ಸ್ಟೀಫ‌ನ್‌ರಿಂದ ಹೊಸ ಪ್ರಯೋಗ


Team Udayavani, Sep 6, 2017, 10:38 AM IST

Stephen-Prayog-10.jpg

ಬೆಂಗಳೂರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹಲವು ಶಾಲೆ, ಕಾಲೇಜುಗಳು ಶುರುವಾಗಿವೆ. ನಟನೆ ಶಾಲೆ ಇರಬಹುದು, ನೃತ್ಯ ಶಾಲೆಯಾಗಿರಬಹುದು, ಸಾಹಸ, ತಬಲಾ, ಸಂಕಲನ  ಹೀಗೆ ಹಲವು ವಿಭಾಗಕ್ಕೆ ಸಂಬಂಧಿಸಿದ ಶಾಲೆಗಳಿವೆ. ಸಂಗೀತ ಶಾಲೆಗಳೂ ಇವೆ. ಆದರೆ, ಅಕಾಡೆಮಿಕ್‌ ಆಗಿ ಒಂದೊಳ್ಳೆಯ ಫಿಲ್ಮ್ಮ್ಯೂಸಿಕ್‌ ಕಾಲೇಜ್‌ ಅಗತ್ಯವಿತ್ತು. ಅಂಥದ್ದೊಂದು ಸಂಗೀತಕ್ಕೆ ಸಂಬಂಧಿಸಿದ ಕಾಲೇಜ್‌ವೊಂದನ್ನು ಸಂಗೀತ ನಿರ್ದೇಶಕ ಸ್ಟೀಫ‌ನ್‌ ಪ್ರಯೋಗ್‌ ಅವರು ಮಾಡಿದ್ದಾರೆ.

ಹೌದು, ಕನ್ನಡದಲ್ಲಿ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಸ್ಟೀಫ‌ನ್‌ ಪ್ರಯೋಗ್‌ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸ್ಟೀಫ‌ನ್‌ ಕಾಲೇಜ್‌ ಆಫ್ ಮ್ಯೂಸಿಕ್‌ ಎಂಬ ಕಾಲೇಜ್‌ವೊಂದನ್ನು ಕಳೆದ ಜೂನ್‌ನಲ್ಲಿ ಶುರುಮಾಡಿದ್ದಾರೆ. ಚೆನ್ನೈನಲ್ಲಿ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರ ಕಾಲೇಜ್‌ ಬಿಟ್ಟರೆ, ಬೆಂಗಳೂರಲ್ಲಿ ಮ್ಯೂಸಿಕಲಿ, ಒಂದೊಳ್ಳೆಯ ಕಾಲೇಜ್‌ ಅಂತ ಗುರುತಿಸಿಕೊಂಡಿರುವ ಹೆಗ್ಗಳಿಕೆ ಇದಕ್ಕಿದೆ.

ಇಲ್ಲಿ ಸುಮ್ಮನೆ ಸಂಗೀತ ಕಲಿಸಿಕೊಡುವುದಿಲ್ಲ. ಯಾಕೆಂದರೆ, ಎಲ್ಲವೂ ಪಫೆìಕ್ಟ್ ಆಗಿರಬೇಕು ಎಂಬ ಉದ್ದೇಶದಿಂದ ಫೌಂಡೇಷನ್‌ ಕೋರ್ಸಸ್‌ ಇಟ್ಟುಕೊಂಡು ಶುರುಮಾಡಿರುವ ಮ್ಯೂಸಿಕ್‌ ಕಾಲೇಜ್‌ ಇದು. ತಾನೊಬ್ಬ ಪರಿಪೂರ್ಣ ಸಂಗೀತದ ಪ್ರಾಕಾರಗಳನ್ನು ಕಲಿಯಬೇಕು, ಒಳ್ಳೆಯ ಮ್ಯೂಸಿಷಿಯನ್‌ ಅಂತ ಗುರುತಿಸಿಕೊಳ್ಳಬೇಕು ಎಂದು ಇಚ್ಛಿಸುವವರಿಗೆ ಇಲ್ಲಿ ಒಳ್ಳೆಯ ಕೋರ್ಸಸ್‌ಗಳಿವೆ. ಸಂಗೀತದಲ್ಲಿ ಹಲವು ವಿಧಗಳಿವೆ. ಇಲ್ಲೂ ಸಹ ವೆಸ್ಟ್ರನ್‌ ಮ್ಯೂಸಿಕ್‌ ಮತ್ತು ಥೇರಿ ಹೇಳಿಕೊಡಲಾಗುವುದು.

