![1-PTI](https://www.udayavani.com/wp-content/uploads/2024/07/1-PTI-415x252.jpg)
ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್
Team Udayavani, Jul 1, 2024, 12:57 PM IST
![ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್](https://www.udayavani.com/wp-content/uploads/2024/07/9-620x372.jpg)
ಬೆಂಗಳೂರು: ರೇಣುಕಾಸ್ವಾಮಿ(Renuka Swamy) ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್(Actor Darshan) ಅವರನ್ನು ಕುಟುಂಬಸ್ಥರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.
ಇತ್ತೀಚೆಗಷ್ಟೇ ಜೈಲಿನಲ್ಲಿ ನಟ ದರ್ಶನ್ ಅವರನ್ನು ರಕ್ಷಿತಾ, ಪ್ರೇಮ್ ದಂಪತಿ ಭೇಟಿ ಮಾಡಿದ್ದರು. ಈ ವೇಳೆ ಇಂತಹ ಕೃತ್ಯ ನಡೆಯಬಾರದಿತ್ತು ಎಂದು ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದರು.
ಪ್ರಕರಣದಲ್ಲಿ ಪವಿತ್ರಾ ಗೌಡ (Pavithra Gowda) ಎ1 ಆಗಿದ್ದು ದರ್ಶನ್ ಎ2 ಆಗಿದ್ದಾರೆ. ಸದ್ಯ ದರ್ಶನ್ ಅವರು ಶೀಘ್ರದಲ್ಲಿ ಜೈಲಿನಿಂದ ಹೊರಬರಲಿ ಎಂದು ಒಂದು ವರ್ಗ ಹೇಳುತ್ತಿದ್ದರೆ, ಇನ್ನೊಂದೆಡೆ ತಪ್ಪುವೆಸಗಿದವರಿಗೆ ಶಿಕ್ಷೆ ಆಗಲೇಬೇಕೆಂದು ಕೆಲವೊಂದಿಷ್ಟು ಮಂದಿ ಆಗ್ರಹಿಸಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಇತ್ತೀಚೆಗೆ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಇದಾದ ಬಳಿಕ ಪೋಸ್ಟ್ ವೊಂದನ್ನು ಹಂಚಿಕೊಂಡು, ನ್ಯಾಯಾಂಗದ ಮೇಲೆ ನಂಬಿಕೆಯಿದೆ. ನ್ಯಾಯ ಸಿಗುವ ಭರವಸೆಯಿದೆ. ಅಭಿಮಾನಿಗಳು ತಾಳ್ಮೆಯಿಂದಾರಬೇಕೆಂದು ಪೋಸ್ಟ್ ವೊಂದನ್ನು ಹಂಚಿಕೊಂಡು ಹೇಳಿದ್ದರು.
ಕಳೆದ ಕೆಲ ಸಮಯದಿಂದ ದರ್ಶನ್ ಅವರಿಂದ ದೂರವಾಗಿ ಉಳಿದಿರುವ ಸಹೋದರ ದಿನಕರ್ ಹಾಗೂ ತಾಯಿ ಮೀನಾ ಅವರು ಸೋಮವಾರ(ಜು.1 ರಂದು) ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರಿಗೆ ಧೈರ್ಯ ತುಂಬಿದ್ದಾರೆ.
ತಾಯಿ ಹಾಗೂ ಸಹೋದರನನ್ನು ನೋಡಿ ದರ್ಶನ್ ಭಾವುಕರಾಗಿದ್ದಾರೆ. ಇತ್ತ ಮಗನ ಸ್ಥಿತಿಯನ್ನು ನೋಡಿ ಮೀನಾ ಅವರು ಕೂಡ ಭಾವುಕರಾಗಿ ಅಪ್ಪಿಕೊಂಡು ಧೈರ್ಯವಾಗಿರುವಂತೆ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ. ಸಹೋದರನ ಜೊತೆ ದರ್ಶನ್ ಕಾನೂನು ಹಾದಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್ ಮಾಡಿದ್ದಕ್ಕಾಗಿ ಜೂ.8 ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವನನ್ನು ಅಪಹರಿಸಿ ಶೆಡ್ ವೊಂದರಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ಕೊಲೆಗೈದು ಮೋರಿಗೆ ಎಸೆಯಲಾಗಿತ್ತು. ಈ ಸಂಬಂಧ ಮೊದಲಿಗೆ 18 ಮಂದಿ ಆರೋಪಿಯನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆದ ಬಳಿಕ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ ಹಲವು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
![1-PTI](https://www.udayavani.com/wp-content/uploads/2024/07/1-PTI-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್ ಲಾಂಚ್](https://www.udayavani.com/wp-content/uploads/2024/07/9-2-150x90.jpg)
Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್ ಲಾಂಚ್
![18](https://www.udayavani.com/wp-content/uploads/2024/07/18-150x90.jpg)
Actress Akshita Bopaiah: ತಮಿಳಿನತ್ತ ನವನಟಿ ಅಕ್ಷಿತಾ ಸಿನಿಯಾನ
![Kaadaadi: ಆದಿತ್ಯ ಕಾದಾಡಿ ಚಿತ್ರ ತೆರೆಗೆ ಸಿದ್ಧ](https://www.udayavani.com/wp-content/uploads/2024/07/17-150x90.jpg)
Kaadaadi: ಆದಿತ್ಯ ಕಾದಾಡಿ ಚಿತ್ರ ತೆರೆಗೆ ಸಿದ್ಧ
![ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ – ಭುವನ್ ದಂಪತಿ: ಕೊಡವ ಶೈಲಿಯಲ್ಲಿ ಫೋಟೋಶೂಟ್](https://www.udayavani.com/wp-content/uploads/2024/07/15-150x90.jpg)
ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ – ಭುವನ್ ದಂಪತಿ: ಕೊಡವ ಶೈಲಿಯಲ್ಲಿ ಫೋಟೋಶೂಟ್
![Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್.. ಆ.15ಕ್ಕೆ ರಿಲೀಸ್ ಆಗೋದು ಪಕ್ಕಾ?](https://www.udayavani.com/wp-content/uploads/2024/07/14-150x90.jpg)
Kiccha Sudeep: ಶೀಘ್ರದಲ್ಲಿ ʼMaxʼ ಮೆಗಾ ಅಪ್ಡೇಟ್.. ಆ.15ಕ್ಕೆ ರಿಲೀಸ್ ಆಗೋದು ಪಕ್ಕಾ?
MUST WATCH
ಹೊಸ ಸೇರ್ಪಡೆ
![1-PTI](https://www.udayavani.com/wp-content/uploads/2024/07/1-PTI-150x91.jpg)
Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್
![1-asddasdsa](https://www.udayavani.com/wp-content/uploads/2024/07/1-asddasdsa-1-150x100.jpg)
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
![Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000](https://www.udayavani.com/wp-content/uploads/2024/07/Bombay-150x89.jpg)
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000
![Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್ ಲಾಂಚ್](https://www.udayavani.com/wp-content/uploads/2024/07/9-2-150x90.jpg)
Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್ ಲಾಂಚ್
![Queen’s Premier League: ಕ್ವೀನ್ಸ್ ಪ್ರೀಮಿಯರ್ ಲೀಗ್ ಜೆರ್ಸಿ ಬಿಡುಗಡೆ](https://www.udayavani.com/wp-content/uploads/2024/07/8-2-150x90.jpg)
Queen’s Premier League: ಕ್ವೀನ್ಸ್ ಪ್ರೀಮಿಯರ್ ಲೀಗ್ ಜೆರ್ಸಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.