್ನ ಹಾಕಿದ ಕಳ್ಳ
![Bengaluru: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ 6ರ ಹೆಣ್ಣು ಮಗು ಮೃತದೇಹ ಪತ್ತೆ!](https://www.udayavani.com/wp-content/uploads/2024/07/3-4-150x90.jpg)
Bengaluru: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ 6ರ ಹೆಣ್ಣು ಮಗು ಮೃತದೇಹ ಪತ್ತೆ!
![Bengaluru: ನಡುರಸ್ತೆಯಲ್ಲೇ ಖಾಸಗಿ ಉದ್ಯೋಗಿ ಹತ್ಯೆ](https://www.udayavani.com/wp-content/uploads/2024/07/2-3-150x90.jpg)
Bengaluru: ನಡುರಸ್ತೆಯಲ್ಲೇ ಖಾಸಗಿ ಉದ್ಯೋಗಿ ಹತ್ಯೆ
![10-honanvar](https://www.udayavani.com/wp-content/uploads/2024/07/10-honanvar-150x90.jpg)
ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.