![ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ](https://www.udayavani.com/wp-content/uploads/2024/06/mamatha-1-415x277.jpg)
ಚಲನಚಿತ್ರ ನಿರ್ದೇಶಕರ ಸಂಘಕ್ಕೆ ನಾಗೇಂದ್ರ ಪ್ರಸಾದ್ ಅವಿರೋಧ ಆಯ್ಕೆ
Team Udayavani, Jul 10, 2017, 10:50 AM IST
![Nagendra-Prasad-(1).jpg](https://www.udayavani.com/wp-content/uploads/2017/07/10/Nagendra-Prasad-(1)-555x465.jpg)
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ನಾಗೇಂದ್ರಪ್ರಸಾದ್ ಅವಿರೋಧ ಆಯ್ಕೆಯಾಗಿದ್ದಾರೆ. ಭಾನುವಾರ ಸಂಘದ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಧ್ಯಾಹ್ನ ಚುನಾವಣೆ ನಡೆಸಬೇಕು ಎಂದು ಮಾತುಕತೆ ನಡೆದಿತ್ತು. ಆದರೆ, ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರ ಒಮ್ಮತದ ತೀರ್ಮಾನದ ಮೇರೆಗೆ ನಾಗೇಂದ್ರಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನಾಗೇಂದ್ರಪ್ರಸಾದ್ ಈ ಹಿಂದೆ ಸಂಘದಲ್ಲಿ ಎರಡು ಅವಧಿಗೆ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಗೇಂದ್ರಪ್ರಸಾದ್, ಒಂದು ವರ್ಷದ ಅವಧಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಲು ನಿರ್ಧರಿಸಿದ್ದಾರೆ.
ನಿರ್ದೇಶಕರ ಸಂಘಕ್ಕೆ ಸ್ವಂತ ಕಟ್ಟಡ ಮಾಡುವುದು, ಕಾನ್ಫಿಡಾ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು, ಹಿರಿಯ ನಿರ್ದೇಶಕರಿಗೆ ಆರ್ಥಿಕ ಭದ್ರತೆ ಒದಗಿಸುವುದು, ಹೊಸ ನಿರ್ದೇಶಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವುದು ಸೇರಿದಂತೆ ಹೊಸ ಯೋಜನೆ ರೂಪಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅಂದಹಾಗೆ, ನಾಗೇಂದ್ರ ಪ್ರಸಾದ್ ನೇತೃತ್ವದ ಸಂಘಕ್ಕೆ ನೂತನ ಪದಾಧಿಕಾರಿಗಳನ್ನೂ ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಜೋಸೈಮನ್, ಮುರಳಿ ಮೋಹನ್, ಕಾರ್ಯದರ್ಶಿಗಳಾಗಿ ದಯಾಳ್ ಪದ್ಮನಾಭ, ಸುನೀಲ್ ಪುರಾಣಿಕ್, ಖಜಾಂಚಿಯಾಗಿ ಕೆ.ಎನ್.ವೈದ್ಯನಾಥ್ ಆಯ್ಕೆಯಾದರೆ, ಸಮಿತಿಯಲ್ಲಿ ಚಂದ್ರಹಾಸ್, ಮುಸ್ಸಂಜೆ ಮಹೇಶ್, ಶಿವಕುಮಾರ್, ಶಾಂತಕುಮಾರ್, ಗುರುಪ್ರಸಾದ್, ಅನಂತ್ರಾಜು, ಮಳವಳ್ಳಿ ಸಾಯಿಕೃಷ್ಣ, ಬೂದಾಳ್ ಕೃಷ್ಣಮೂರ್ತಿ, ರಿಚರ್ಡ್ ಕ್ಯಾಸ್ಟಲಿನೋ ಇದ್ದಾರೆ.
ಟಾಪ್ ನ್ಯೂಸ್
![ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ](https://www.udayavani.com/wp-content/uploads/2024/06/mamatha-1-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ](https://www.udayavani.com/wp-content/uploads/2024/06/mamatha-1-150x100.jpg)
Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್
![6-honnavar](https://www.udayavani.com/wp-content/uploads/2024/06/6-honnavar-150x90.jpg)
Tata Steel ಅಖಿಲ ಭಾರತ ವಿಶೇಷ ಚೇತನರ ಚೆಸ್ ಟೂರ್ನಿ; ಹೊನ್ನಾವರದ ಸಮರ್ಥ ಚಾಂಪಿಯನ್
![5-kushtagi](https://www.udayavani.com/wp-content/uploads/2024/06/5-kushtagi-150x90.jpg)
Kushtagi: ಕೋತಿ ದಾಳಿಗೆ ಊರಿನ 15 ಜನರಿಗೆ ಗಾಯ; ಕೋತಿ ಸೆರೆಹಿಡಿಯಲು ಮುಂದಾದ ಅರಣ್ಯ ಇಲಾಖೆ
![Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ](https://www.udayavani.com/wp-content/uploads/2024/06/bjp-39-150x94.jpg)
Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ
![Mumbai-Nagpur ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ](https://www.udayavani.com/wp-content/uploads/2024/06/mumbai-2-150x84.jpg)
Mumbai-Nagpur ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.