ನ ಹಿ ಜ್ಞಾನೇನಸದೃಶಂ ತೆರೆಗೆ ಸಿದ್ಧ


Team Udayavani, Nov 2, 2022, 2:23 PM IST

ನ ಹಿ ಜ್ಞಾನೇನಸದೃಶಂ ತೆರೆಗೆ ಸಿದ್ಧ

ಸಿನಿಮಾ, ನಿರ್ದೇಶನ ಅನ್ನುವುದು ಕೆಲವರ ಪಾಲಿಗೆ ವೃತ್ತಿ ಬದುಕಾದರೆ, ಕೆಲವರ ಪಾಲಿನ ಆಸೆ. ಇನ್ನು ಕೆಲವರ ಪಾಲಿಗೆ ಅದೊಂದು ದೊಡ್ಡ ಕನಸು. ಆ ಕನಸನ್ನು ನನಸು ಮಾಡುವಲ್ಲಿ ತಮ್ಮೆಲ್ಲ ಜೀವನ, ವೃತ್ತಿಜೀವನವನ್ನು ಮೀಸಲಿಟ್ಟು, ಸಹನೆಯಿಂದ ತಾಳಿ ಇಂದು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವವರು ಯುವ ನಿರ್ದೇಶಕ ರಾಮ್‌. ಹೊಸಬರೇ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ “ನಹಿ ಜ್ಞಾನೇನ ಸದೃಶಂ’. ಸದ್ಯ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.

ಕಿರು ಚಿತ್ರ ನಿರ್ಮಿಸಿದ್ದ ನಿರ್ದೇಶಕರು ಅದನ್ನೇ ದೊಡ್ಡದಾಗಿ ಮಾಡಿ ಸಂಪೂರ್ಣ ಚಿತ್ರವನ್ನಾಗಿಸುವ ಛಲ ಹೊಂದಿದ್ದರು. “ಕಿರು ಚಿತ್ರ ಆಗದಿದ್ದಾಗ ಸಂಪೂರ್ಣ ಪ್ರಮಾಣದ ಚಿತ್ರ ಮಾಡಲು ಮುಂದಾದೆ. ನಮ್ಮದೇ “ಫ್ರೆಂಡ್ಸ್‌ ಫ‌ಂಡೆಡ್‌ ಫಿಲಂಸ್‌’ ಬ್ಯಾನರ್‌ನಲ್ಲಿ ಚಿತ್ರವನ್ನು ತಯಾರಿಸಲು ನಿರ್ಧರಿಸಿದೆ. ನನ್ನ ಸ್ನೇಹಿತರು ನನ್ನ ಕನಸಿಗೆ ಆಸರೆಯಾದರು. ಚಿತ್ರರಂಗಕ್ಕೆ ನಾನು ಹೊಸಬ ಮತ್ತೆ ಚಿತ್ರದಲ್ಲಿ ತಾಂತ್ರಿಕವಾಗಿ ಸಾಕಷ್ಟು ಅಂಶಗಳಿರುತ್ತವೆ. ನನಗೆ ಕಮರ್ಷಿಯಲ್‌ ಚಿತ್ರದ ಎಳೆ ತಿಳಿದಿಲ್ಲ. ತಾಂತ್ರಿಕವಾಗಿ ಅಷ್ಟು ದೊಡ್ಡ ಮಟ್ಟಕ್ಕೆ ಚಿತ್ರ ಆಗದಿದ್ದರೂ, ಸಿನಿಮಾ ಕಂಟೆಂಟ್‌ ಜನರಿಗೆ ಇಷ್ಟವಾಗಬೇಕು ಎನ್ನುವುದು ನನ್ನ ಆಲೋಚನೆಯಾಗಿತ್ತು. ಪ್ರೇಕ್ಷಕರಿಗೆ ಭಿನ್ನವಾಗಿ ಒಂದು ಉತ್ತಮ ಚಿತ್ರ ಕೊಡುವ ಆಸೆಯಿತ್ತು. ಹಾಗಾಗಿ ಮಕ್ಕಳ ಈ ಚಿತ್ರವನ್ನು ಮಾಡಿದೆ’ ಎನ್ನುತ್ತಾರೆ ರಾಮ್‌.

ಚಿತ್ರಕ್ಕೆ ಭಗವದ್ಗೀತೆಯ ಒಂದು ಸಾಲನ್ನೇ ಶೀರ್ಷಿಕೆಯಾಗಿರಿಸಿರುವ ನಿರ್ದೇಶಕರು ಹೇಳುವುದೆಂದರೆ, “ಚಿತ್ರಕ್ಕೆ ಸಾಕಷ್ಟು ಟೈಟಲ್‌ಗ‌ಳನ್ನು ಯೋಚಿಸಿದೆ. ಭಿನ್ನವಾಗಿರಬೇಕು ಎಂದು ಏನೇನೊ ಹೆಸರಿಟ್ಟೆ. ಆದರೆ, ಯಾವುದು ಸೂಕ್ತ ಎನಿಸಿರಲಿಲ್ಲ. ಒಂದು ದಿನ ಬಳ್ಳಾರಿಯ ನಾನು ಕಲಿತ ಇಂಜಿನಿಯರಿಂಗ್‌ ಕಾಲೇಜ್‌ಗೆ ಹೋಗಿದ್ದೆ. ಅಲ್ಲಿ “ನಹಿ ಜ್ಞಾನೇನ ಸದೃಶಂ’ ಎಂಬ ಬೋರ್ಡ್‌ ಇತ್ತು. ಆಗ ಜ್ಞಾನದ ಕುರಿತಾಗಿಯೇ ಮಾಡುತ್ತಿರುವ ಚಿತ್ರ ನಮ್ಮದು, ಹಾಗಾಗಿ ಇದೇ ಸೂಕ್ತವಾದ ಟೈಟಲ್‌ ಎಂದು ಅನಿಸಿತು. ಮಕ್ಕಳಿಗೆ ವಿದ್ಯಾಭ್ಯಾಸದ ಕುರಿತು ನಿಜವಾಗಿ ಆಸಕ್ತಿ ಇರುವುದಿಲ್ಲ. ಒತ್ತಡ, ಕಾಟಾಚಾರಕ್ಕೆ ಓದುತ್ತಾರೆ. ಆದರೆ ಈ ಚಿತ್ರ ನೋಡಿದ ನಂತರ ಆಸಕ್ತಿಯಿಂದ, ಖುಷಿಯಾಗಿ ಓದುತ್ತಾರೆ ಎನ್ನುವುದು ನನ್ನ ಭರವಸೆ. ಅದಕ್ಕಾಗಿಯೇ ಶಿಕ್ಷಣ ಜೊತೆಗೆ ಮನರಂಜನೆ ಎಂಬ ಟ್ಯಾಗ್‌ ಲೈನ್‌ ಕೂಡಾ ನೀಡಿದ್ದೇವೆ. ಇದೇ ಚಿತ್ರದ ವಿಶೇಷತೆ’ ಎಂಬುದು ನಿರ್ದೇಶಕರ ಮಾತು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.