![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 11, 2022, 12:20 PM IST
ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಬೈಪಾಸ್ ರೋಡ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಇದೇ ಜುಲೈ 29ಕ್ಕೆ “ಬೈಪಾಸ್ ರೋಡ್’ ಅನ್ನು ಥಿಯೇಟರ್ಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
“ಎಂ.ಬಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಭರತ್ ರಾಜ್ ಎಂ, ಮಹೇಶ್ ಬಿ.ಎನ್ ನಿರ್ಮಿಸಿರುವ “ಬೈಪಾಸ್ ರೋಡ್’ ಸಿನಿಮಾಕ್ಕೆ ಶ್ರೀನಿವಾಸ್ ಎಸ್. ಬಿ ನಿರ್ದೇಶನವಿದೆ. ಚಿತ್ರದಲ್ಲಿ ಭರತ್ ಕುಮಾರ್ ನಾಯಕನಾಗಿದ್ದು, ಉಳಿದಂತೆ ತಿಲಕ್, ನೀತೂ ಗೌಡ, ನೇಹಾ ಸಕ್ಸೇನಾ, ಉದಯ್, ಮಾಸ್ಟರ್ ಆನಂದ್, ತಬಲನಾಣಿ, ಉಗ್ರಂ ಮಂಜು ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಬೈಪಾಸ್ ರೋಡ್’ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಿವಾಸ್ ಎಸ್. ಬಿ, “ಇದೊಂದು ಸಸ್ಪೆನ್ಸ್ – ಥ್ರಿಲ್ಲರ್ ಸಬೆjಕ್ಟ್ ಸಿನಿಮಾ. ಒಂದು ಜೋಡಿ ಹನಿಮೂನ್ ಗೆ ಟ್ರಾವೆಲ್ ಮಾಡುತ್ತಿರುವಾಗ ಅನಿರೀಕ್ಷಿತ ಘಟನೆ ನಡೆಯುತ್ತದೆ. ಅದು ಮುಂದೆ ಬೇರೆ ಬೇರೆ ತಿರುವುಗಳನ್ನು ಪಡೆದುಕೊಂಡು ಕೊನೆಗೆ ಯಾವ ಹಂತಕ್ಕೆ ಹೋಗುತ್ತದೆ ಅನ್ನೋದೆ ಸಿನಿಮಾದ ಒಂದು ಎಳೆ. ಇಡೀ ಸಿನಿಮಾದಲ್ಲಿ ಪ್ರತಿ ಸನ್ನಿವೇಶದಲ್ಲೂ ಆಡಿಯನ್ಸ್ ನಿರೀಕ್ಷಿಸಲಾರದಂಥ ಒಂದಷ್ಟು ಟರ್ನ್ಸ್, ಟ್ವಿಸ್ಟ್ಗಳು ಇವೆ. ಪ್ರೇಕ್ಷಕರ ಪ್ರತಿ ಕುತೂಹಲಕ್ಕೂ ಕ್ಲೈಮ್ಯಾಕ್ಸ್ನಲ್ಲಿ ಉತ್ತರ ಸಿಗುತ್ತದೆ’ ಎಂದು ಕಥಾಹಂದರ ಬಿಚ್ಚಿಡುತ್ತಾರೆ ನಿರ್ದೇಶಕರು.
“ಬೈಪಾಸ್ ರೋಡ್’ ಬಿಡುಗಡೆಯ ಬಗ್ಗೆ ಮಾತನಾಡುವ ನಿರ್ಮಾಪಕ ಭರತ್ ರಾಜ್, “ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ಬೈಪಾಸ್ ರೋಡ್’ ಬಿಡುಗಡೆಯಾಗಿರಬೇಕಿತ್ತು. ಆದ್ರೆ ಕೋವಿಡ್ನಿಂದಾಗಿ ಸಿನಿಮಾ ಬಿಡುಗಡೆ ತಡವಾಯ್ತು. ಈಗ ಎಲ್ಲವೂ ಮೊದಲಿನಂತೆ ಸಹಜ ಸ್ಥಿತಿಗೆ ಬರುತ್ತಿರುವುದರಿಂದ, ಸಿನಿಮಾ ಬಿಡುಗಡೆಗೆ ತಯಾರಾಗಿದ್ದೇವೆ. ಈಗಾಗಲೇ ಸಿನಿಮಾದ ಪ್ರಮೋಶನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಸಿನಿಪ್ರಿಯರು, ಇಂಡಸ್ಟ್ರಿಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಇದೇ ಜು. 29ಕ್ಕೆ “ಬೈಪಾಸ್ ರೋಡ್’ ಅನ್ನು ಆಡಿಯನ್ಸ್ ಮುಂದೆ ತರಲಿದ್ದೇವೆ’ ಎನ್ನುತ್ತಾರೆ.
ಇನ್ನು ಬಹುಸಮಯದ ನಂತರ ನಟಿ ನೇಹಾ ಸಕ್ಸೇನಾ, “ಬೈಪಾಸ್ ರೋಡ್’ ಮೂಲಕ ಮತ್ತೆ ಸ್ಯಾಂಡಲ್ವುಡ್ಗೆ ಮರಳಿದ್ದಾರೆ. “ಬೈಪಾಸ್ ರೋಡ್’ ಸಿನಿಮಾದ ಬಗ್ಗೆ ಮಾತನಾಡುವ ನೇಹಾ, “ಇದರಲ್ಲಿ ನಾನು ಬೋಲ್ಡ್ ಆಗಿರುವಂಥ ಕಾರ್ಪೋರೆಟ್ ಗರ್ಲ್ ಕ್ಯಾರೆಕ್ಟರ್ ಮಾಡಿದ್ದೇನೆ. ಮೇಲ್ನೋಟಕ್ಕೆ ಇದೊಂದು ಸಸ್ಪೆನ್ಸ್ – ಥ್ರಿಲ್ಲರ್ ಅನಿಸಿದ್ದರೂ, ಇದರಲ್ಲಿ ಲವ್, ರೊಮ್ಯಾನ್ಸ್, ಎಮೋಷನ್ಸ್ ಎಲ್ಲವೂ ಇದೆ’ ಎನ್ನುತ್ತಾರೆ
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.