ತಮಿಳು ಚಿತ್ರದಲ್ಲಿ ವಿಲನ್ ಆಗಿ ನಟಿಸೋದಿಲ್ಲ!
ಅಂತೆ-ಕಂತೆ ಸುದ್ದಿಗೆ ಸುದೀಪ್ ಸ್ಪಷ್ಟನೆ
Team Udayavani, Dec 30, 2019, 7:04 AM IST
“ರಾಂಗ್ ನ್ಯೂಸ್…’ ಇದು ಸುದೀಪ್ ಮಾಡಿರುವ ಟ್ವೀಟ್. ಹೌದು, ಸುದೀಪ್ “ಆ ಸುದ್ದಿ ಸುಳ್ಳು’ ಅಂತ ಹೇಳ್ಳೋಕೆ ಕಾರಣ, ತಮಿಳು ಚಿತ್ರವೊಂದರಲ್ಲಿ ಸುದೀಪ್ ಅವರು ವಿಲನ್ ಆಗಿ ನಟಿಸಲಿದ್ದಾರೆ ಎಂದು ಹರಿದಾಡಿದ ಸುದ್ದಿಗೆ. ಅಷ್ಟಕ್ಕೂ ಸುದೀಪ್ ಬಗ್ಗೆ ಬಂದ ಸುದ್ದಿ ಏನು ಗೊತ್ತಾ? ಕಾಲಿವುಡ್ ನಟ ಸಿಲಂಬರಸನ್ ಅಭಿನಯದ “ಮಾನಾಡು’ ಚಿತ್ರದಲ್ಲಿ ಸುದೀಪ್ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು.
ಅಷ್ಟೇ ಅಲ್ಲ, ಆ ಚಿತ್ರದ ನಿರ್ದೇಶಕರು ಈಗಾಗಲೇ ಸುದೀಪ್ ಅವರನ್ನು ಭೇಟಿ ಮಾಡಿ, ಕಥೆಯನ್ನು ಹೇಳಿದ್ದು, ಆ ಕಥೆ, ಪಾತ್ರವನ್ನು ಸುದೀಪ್ ಕೂಡ ಒಪ್ಪಿದ್ದಾರಂತೆ ಎಂಬ ಮಾತುಗಳು ಹರಿದಾಡಿದ್ದವು. ಬಹುತೇಕರು ಆ ಸುದ್ದಿ ನಿಜ ಇರಬಹುದೇನೋ ಅಂತಂದುಕೊಂಡಿದ್ದರು. ಈ ಸುದ್ದಿ ಸುದೀಪ್ ಅವರ ಕಿವಿಗೆ ಬಿದ್ದದ್ದೇ ತಡ, ಅವರು, ತಮ್ಮ ಟ್ವಿಟ್ಟರ್ನಲ್ಲಿ “ರಾಂಗ್ ನ್ಯೂಸ್’ ಅಂತ ಬರೆದುಕೊಂಡಿದ್ದಾರೆ.
Wrong news…. https://t.co/hgNHGinPUV
— Kichcha Sudeepa (@KicchaSudeep) December 27, 2019
ಒಂದು ಗಾಳಿ ಸುದ್ದಿ ಎಷ್ಟು ಜೋರಾಗಿ ಹರಡಿತ್ತೋ, ಅಷ್ಟೇ ವೇಗವಾಗಿಯೂ, ಸುದೀಪ್ ಅವರು ಮಾಡಿರುವ ಟ್ವೀಟ್ ಕೂಡ ತಲುಪಿದೆ. ‘ಮಾನಾಡು’ ಚಿತ್ರದಲ್ಲಿ ವಿಲನ್ ಆಗಿ ನಟಿಸಲು ಒಪ್ಪಿಕೊಂಡಿರುವ ಸುದ್ದಿ ಸುಳ್ಳು ಎಂದು ಹೇಳುವ ಮೂಲಕ ಎಲ್ಲಾ ಅಂತೆ-ಕಂತೆಗಳಿಗೂ ಸುದೀಪ್ ತೆರೆ ಎಳೆದಿದ್ದಾರೆ. ಅಂದಹಾಗೆ, ಸುದೀಪ್ ಈಗಾಗಲೇ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವುದುಂಟು. ನೆಗೆಟಿವ್ ಪಾತ್ರ ಮೂಲಕ ಗಮನಸೆಳೆದಿದ್ದಾರೆ.
ಅವರು “ದಬಾಂಗ್ 3′ ಚಿತ್ರದಲ್ಲೂ ಮೊದಲ ಸಲ ಸಲ್ಮಾನ್ಖಾನ್ ಅವರ ಎದುರು ವಿಲನ್ ಆಗಿ ಆರ್ಭಟಿಸಿದ್ದರು. ಅದರ ಬೆನ್ನ ಹಿಂದೆಯೇ, ತಮಿಳು ಚಿತ್ರದಲ್ಲಿ ಸುದೀಪ್ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಗಾಳಿ ಸುದ್ದಿಗೆ ಸುದೀಪ್ ಅವರೇ ತೆರೆ ಎಳೆಯುವ ಮೂಲಕ, ತಾವು ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಸುದೀಪ್ ಅಭಿನಯದ “ಕೋಟಿಗೊಬ್ಬ-3′ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.
ಈ ನಡುವೆ ಸುದೀಪ್ ಅವರು “ಬಿಗ್ಬಾಸ್’ ರಿಯಾಲಿಟಿ ಶೋನಲ್ಲೂ ಬಿಝಿಯಾಗಿದ್ದಾರೆ. ಇದು ಮುಗಿದ ಬಳಿಕ ಸುದೀಪ್ ಅವರು ನಿರ್ದೇಶನಕ್ಕಿಳಿಯಲಿದ್ದಾರೆ ಎಂಬ ಮಾತುಗಳೂ ಇವೆ. ಈ ಮಧ್ಯೆ, ಜಾಕ್ಮಂಜು ನಿರ್ಮಾಣದ ಅನೂಪ್ ಭಂಡಾರಿ ನಿದೇಶನದ ಚಿತ್ರವೂ ಸೆಟ್ಟೇರಬೇಕಿದೆ. ಮೊದಲು ನಟನೆ ಮಾಡುತ್ತಾರೋ ಅಥವಾ ತಮ್ಮ ನಿರ್ದೇಶನದ ಜೊತೆಯಲ್ಲಿ ನಟಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.