ಕೀ ಬೋರ್ಡ್‌, ಗಿಟಾರ್‌, ಪಿಯಾನೋ ಇವುಗಳ ಸಿಲಬಸ್‌ ಕೂಡ ಇದೆ. ಅವುಗಳ ಕೋರ್ಸ್‌ ಮುಗಿದ ಮೇಲೆ ಎಕ್ಸಾಂ ಕೂಡ ನಡೆಸಲಾಗುವುದು. ಅದಷ್ಟೇ ಅಲ್ಲ, ತಾನು ಹಿನ್ನೆಲೆ ಗಾಯಕ ಆಗಬೇಕೆಂದರೂ, ಅದಕ್ಕೆ ಆರು ತಿಂಗಳ ಕೋರ್ಸ್‌ ಕೂಡ ಇದೆ. ಇದರ ಜತೆಗೆ ಸ್ಟೀಫ‌ನ್‌ ತಮ್ಮ “ಸ್ಟೀಫ‌ನ್‌ ಕಾಲೇಜ್‌ ಆಫ್ ಮ್ಯೂಸಿಕ್‌’ ಕಾಲೇಜ್‌ನಲ್ಲಿ ಪ್ರೊಡಕ್ಷನ್‌ ಹೌಸ್‌ ಕೂಡ ಮಾಡಿದ್ದಾರೆ. ಅದರಡಿ, ಸಿನಿಮಾಗಳು, ಧಾರಾವಾಹಿಗಳು, ಕಿರುಚಿತ್ರಗಳು ಹೀಗೆ ಇನ್ನಿತರೆ ಸಾಕ್ಷ್ಯಚಿತ್ರಗಳಿಗೂ ಇಲ್ಲಿ ಹಿನ್ನೆಲೆ ಸಂಗೀತ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ.

ಅದೊಂದು ಕಂಪ್ಲೀಟ್‌ ಹೋಮ್‌ ಸ್ಟುಡಿಯೋವಾಗಿದ್ದು, ಮ್ಯೂಸಿಕ್ಸ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳೂ ಇಲ್ಲಿ ನಡೆಯಲಿವೆ. ಮುಖ್ಯವಾಗಿ ಸಂಗೀತಕ್ಕೆ ಅರೇಂಜ್‌ಮೆಂಟ್ಸ್‌ ಕೆಲಸಗಳು ಇಲ್ಲಿ ನಡೆಯಲಿವೆ. ಸದ್ಯಕ್ಕೆ ಈ ಕಾಲೇಜಿನಲ್ಲಿ 80 ವಿದ್ಯಾರ್ಥಿಗಳು ಸಂಗೀತ ಕಲಿಯುತ್ತಿದ್ದಾರೆ. ಒಂದೊಂದು ಕೋರ್ಸ್‌ಗೆ ತಕ್ಕಂತೆ ಆಯಾ ತರಗತಿಗಳು ನಡೆಯುತ್ತವೆ. ಗಿಟಾರ್‌, ಕೀ ಬೋರ್ಡ್‌, ಪಿಯಾನೋ ಇವುಗಳಿಗೆ ವಾರಕ್ಕೊಂದು ತರಗತಿ ಇದ್ದು, ಪ್ರಯೋಗದ ಜತೆಗೆ ಪಾಠಗಳೂ ನಡೆಯುತ್ತವೆ. ಇನ್ನು, ಅಕಾಡೆಮಿ ಕೋರ್ಸಸ್‌ಗಳಿಗೆ ವಾರಕ್ಕೆ ಎರಡು ತರಗತಿಗಳು ನಡೆಯಲಿವೆ.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.