16 ವರ್ಷದ ಬಳಿಕ ಒಂದಾದ ʼಮುಂಗಾರು ಮಳೆʼ ನಿರ್ದೇಶಕ- ನಿರ್ಮಾಪಕ: ಮತ್ತೆ ಬರೆಯುತ್ತಾರಾ ದಾಖಲೆ?
Team Udayavani, Jun 9, 2024, 6:52 PM IST
ಬೆಂಗಳೂರು: ʼಮುಂಗಾರು ಮಳೆʼ ನಟ ಗಣೇಶ್ ಅವರಿಗೆ ʼಗೋಲ್ಡನ್ ಸ್ಟಾರ್ʼ ಎನ್ನುವ ನೇಮ್ – ಫೇಮ್ ತಂದುಕೊಟ್ಟ ಸಿನಿಮಾವೆಂದರೆ ತಪ್ಪಾಗದು. ಈ ಸಿನಿಮಾದಿಂದ ಗಣೇಶ್ ಸ್ಯಾಂಡಲ್ ವುಡ್ ಪ್ರೇಕ್ಷಕರ ಮನದಲ್ಲಿ ʼಗೋಲ್ಡನ್ ಸ್ಟಾರ್ʼ ಆಗಿ ನೆಲೆಸಿದರು.
2006 ರಲ್ಲಿ ತೆರೆಕಂಡ ʼಮುಂಗಾರು ಮಳೆʼ ಇಂದಿಗೂ ಚಂದನವನದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು. ಸಿನಿಮಾದ ಹಾಡು, ಕಥೆ, ಗಣೇಶ್, ಪೂಜಾ ಗಾಂಧಿಯ ಅಭಿನಯ, ಸಂಭಾಷಣೆ ಹೀಗೆ ಎಲ್ಲಾ ವಿಭಾಗದಲ್ಲೂ ʼಮುಂಗಾರು ಮಳೆʼ ಹಿಟ್ ಆಗಿತ್ತು.
100ಕ್ಕೂ ಹೆಚ್ಚಿನ ದಿನಗಳ ಕಾಲ ಕೆಲ ಥಿಯೇಟರ್ ನಲ್ಲಿ ಸಿನಿಮಾ ಓಡಿತ್ತು. ಯುವಜನರ ಮನದಲ್ಲಂತೂ ಚಿತ್ರದ ಹಾಡುಗಳು ಕೆಲ ವರ್ಷಗಳವರೆಗೆ ಅಚ್ಚಾಗಿ ಉಳಿದಿತ್ತು. ಇದೀಗ ʼಮುಂಗಾರು ಮಳೆʼ ನಿರ್ದೇಶಕ ಹಾಗೂ ನಿರ್ಮಾಪಕ ಮತ್ತೆ ಒಂದಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.
ʼಮುಂಗಾರು ಮಳೆʼ ಸಿನಿಮಾಕ್ಕೆ ಬಂಡವಾಳ ಹಾಕಿದ್ದ ಇ. ಕೃಷ್ಣಪ್ಪ ಹಾಗೂ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ ಹೊಸ ಸಿನಿಮಾವನ್ನು ಮಾಡಲಿದ್ದಾರೆ ಎಂದು ʼಸಿನಿಮಾ ಎಕ್ಸ್ ಪ್ರೆಸ್ʼ ವರದಿ ತಿಳಿಸಿದೆ.
ಹೊಸ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ಹೊಸ ಮುಖಗಳು ಸಿನಿಮಾದಲ್ಲಿರಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ವರದಿ ತಿಳಿಸಿದೆ.
ʼಮುಂಗಾರು ಮಳೆʼ ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದಿತ್ತು. ಭಟ್ರು ಹಾಗೂ ಕೃಷ್ಣಪ್ಪ ಮತ್ತೆ ಜೊತೆಯಾಗಿದ್ದು ಮತ್ತೆ ದಾಖಲೆ ಬರೆಯುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ಮುಂದಿನ ದಿನಗಳಲ್ಲಿ ಯೋಗರಾಜ್ ಭಟ್ ಈ ಬಗ್ಗೆ ಅಧಿಕೃತವಾಗಿ ಹೇಳಲಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.